“ದಾಖಲೆ ಇದ್ದರೆ ಬಿಡುಗಡೆಗೊಳಿಸಿ” : ಟ್ರಬಲ್ ಶೂಟರ್ ಗೆ ಕೇಸರಿ ಡಿಚ್ಚಿ BJP DK Shivakumar saaksha tv
ಬೆಂಗಳೂರು : ಬಿಜೆಪಿ ಸೇರದೇ ಇರುವುದರಿಂದ ನನ್ನನ್ನು ತಿಹಾರ್ ಜೈಲಿಗೆ ಹಾಕಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಬಿಜೆಪಿ ಟಾಂಗ್ ನೀಡಿದೆ.
ಟ್ವಿಟ್ಟರ್ ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ “ಹಿರಿಯಕ್ಕನ ಚಾಳಿ ಮನೆ ಮಂದಿಗೆ” ಎಂಬ ಮಾತೊಂದಿದೆ. ತಾವ್ಯಾಕೋ ಅದೇ ಹಾದಿಯಲ್ಲಿ ಹೆಜ್ಜೆ ಇಡುವಂತಿದೆ. ದಾಖಲೆ ಇಲ್ಲದೆ ಮಾತನಾಡುವುದು, ನಂತರ ಮೌನಕ್ಕೆ ಶರಣಾಗುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಈಗ ನೀವು ಅದೇ ಹಾದಿ ತುಳಿಯುತ್ತಿದ್ದೀರಿ.
ಬಿಜೆಪಿ ಸೇರದೇ ಇರುವ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದರು. ಇದಕ್ಕಾಗಿ ನನ್ನ ಬಳಿ ದಾಖಲೆ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದಾಖಲೆ ಇದ್ದರೆ ಬಿಡುಗಡೆಗೊಳಿಸಿ. ಅದನ್ನು ಬಿಟ್ಟು ಇಷ್ಟು ದಿನ ಏಕೆ ಕಾಯುತ್ತಾ ಕುಳಿತಿರಿ? #ಬುರುಡೆರಾಮಯ್ಯ ರೀತಿ ನೀವೂ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ನಡೆಸುತ್ತಿದ್ದೀರಾ?
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಮತ್ತೊಮ್ಮೆ ಹೇಳುತ್ತಿದ್ದೇವೆ., ತೆರಿಗೆ ವಂಚಿಸಿ ಅಕ್ರಮ ಆಸ್ತಿ ಸಂಗ್ರಹಿಸಿದ್ದೀರಿ ಎಂಬ ಒಂದೇ ಕಾರಣಕ್ಕೆ ಕೇಂದ್ರ ತೆರಿಗೆ ಸಂಸ್ಥೆಗಳು ನಿಮ್ಮನ್ನು ತಿಹಾರ್ ಜೈಲಿಗೆ ಕಳುಹಿಸಿದ್ದವು. ಬೇರೆ ಯಾವ ಕಾರಣವೂ ಇಲ್ಲ ಎಂದಿದೆ.