ವಿಜಯಪುರ ಜಿಲ್ಲೆ ಬರದ ನಾಡು ಇಲ್ಲಿ ಇಲ್ಲಿ ಮರಗಳಿಗೆ ಕೊರತೆ ಇದೆ. ಆದರೆ, ಬೆಟ್ಟ-ಗುಡ್ಡಕ್ಕೆ ಮಾತ್ರ ಯಾವುದೇ ಕೊರತೆ ಇಲ್ಲ. ಸದ್ಯ ಇಲ್ಲಿ ಮರೆಯಾಗಿರುವ ಅಪರೂಪದ ಬಾವುಲಿಗಳು ಮತ್ತೆ ಪತ್ತೆಯಾಗಿದ್ದು, ಜನರು ಸಂತಸದಿಂದ ಮುಗಿಬಿದ್ದು ನೋಡುತ್ತಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂಗ ಮರೆಯಾಗಿದ್ದ ಬಾವಲಿಗಳ ಗುಂಪು ಸದ್ಯ ಮತ್ತೊಮ್ಮೆ ಕಾಣಿಸಿಕೊಂಡಿವೆ, ಹೀಗಾಗಿ ನೋಡಲು ಬರುವ ಕುತೂಹಲಿಗರ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಬಾವಲಿಗಳು ಮರದಿಂದ ಮರಕ್ಕೆ ಹಾರುತ್ತಿದ್ದರೆ, ಜನರು ಕೌತುಕದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.
ಸದ್ಯ ಇಲ್ಲಿ ಹಾರಾಡುತ್ತಿರುವ ಬಾವಲಿಗಳು ಸಾಮಾನ್ಯ ಬಾವಲಿಗಳಿಗಿಂತ ವಿಭಿನ್ನವಾಗಿವೆ. ದೊಡ್ಡ ಗಾತ್ರ, ಚೂಪಾದ ಮೂಗು ಹೀಗೆ ಒಂದಿಷ್ಟು ವಿಭಿನ್ನತೆ ಹೊಂದಿವೆ. ರಾತ್ರಿ ವೇಳೆ ತಿರುಗಾಡೋ ಬಾವಲಿಗಳು ಹಗಲಲ್ಲಿ ಸದಾ ಕಿವಿಗಡಚಿಕ್ಕುವ ಶಬ್ದದೊಂದಿಗೆ ಮರದಲ್ಲಿ ಕಾಣಿಸಿಕೊಳ್ಳುತ್ತವೆ. ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿರುವ ಈ ಬಾವಲಿಗಳ ಬಗ್ಗೆ ವಿಶೇಷವಾದ ಅಧ್ಯಯನದ ಅಗತ್ಯವಿದೆ ಎಂದು ಪ್ರವಾಸಿಗರು ಮನವಿ ಮಾಡುತ್ತಿದ್ದಾರೆ.