ಬಿಎಸ್ ವೈ ಬೆನ್ನಿಗೆ ಚೂರಿ ಹಾಕಿದ್ರೆ ನಾವು ಬೀಡ್ತಿವಾ : ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿ
ದಾವಣಗೆರೆ : ಸಿಎಂ ರೆಡಿಮಿಡ್ ಫುಡ್ ಅಲ್ಲ ಪಕ್ಷ ಸಂಘಟನೆ, ಹೋರಾಟದಿಂದ ಬಂದವರು. ಯಡಿಯೂರಪ್ಪ ಆಲದ ಮರ ನಾವು ಅವರ ನೆರಳಲ್ಲಿ ಇರೋರು.
ಅವರ ಬೆನ್ನಿಗೆ ಚೂರಿ ಹಾಕಿದ್ರೆ ನಾವು ಬೀಡ್ತಿವಾ ಎಂದು ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಶಾಸಕ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿಯೋಗೇಶ್ವರ್ ವಿರುದ್ಧ ಬೆಂಕಿಕಾರಿದರು. ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ ನಂತರ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಬರುತ್ತಾರೆ.
ಇಲ್ಲಿ ಬಂದು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಆ ವ್ಯಕ್ತಿ. ಕೋವಿಡ್ ಸೋಂಕು ಇಳಿಮುಖ ಅಗಲಿ. ಆ ಬಳಿಕ ನನ್ನ ಹೋರಾಟ ಶುರುವಾಗಲಿದೆ.
ಯೋಗೇಶ್ವರ್ ಅವರನ್ನ ವಜಾ ಮಾಡಬೇಕು. ಜೊತೆಗೆ ಮೆಗಾ ಸಿಟಿ ಹಗರಣದ ಹಿನ್ನೆಲೆ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇನ್ನು 65 ಜನ ಶಾಸಕರು ಸೇರಿ ಯೋಗೇಶ್ವರ್ ವಜಾ ಮಾಡೋಕೆ ಒತ್ತಾಯಿಸಿದ್ದೇವೆ. ಸಿಪಿ ಯೋಗೇಶ್ವರ್ ಉಂಡು ಹೋದ ಕೊಂಡು ಹೋದ ಥರ.
ಯೋಗೇಶ್ವರ್ ಮೆಗಾಸಿಟಿ ದೊಡ್ಡ ಹಗರಣ ಮಾಡಿದ್ದಾರೆ. ಈ ಬಗ್ಗೆ ಡಿಜಿ ಐಜಿಗೂ ದೂರು ನೀಡಿದ್ದಾರೆ. ಆ ಮನುಷ್ಯ ಮೂಲತ ಬಿಜೆಪಿಯವರಲ್ಲ, ಅವಕಾಶವಾದಿ.
ಬಿಜೆಪಿ ಸರ್ಕಾರ ಬರಲು ಕಾರಣ ಆದ ಅಂತಾರೆ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಆಗಿ ಜೆಡಿಎಸ್ ಕಾಂಗ್ರೆಸ್ ಶಾಸಕರು ಅವರೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ.
ಸಿಎಂ ಭೇಟಿ ಮಾಡಿ ಸೋತವರಿಗೆ ಸಚಿವ ಸ್ಥಾನ ಕೊಡಬೇಡಿ ಅಂತ ಹೇಳಿದ್ದೇವೆ. ನಂತರ ಕೈಕಾಲು ಹಿಡಿದು ಮಿನಿಸ್ಟರ್ ಆಗಿದ್ದಾರೆ. ಅವರದ್ದು ಐರೈನ್ ಲೆಗ್ ಇದ್ದಂತೆ ಅಂತಾ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಫುಲ್ ಗರಂ ಆದರು.