Raja Pateria: ಸಂವಿಧಾನದ ರಕ್ಷಣೆಗಾಗಿ ಮೋದಿಯನ್ನ ಕೊಲ್ಲಬೇಕು ಎಂದ ಕಾಂಗ್ರೆಸ್ ನಾಯಕ…
ಸಂವಿಧಾನ ರಕ್ಷಣೆ ಮಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಬೇಕು, ಇದಕ್ಕೆ ಸಿದ್ಧರಾಗಿ ಎಂದು ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದಕ್ಕೆ ಆಗಮಿಸಿ ಮಾತನಾಡಿದ ರಾಜ ಪಟೇರಿಯಾ “ಮೋದಿ ದೇಶದಲ್ಲಿ ಚುನಾವಣೆಯನ್ನೇ ಮುಗಿಸಿಬಿಡುತ್ತಾರೆ. ಮೋದಿಯವರು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ದೇಶವನ್ನು ಒಡೆಯುತ್ತಾರೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಜೀವನ ಅಪಾಯದಲ್ಲಿದೆ. ಹಾಗಾಗಿ, ಸಂವಿಧಾನವನ್ನು ರಕ್ಷಿಸಲು, ನಾವು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಬೇಕು” ”ಎಂದು ರಾಜಾ ಪಟಾರಿಯಾ ಹೇಳಿದರು.
ಈ ಹೇಳಿಕೆ ವೈರಲ್ ಆಗಿ, ಟೀಕೆಗಳು ಕೇಳಿ ಬಂದ ನಂತನರ ಹೆಚ್ಚೆತ್ತುಕೊಂಡ ರಾಜಾ ಪಟಾರಿಯಾ ತಮ್ಮ ಹೇಳಿಕೆಯನ್ನ ತಿದ್ದಲು ಪ್ರಯತ್ನಿಸಿದ್ದಾರೆ. ಕೊಲ್ಲುವುದು ಎಂದರೆ ಅವರನ್ನ ಸೋಲಿಸುವುದು ಎಂಬ ಉದ್ದೇಶ ಎಂದು ತಿಳಿಸಿದ್ದಾರೆ.
ಈ ಹೇಳಿಕೆ ನಂತರ ಕಾಂಗ್ರೆಸ್ ಪಕ್ಷದ ಮೇಲೆ ಟೀಕೆಗಳ ದಾಳಿ ನಡೆಸಲಾಗಿದೆ. ರಾಹುಲ್ ಜೋಡೋ ಯಾತ್ರೆ ವೇಳೆ ಹಲವು ಬಿಜೆಪಿ ನಾಯಕರು ರಾಜಾ ಪಟಾರಿಯಾ ಬಂಧನಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ರಾಜಾ ಪಟಾರಿಯಾ ವಿರುದ್ಧ ಪ್ರಕರಣ ದಾಖಲಿಸುವಂತೆ ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಇದು ಅಕ್ಷಮ್ಯ ಅಪರಾಧ’ ಎಂದು ಕೇಂದ್ರ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದಾರೆ.
Raja Pateria: Congress leader says that Modi should be killed to protect the constitution…