Ranaji Cricket : ಮೊದಲ ದಿನ ಕರ್ನಾಟಕಕ್ಕೆ ಮುನ್ನಡೆ
ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ಕ್ರಿಕೆಟ್ ತಂಡ ಪುದುಚೇರಿ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಿದೆ. ತವರು ಮೈದಾನ ಚಿನ್ನಸ್ವಾಮಿಯಲ್ಲಿ ಕರ್ನಾಟಕ 100ನೇ ಪಂದ್ಯ ಆಡಿತು.
ಸಿ ಗುಂಪಿನ ಎರಡನೆ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಕರ್ನಾಟಕ 170 ರನ್ಗಳಿಗೆ ಆಲೌಟ್ ಮಾಡಿತು. ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ.
ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿಗಳಾದ ವಿದ್ವತ್ ಕಾವೇರಪ್ಪ 52ಕ್ಕೆ 4, ವೈಶಾಕ್ ವಿಜಯ್ ಕುಮಾರ್ 39ಕ್ಕೆ 3, ರೋನಿತ್ ಮೋರೆ 34ಕ್ಕೆ 2, ಮತ್ತೊಂದು ವಿಕೆಟ್ ಶ್ರೇಯಸ್ ಗೋಪಾಲ್ ಪಾಲಾಯಿತು.
ಪುದುಚೇರಿ ತಂಡ ಕರ್ನಾಟಕ ದಾಳಿಗೆ ತತ್ತರಿಸಿ ಹೋಯಿತು. ದಾಮೋದರನ್ ರೋಹಿತ್ (44 ರನ್) ತಂಡದ ಪರ ಗರಿಷ್ಠ ರನ್ ಹೊಡೆದರು. ಕೋಂದಂಡಪಾಣಿ ಅರವಿಂದ್ (20),ಶ್ರೀಧರ್ 20 ರನ್ ಹೊಡೆದರು. 54 ಓವರ್ಗಳಲ್ಲಿ ಪುದುಚೇರಿ ಓವರ್ ಮುಕ್ತಾಯವಾಯಿತು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರ್.ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ಗೆ 111 ರನ್ ಸೇರಿಸಿದರು. 51 ರನ್ ಹೊಡೆದ ಮಯಾಂಕ್ ದಿನದಾಟದ ಅಂತ್ಯದಲ್ಲಿ ಔಟಾದರು. ಸಮರ್ಥ್ ಅಜೇಯ 59 ರನ್ ಹೊಡೆದರು.