ಪುತ್ತಿಲರನ್ನು ಕೂರಿಸಿ ಮನವೊಲಿಸುವ RSS ನ ಹಿರಿಯರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬುದ್ಧಿ ಹೇಳುವಷ್ಟು ಶಕ್ತಿ ಇಲ್ಲದಾಯ್ತಾ…?
ತುಂಬಾ ಬಿಜೆಪಿ ಕಾರ್ಯಕರ್ತರಿಗೆ ಹರೀಶ್ ಪೂಂಜಾರಂತಹ ನಾಯಕ ಬೇಕು ಅನ್ನುವ ಹಂಬಲವಿದೆ.. ಪ್ರವೀಣ್ ನೆಟ್ಟರಾರ ಹತ್ಯೆಯಾದ ಸಂದರ್ಭ ಪೂಂಜಾರನ್ನು ಹೊರತುಪಡಿಸಿ, ಉಳಿದ ಎಲ್ಲಾ ಬಿಜೆಪಿ ನಾಯಕರಿಗೂ ಹಿಂದೂ ಯುವಕರು ಒಂದು ಸಂದೇಶ ರವಾನಿಸಿದ್ದರು, ಅದ್ರಲ್ಲೂ ರಾಜ್ಯಾಧ್ಯಕ್ಷರ ಕಾರನ್ನು ಗಲಗಲನೇ ಅಲುಗಾಡಿಸಿ ಆಕ್ರೋಶ ಹೊರಹಾಕಿದ್ದರು. ಆದ್ರೂ, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಬಿಜೆಪಿ ನಾಯಕರು ಮಾಡುತ್ತಿರೋದು ವಿಪರ್ಯಾಸ..
2018ರಲ್ಲಿ ಹರೀಶ್ ಪೂಂಜಾರಿಗೆ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆ ಹಂತದಲ್ಲಿ ಕೈ ತಪ್ಪುವ ಎಲ್ಲಾ ಲಕ್ಷಣಗಳಿದ್ದವು, 99% ಕೈ ತಪ್ಪಿ ಆ ಟಿಕೆಟ್ ಗಂಗಾಧರ ಗೌಡರ ಪಾಲಾಗುತ್ತಿತ್ತು, ಆ ಹೊತ್ತಿನಲ್ಲಿ ಮಂಗಳೂರಿನ ನಂತೂರು ಬಳಿ ಸೇಲೋನ್ ಒಂದರಲ್ಲಿ ಕೂತಿದ್ದ ಪೂಂಜಾ ಅಕ್ಷರಶ ಶಾಕ್ ಗೆ ಒಳಗಾಗಿದ್ರು, ರಸ್ತೆ ಬದಿಯಲ್ಲಿ 1 ಕಿಮಿ ನಷ್ಟು ನಡೆದುಕೊಂಡು ಹೋಗಿದ್ದ ಪೂಂಜಾರ ಹಿಂದೆ, ಅವ್ರ ಕಾರು ಮತ್ತು ಬೆಂಬಲಿಗರು ನಡೆದುಕೊಂಡು ಬರುತ್ತಿದ್ದರು.. ಬಳಿಕ ಅಲ್ಲಿ ಪೂಂಜಾರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಆಶ್ಚರ್ಯ.. ಅಲ್ಲಿಂದ ಕಾರಿನಲ್ಲಿ ಸುಮಾರು 60 ಕೀ. ಮಿ ದೂರದಲ್ಲಿರೋ RSSನ ಮುಖಂಡರ ಮನೆಗೆ ಬಂದು ತಲುಪಿದ್ರು, ಅಲ್ಲಿದ್ದ ಸಂಘದ ಸಜ್ಜನ ವ್ಯಕ್ತಿ ಮಾಡಿದ ಒಂದು ಫೋನ್ ಕಾಲ್ ಬೆಳ್ತಂಗಡಿ ಕ್ಷೇತ್ರಕ್ಕೆ ಪೂಂಜಾರಂತ ನಾಯಕನನ್ನು ನೀಡುವಲ್ಲಿ ಯಶಸ್ವಿಯಾಗಿತ್ತು. ಒಬ್ಬ ನಾಯಕ ಹುಟ್ಟಬೇಕು ಅಂದ್ರೆ ಅದನ್ನ ಯಾರಿಂದಲೂ ತಡೆಯೋಕೇ ಸಾಧ್ಯವಿಲ್ಲ.
