RAIN | ಚಾಮರಾಜನಗರದಲ್ಲಿ ಬೆಳ್ಳಂಬೆಳಿಗ್ಗೆ ಮುಂಗಾರು ಆರ್ಭಟ
ಚಾಮರಾಜನಗರ : ಗಡಿ ಜಿಲ್ಲೆಯಲ್ಲಿ 18 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇಂದು ಮುಂಜಾನೆಯಿಂದಲೇ ಚಾಮರಾಜನಗರದಾದ್ಯಂತ ಮುಂಗಾರು ಮಳೆ ಆರ್ಭಟಿಸುತ್ತಿದೆ.
ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಜನತೆ ಹೈರಾಣಾಗಿದ್ದಾರೆ.
ನಿರಂತರ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ದಿನಿನತ್ಯ ಪರದಾಡುವಂತಾಗಿದೆ.
![RAIN Early Monsoon in Chamarajanagar saaksha tv](http://saakshatv.com/wp-content/uploads/2022/07/chama-300x146.jpg)
ಇನ್ನು ರೈತರಂತೂ ನಿರಂತರ ಮಳೆಗೆ ಬೇಸತ್ತು ಹೋಗಿದ್ದಾರೆ.
ಬಿಸಿಲು ಬೀಳದ ಕಾರಣ ಬೆಳೆಗಳಿಗೆ ರೋಗ ಆವರಿಸಿಕೊಂಡಿದೆ.
ಕಟಾವು ಹಂತದಲ್ಲಿರುವ ಬೆಳೆಗಳಾದ ಕಬ್ಬು ,ಬಾಳೆ ಈರುಳ್ಳಿ ಬೆಳೆದ ರೈತರಂತೂ ಮಳೆಗೆ ಹಿಡಿಶಾಪ ಹಾಕುವಂತಾಗಿದೆ.
ಇನ್ನು ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ.
ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.