ಚೀನಾ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ
ದಕ್ಷಿಣ ಚೈನಾದಲ್ಲಿ ನಿನ್ನೆ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಸದನ ಶ್ರದ್ಧಾಂಜಲಿ ಅರ್ಪಿಸಿತು. 133 ಜನರನ್ನ ಹೊತ್ತೊಯ್ಯುತ್ತಿದ್ದ ಚೀನಾದ ಈಸ್ಟರ್ನ್ ಏರ್ಲೈನ್ಸ್ ವಿಮಾನ ಇದ್ದಕ್ಕಿದ್ದಂತೆ ಪತನಗೊಂಡಿತ್ತು. ರಾಜ್ಯಸಭಾಸದಸ್ಯರು ಎದ್ದು ನಿಂತು ಮೌನ ಆಚರಿಸಿದರು.
ಅಂತರ್ಜಲ ರಕ್ಷಣೆ ಮತ್ತು ಶುದ್ಧ ಜಲಮೂಲಗಳ ಸುಸ್ಥಿರ ನಿರ್ವಹಣೆ ಕುರಿತು ಜನಪ್ರತಿನಿಧಿಗಳು ಜಾಗೃತಿ ಮೂಡಿಸಬೇಕು ಎಂದು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ. ಸದನದ ಕಲಾಪ ಇಂದು ಆರಂಭಗೊಳ್ಳುತ್ತಿದ್ದಂತೆಯೇ ವಿಶ್ವ ಜಲ ದಿನಾಚರಣೆ ಉಲ್ಲೇಖಿಸಿದ ಸಭಾಪತಿ, ಸುಸ್ಥಿರ ಕೃಷಿಗಾಗಿ ಜಲ ಮಾಲಿನ್ಯ ಕಡಿಮೆ ಮಾಡಿ, ಅಂತರ್ಜಲ ರಕ್ಷಿಸುವುದು ಅತ್ಯಗತ್ಯ ಎಂದರು.
ಬಳಿಕ ಶೂನ್ಯವೇಳೆ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಇಂಧನ ಬೆಲೆ ಏರಿಕೆ ವಿರುದ್ಧ ಗದ್ದಲ ಉಂಟು ಮಾಡಿ, ಘೋಷಣೆ ಕೂಗತೊಡಗಿದರು. ಕಲಾಪಕ್ಕೆ ಅನುವು ಮಾಡಿಕೊಡುವಂತೆ ಸಭಾಪತಿ ಅವರು ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಲ್ಲದಿದ್ದಾಗ ಸದನವನ್ನು 12 ಗಂಟೆಗೆ ಮುಂದೂಡಲಾಯಿತು.
Rajya Sabha expresses condolences over crash of China Eastern Airlines