ಯಾರಿಗೂ ಗೊತ್ತಿಲ್ಲದ ಈ ಸ್ಟೋರಿ ಯಾಕೆ ಹೇಳ್ತಾ ಇದ್ದೇನೆ ಅಂದ್ರೆ, ಸಂಘ ಪರಿವಾರದ ಹಿರಿಯರಿಗೆ ಅಷ್ಟೊಂದು ಶಕ್ತಿಯಿದೆ.. ನೋಡೋಕೆ ಸರಳವಾಗಿ ಕಂಡರೂ, ಗೋವುಗಳ ಪಕ್ಕಾ ಅಥವಾ ತೋಟದ ಮೂಲೆಯಲ್ಲಿದ್ರೂ, ತಮ್ಮ ಹಳೆ ನೋಕಿಯೋ ಸೆಟ್ ಹಿಡಿದು… ಪ್ರಧಾನಿ ಮೋದಿಗೂ ಫೋನ್ ಕಾಲ್ ಮಾಡ್ತಾರೆ.. ಇದು ನಾನು ಕಂಡಿರೋ ಸತ್ಯ..
ಇಷ್ಟೆಲ್ಲ ಶಕ್ತಿಇರೋ ಸಂಘ ಪರಿವಾರದ ನಾಯಕರ ಮಾತನ್ನು ಈಗ ರಾಜ್ಯ ಬಿಜೆಪಿ ಪರಿಗಣಿಸುತ್ತಿಲ್ಲ. ಎದುರಿಗೆ ತಲೆಯಾಡಿಸಿ, ಸಂಘ, ಪಕ್ಷ ಬದಿಗಿಟ್ಟು ತಮ್ಮದೇ ನಿರ್ಧಾರ ತೆಗೆದುಕೊಳ್ತಾರೆ, ಇದೆ ಪುತ್ತಿಲ ಹಾಗೂ ಕಿಶೋರ್ ಬೋಟ್ಯಾಡಿ ಅವ್ರ ವಿಚಾರದಲ್ಲಿ ಬಿಜೆಪಿ ಮಾಡಿರೋ ತಪ್ಪು.
ಸಂಘ ಈ ನಾಯಕರನ್ನು ಸೂಚಿಸಿದ್ದರೂ ತಮ್ಮದೇ ನಿರ್ಧಾರ ಮಾಡಿ, ಹಿಂದೂ ಹಿಂದುತ್ವದ ಪರ ಇರೋ ಯುವಕರನ್ನು ಸಿಡಿದೆಳುವಂತೆ ಮಾಡಿದ್ದು. ಸಂಘದ ಬಳಿಕ ಪಕ್ಷವೆ ಹೊರತು, ಪಕ್ಷದಿಂದ ಸಂಘವಲ್ಲ. ಆದ್ರೆ, ಬಿಜೆಪಿ ಕೆಲ ನಾಯಕರ ಅಧಿಕಾರದ ಮದ ತಪ್ಪುಗಳ ಮೇಲೆ ತಪ್ಪು ಮಾಡಿಸುತ್ತಿದೆ.
