Ranaji Cricket : ಇಂದಿನಿಂದ ಕರ್ನಾಟಕ, ಛತ್ತೀಸ್ಗಢ ರಣಜಿ ಮ್ಯಾಚ್…!!
ರಣಜಿ ಟೂರ್ನಿಯಲ್ಲಿ ಇಂದಿನಿಂದ ಕರ್ನಾಟಕ ಕ್ರಿಕೆಟ್ ತಂಡ ಛತ್ತೀಸ್ಗಢ ತಂಡವನ್ನು ಎದುರಿಸಲಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ.
ರಾಜ್ಯ ತಂಡ ಆಡಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಸರ್ವಿಸ್ ವಿರುದ್ಧ ಡ್ರಾ ಮಾಡಿಕೊಂಡಿತು. ಎರಡನೆ ಪಂದ್ಯದಲ್ಲಿ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 7 ರನ್ಗಳಿಂದ ಗೆಲುವು ದಾಖಲಿಸಿತು.
ನಂತರ ಪಣಜಿಯಲ್ಲಿ ನಡೆದ ಆತಿಥೇಯ ಗೋವಾ ವಿರುದ್ಧ ಡ್ರಾ ಸಾಸಿತು.
ಇನ್ನು ಛತ್ತಿಸ್ಗಢ ತಂಡ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದೆ.
ಮೊದಲ ಪಂದ್ಯದಲ್ಲಿ ಛತ್ತೀಸ್ಗಢ ಪುದುಚೇರಿ ವಿರುದ್ಧ 132 ರನ್ ಗೆಲುವು, ಎರಡನೆ ಪಂದ್ಯದಲ್ಲಿ ಸರ್ವಿಸ್ ವಿರುದ್ಧ 10 ವಿಕೆಟ್ ಜಯ ಸಾಸಿತು ಮೂರನೆ ಪಂದ್ಯದಲ್ಲಿ ಕೇರಳ ವಿರುದ್ಧ 7 ವಿಕೆಟ್ಗಳಿಂದ ಸೋಲು ಕಂಡಿತು.
ಕರ್ನಾಟಕ ಪರ ಆರ್.ಸಮರ್ಥ್ ಒಳ್ಳೆಯ ಲಯದಲ್ಲಿದ್ದಾರೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದ ಮನೀಶ್ ಪಾಂಡೆ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ್ದರು.
ಬೌಲಿಂಗ್ನಲ್ಲಿ ರೋನಿತ್ ಮೋರೆ ಹಾಗೂ ಕೆ.ಗೌತಮ್ ಎದುರಾಳಿಗಳ ಮೇಲೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಶುಭಾಂಗ್ ಹೆಗಡೆ ಬೌಲಿಂಗ್ನಲ್ಲಿ ಮಿಂಚಬೇಕಿದೆ.
ಛತ್ತೀಸ್ಗಢ ಪರ ಹರಪ್ರೀತ್ ಸಿಂಗ್, ಅಮನದೀಪ್ ಖಾರೆ, ಅಜಯ್ ಮಂಡಲ್ ಹಾಗೂ ಸುಮೀತ್ ರೂಹಿಕಾರ್ ಪ್ರಮುಖ ಆಟಗಾರರಾಗಿದ್ದಾರೆ.