ಭಾರತದ ಕಾನೂನಿನ ನೆರಳಲ್ಲಿ ಮುಂದುವರಿದ ಅತ್ಯಾಚಾರಿಗಳ ಪೀಕಲಾಟ
ನಿರ್ಭಯಾ ಹಂತಕರ ಶಿಕ್ಷೆ ತಪ್ಪಿಸುವ ನಾಟಕ ಮುಂದುವರೆದಿದ್ದು, ನಾನು ಮಾನಸಿಕ ಅಸ್ವಸ್ಥ ಎಂದು ಆರೋಪಿ ವಿನಯ ಶರ್ಮಾ ಸುಪ್ರೀಂಗೆ ಅರಿಕೆ ಮಾಡಿದ್ದಾನೆ.
ತಾನು ಮಾನಸಿಕ ಅಸ್ವಸ್ಥನಾಗಿದ್ದು, ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ವಿನಯ ಶರ್ಮಾ ಸುಪ್ರೀಂ ಕೋರ್ಟ್ ಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾನೆ.
ಆತ ಪರಿಪೂರ್ಣ ರೀತಿಯಲ್ಲಿ ಆರೋಗ್ಯವಂತನಾಗಿದ್ದಾನೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿದೆ.
ಈ ಮೊದಲು ತನ್ನ ಪರ ವಕಾಲತ್ತು ವಹಿಸಿದ್ದ ವಕೀಲರ ಬದಲಿಗೆ ಹೊಸ ವಕೀಲರನ್ನು ನೇಮಿಸಲು ತಿರ್ಮಾನಿಸಿದ್ದು, ಅದಕ್ಕಾಗಿ ಸಮಯಾವಕಾಶ ಕೋರಿ ಇನ್ನೊಬ್ಬ ಹಂತಕ ಪವನ್ ಗುಪ್ತಾ ಅರ್ಜಿ ಸಲ್ಲಿಸಿದ್ದ. ಇದೇ ವೇಳೆ ವಕೀಲರ ನೇಮಕ ತಿರಸ್ಕರಿಸಿರುವ ಆರೋಪಿ ಪವನ್ ಗುಪ್ತಾಗೆ ಸ್ಥಳೀಯ ಕೋರ್ಟ್ ವತಿಯಿಂದ ವಕೀಲರ ನೇಮಕ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ಸಹ ಪವನ್ ಪರ ವಾದಿಸಲು ನ್ಯಾಯವಾದಿಯನ್ನು ನೇಮಿಸಿದೆ.