ನಿನ್ನೆ ರಾತ್ರಿ ಸಂಘದ ಹಿರಿಯರು ಪುತ್ತಿಲರನ್ನು ಮನವೊಲಿಸುವ ಪ್ರಯತ್ನ ಮಾಡಿದ್ರೂ ಅದು ಸಫಲವಾಗಿಲ್ಲ, ಹಿಂದೆಯೂ ಈ ರೀತಿ ಮಾಡಿ ಪುತ್ತಿಲರಿಗೆ ಯೋಗ್ಯವಾದ ಹುದ್ದೆ ಬಿಜೆಪಿ ಕೊಟ್ಟಿರಲಿಲ್ಲ. ನಿನ್ನೆ ಮೊನ್ನೆ ಬಂದವರು ಹುದ್ದೆ ಹಿಡಿಯುವಾಗ ಮೈಯೆಲ್ಲಾ ಹಿಂದುತ್ವಕ್ಕಾಗಿ ಕೇಸ್ ಹಾಕಿಕೊಂಡಿರೋ ಪುತ್ತಿಲರ ಮನದಾಳದ ನೋವು ಹೇಗಿರಬೇಡ..? ಪುತ್ತಿಲ ಯುವಕರ ಆಕ್ರೋಶ ಹೇಗಿರಬೇಡಾ..? ಸ್ವಲ್ಪ ಆಲೋಚನೆ ಮಾಡಿ ನೋಡಿ..
ಇನ್ನೂ ಪುತ್ತಿಲರ ಮೇಲಿದ್ದ ಹಳೆ ಕೇಸುಗಳನ್ನು ಮತ್ತೆ ಕೆದಕುವ ವಿಚಾರವಾಗಿಯೂ ಕೆಲವೊಬ್ಬರು ಎಚ್ಚರಿಕೆ ನೀಡಿದ್ದಾರಂತೆ, ಆ ರೀತಿ ಒಂದು ವೇಳೆ ಮಾಡಿದ್ರೆ ಮತ್ತೆ ಬಿಜೆಪಿ ನಾಯಕರು ಪುತ್ತೂರಿಗೆ ಕಾಲು ಇಡಲು ನೂರು ಬಾರಿ ಆಲೋಚಿಸಿಬೇಕಾಗಬಹುದು! ಅಷ್ಟಕ್ಕೂ, ಈ ಹಿಂದೂ ನಾಯಕರು ತಮ್ಮ ಪಕ್ಷಕ್ಕಾಗಿಯೇ ಮಾಡಿದ್ದೆ ಹೊರತು, ತಮ್ಮ ಮನೆಗಾಗಿ ಮಾಡಿದ್ದು ಏನು ಇಲ್ಲ.
ಇನ್ನೂ, ಸಂಘದ ಹಿರಿಯರ ಬಗ್ಗೆ ಗೌರವವಿದೆ, ಆದ್ರೆ ಎಲ್ಲವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಯಾಕಂದ್ರೆ, ಪುತ್ತಿಲರನ್ನು ಕರೆದು ಬುದ್ಧಿ ಹೇಳುವ ಬದಲು, ಸಂಘದ ಹಿರಿಯರು ಬಿಜೆಪಿಯ ಕೆಲವೊಂದು ಮದವೇರಿದ ನಾಯಕರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಬಹುದಿತ್ತು, ಆದ್ರೆ ಕಾಲ ಮಿಂಚಿಯಾಗಿದೆ.. ಪುತ್ತಿಲ ಅಖಾಡಕ್ಕೆ ಇಳಿಯೋದು ಕನ್ಫರ್ಮ್ ಆಗಿದೆ.
ಕಾಕತಾಳಿ ಎಂಬಂತೆ, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ, ಪುತ್ತೂರಲ್ಲಿ ಅರುಣ್ ಕುಮಾರ್ ಪುತ್ತಿಲ ಏಪ್ರಿಲ್ 17 ರಂದೆ ನಾಮಪತ್ರಿಕೆ ಸಲ್ಲಿಸುತ್ತಿದ್ದಾರೆ, ಅದ್ರ ಮೊದಲು ಇಬ್ಬರು ಒಂದೇ ಗಳಿಗೆಯಲ್ಲಿ ಶಿವನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರೋದು ಅಚ್ಚರಿ.!!