ಖಾಸಗಿ ವಾಹಿನಿಯಿಂದ ರಕ್ಷಿತ್ ಶೆಟ್ಟಿ ತೇಜೋವಧೆ : ಸಿಂಪಲ್ ಸ್ಟಾರ್ ಪ್ರತಿಕ್ರಿಯೆ
ಖಾಸಗಿ ವಾಹಿನಿ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ತೇಜೋವಧೆ ಮಾಡಿದ ಬೆನ್ನಲ್ಲೇ ಆಕ್ರೋಶ ಹೊರಹಾಕಿದ್ದ ರಕ್ಷಿತ್ ಜುಲೈ 11ಕ್ಕೆ ಉತ್ತರಿಸೋದಾಗಿ ತಿಳಿಸಿದ್ರೂ ಅದೇ ರೀತಿ 7 ವರ್ಷಗಳ ನಂತರ ಮತ್ತೆ ನಿರ್ದೇಶಕ್ಕೆ ಮರಳುವ ಜೊತೆಗೆ ಅದೇ ಸಿನಿಮಾದಲ್ಲಿ ಅಂದ್ರೆ ಹೊಂಬಾಳೆ ಫಿಲಮ್ಸ್ ಬ್ಯಾನರ್ ನಡಿ ಮೂಡಿಬರುತ್ತಿರುವ 10ನೇ ಸಿನಿಮಾಗೆ ನಾಯಕನಾಗಿ ಘೋಷಣೆಯಾಗಿದೆ.. ಈ ಮೂಲಕ ರಕ್ಷಿತ್ ಮಾತುಗಳಿಗಿಂತ , ಕೆಲಸಗಳಿಂದ ಸಾಬೀತು ಮಾಡಿದ್ದಾರೆ.
ಹೌದು ಈ ಸಿಸಿನಿಗೆ “ರಿಚರ್ಡ್ ಆಂಟಿನಿ” ಎಂಬ ಟೈಟಲ್ ಇಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀರುವ ರಕ್ಷಿತ್ ನಾನು ಇಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಬಂದಿದ್ದು, ಯಾರೋ ಏನೋ ಕಾರ್ಯಕ್ರಮ ಮಾಡ್ತಾರೆ ಅಂತ ಉತ್ತರ ಕೊಟ್ಟುಕೊಂಡು ಕೂರಲು ಆಗಲ್ಲ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ತನ್ನ ತೇಜೋವಧೆ ಕಾರ್ಯಕ್ರಮಕ್ಕೆ ರಕ್ಷಿತ್ ಇಂದು ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ರು. ಈ ವೇಳೆ ಮಾತನಾಡಿ ಕಾರ್ಯಕ್ರಮ ನೋಡಿ ರಿಷಬ್ ಶೆಟ್ಟಿ ಕಾಲ್ ಮಾಡಿ ಹೇಳಿದ, ಈ ರೀತಿ ಕಾರ್ಯಕ್ರಮ ಬಂದಿದೆ ಎಂದು. ಇದೇನು ಹೊಸದಲ್ಲ ಎಂದೆ. ಆದರೆ ಇದಕ್ಕೆ ರಿಯಾಕ್ಟ್ ಮಾಬೇಕಾಗುತ್ತೆ ಅಂತ ಹೇಳಿದ. ನಂತರ ಪ್ರಮೋದ್ ಶೆಟ್ಟಿ ಕಾಲ್ ಮಾಡಿದ್ರು. ತುಂಬಾ ಸಿಟ್ಟಿನಲ್ಲಿ ಇದ್ರು. ಬಳಿಕ ನಾನು ಲೀಗಲ್ ಆಗಿ ಮಾಡೋಣ ಎಂದು ಹೇಳಿ ಸುಮ್ಮನಾದೆ. ನಾನು ಸ್ವಲ್ಪ ಕಾರ್ಯಕ್ರಮ ನೋಡಿದೆ ಇದು ಸ್ವಲ್ಪ ಜಾಸ್ತಿ ಆಯ್ತು ಅಂತ ಅನಿಸಿತು. ಟಾರ್ಗೆಟ್ ಮಾಡೋಕು ಒಂದು ರೀತಿ ಇರುತ್ತೆ.
ಇದೆಲ್ಲ ನನ್ನ ಫ್ಯಾಮಿಲಿಗೆ ಅಭ್ಯಾಸವಾಗಿದೆ. ತಾಯಿ ತಲೆಕಡಿಸಿಕೊಳ್ಳಬೇಡ ಎಂದರು. ಅದರೆ ಅವರಲ್ಲಿ ಒಂದು ನೋವಿತ್ತು. ಬಳಿಕ 11ಕ್ಕೆ ಉತ್ತರ ಕೊಡುತ್ತೇನೆ ಎಂದು ಪೋಸ್ಟ್ ಮಾಡಿದ ಬಳಿಕ ಅದನ್ನು ನೋಡಿ ತಾಯಿಗೆ ಸಮಾಧಾನ ಆಯ್ತು. ನನ್ನ ಸಿನಿಮಾಗೆ ಜನ ಬರ್ತಾರೆ ಎನ್ನುವುದು ನನಗೆ ಗೊತ್ತು. ಆದರೆ ಈ ಸಮಯದಲ್ಲಿ ಜನ ಇಷ್ಟು ಜನ ನನ್ನ ಜೊತೆ ನಿಲ್ತಾರೆ ಎನ್ನುವುದು ನನಗೆ ಇದೇ ಮೊದಲು ಗೊತ್ತಾಯ್ತು. ಇದೇ ಕೊನೆ. ಇಂಥ ವಿಚಾರಕ್ಕೆ ನಾನು ಇಮ್ಮುಂದೆ ಮಾತಡಲ್ಲ ಎಂದು ಪ್ರತಿಕ್ರಿಯೆ ನೀಡಿದ್ರು. ಅಲ್ಲದೇ ವಾಹಿಸಿನಿಯ ಸಂಸ್ಥಾಪಕರಿಗೆ , ಅರ್ಹತೆ ಇಲ್ಲದವರಿಗೆ ಜವಾಬ್ದಾರಿ ಕೊಟ್ಟು ನಾನು ಕೈ ಸುಟ್ಟುಕೊಂಡಿದ್ದೆ, ನೀವು ಸುಟ್ಟುಕೊಳ್ಳುತ್ತೀರಿ ಸಲಹೆ ನೀಡಿದ್ದಾರೆ.