ADVERTISEMENT
Sunday, July 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸೈಟು ಮಾರಿದಂತೆ ನದಿ ನೀರು ಹಂಚಬೇಡಿ -ರಾಜ್ಯದ ನೀರು ಪರರ ಪಾಲಾದ್ರೆ ಕನ್ನಡಿಗರು ಕ್ಷಮಿಸಲ್ಲ :ನದಿ ಜೋಡಣೆ ಎಂದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರವಲ್ಲ -ಸಿಎಂ ಡಿಕೆಶಿಗೆ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ

Shwetha by Shwetha
July 12, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದ ನೀರಾವರಿ ಹಿತಾಸಕ್ತಿ ಮತ್ತು ನದಿ ಜೋಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತೋರುತ್ತಿರುವ ಧೋರಣೆಯ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನದಿಗಳ ಜೋಡಣೆ ಮಾಡುವುದು ಎಂದರೆ ಬೆಂಗಳೂರಿನಲ್ಲಿ ಕುಳಿತು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ ಹಾಗಲ್ಲ ಎಂದು ಹೇಳುವ ಮೂಲಕ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಗತಿ ಪರಿಶೀಲನೆ ಹೆಸರಿನಲ್ಲಿ ರಾಜ್ಯಾದ್ಯಂತ ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗಳು, ನೀರಾವರಿ ವಿಚಾರದಲ್ಲಿ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೃಷ್ಣಾ, ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ವಿಚಾರದಲ್ಲಿ ರಾಜ್ಯದ ಪರಮೋಚ್ಛ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

Related posts

ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗದ ಸಂಚು: ಆಯೋಗ ಕೇಂದ್ರದ ಕಪಿಮುಷ್ಠಿಯಲ್ಲಿದೆ – ಪ್ರಿಯಾಂಕ್ ಖರ್ಗೆ ಸ್ಫೋಟಕ ಆರೋಪ

ಅಧಿಕಾರ ಕೊಟ್ಟರೆ ಕೆಪಿಎಸ್‌ಸಿ ಮತ್ತು ಕೆಎಟಿ ರದ್ದು ಮಾಡ್ತೀನಿ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದೇಕೆ? ಭ್ರಷ್ಟ ವ್ಯವಸ್ಥೆಗೆ ಬೀಳಲಿದೆಯೇ ಬಿಗ್ ಲಾಕ್?: ಕರ್ನಾಟಕದ ಇತಿಹಾಸದಲ್ಲೇ ಮೊದಲು ಇಂತಹ ಎಚ್ಚರಿಕೆ!

July 12, 2026
ಸಿದ್ದರಾಮಯ್ಯ ಮೌನದ ಹಿಂದೆ ಅಡಗಿದೆಯೇ ಅಹಿಂದ 2.0 ಬಿರುಗಾಳಿ? -ಟೈಗರ್ ಈಸ್ ಸೈಲೆಂಟ್ ಬಟ್ ನಾಟ್ ಔಟ್ :ಆಗಸ್ಟ್ ನಿಂದ ಶುರುವಾಗಲಿದೆ “ಸಿದ್ದ”ರಾಮಯ್ಯ ಎಂಬ ಅಸಲಿ ಅಬ್ಬರ!

ಸಿದ್ದರಾಮಯ್ಯ ಮೌನದ ಹಿಂದೆ ಅಡಗಿದೆಯೇ ಅಹಿಂದ 2.0 ಬಿರುಗಾಳಿ? -ಟೈಗರ್ ಈಸ್ ಸೈಲೆಂಟ್ ಬಟ್ ನಾಟ್ ಔಟ್ :ಆಗಸ್ಟ್ ನಿಂದ ಶುರುವಾಗಲಿದೆ “ಸಿದ್ದ”ರಾಮಯ್ಯ ಎಂಬ ಅಸಲಿ ಅಬ್ಬರ!

July 12, 2026

ಮಾಹಿತಿ ಇಲ್ಲದ ಮಾತು ನಗೆಪಾಟಲು

ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ನದಿ ಜೋಡಣೆಗೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿ. ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಸಿಗುವ ನೀರಿನ ಪಾಲು ಎಷ್ಟು ಎಂಬ ಕನಿಷ್ಠ ಮಾಹಿತಿಯೂ ಅವರಿಗೆ ಇಲ್ಲದಿರುವುದು ದುರಂತ. ಕೇವಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗುವ ಬದಲು, ನೀರಾವರಿ ತಜ್ಞರು ಅಥವಾ ಇಲಾಖೆಯ ಎಂಜಿನಿಯರ್ ಗಳ ಬಳಿ ಮಾಹಿತಿ ಪಡೆಯಬೇಕಿತ್ತು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಅಲ್ಲ ಇದು ನೀರಿನ ಪ್ರಶ್ನೆ

ನದಿ ಜೋಡಣೆ ಎಂಬುದು ಅತ್ಯಂತ ಸೂಕ್ಷ್ಮ ಮತ್ತು ತಾಂತ್ರಿಕ ವಿಚಾರ. ಇದನ್ನು ಬೆಂಗಳೂರಿನಲ್ಲಿ ಸೈಟು ಮಾರುವ ರಿಯಲ್ ಎಸ್ಟೇಟ್ ದಂಧೆಯಂತೆ ನೋಡಬಾರದು. 2023ರ ಕೇಂದ್ರದ ಡಿಪಿಆರ್ ಪ್ರಕಾರ ಕರ್ನಾಟಕಕ್ಕೆ ಹನಿ ನೀರು ಸಿಕ್ಕಿರಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಸುದೀರ್ಘ ಹೋರಾಟದ ಫಲವಾಗಿ ರಾಜ್ಯಕ್ಕೆ ಕೇವಲ 15 ಟಿಎಂಸಿ ನೀರು ದಕ್ಕಿದೆ. ಸತ್ಯ ಹೀಗಿರುವಾಗ ರಾಜ್ಯದ ಸಮ್ಮತಿ ಇದೆ ಎಂದು ಹೇಳಲು ಯಾವ ಆಧಾರವಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ಜನರ ಕಿವಿಗೆ ಹೂವು ಇಡುವ ಪ್ರಯತ್ನ

ಹಿಂದೆ ಕಾಂಗ್ರೆಸ್ ನಾಯಕರು ವಿಧಾನಸಭೆಗೆ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದಿದ್ದರು. ಆದರೆ ಈಗಿನ ಮುಖ್ಯಮಂತ್ರಿಗಳು ಇಡೀ ರಾಜ್ಯದ ಜನರ ಕಿವಿಗೆ ಹೂವು ಇಡಲು ಹೊರಟಿದ್ದಾರೆ. ತುಂಗಭದ್ರಾ ಹೂಳು ತೆಗೆಯುವ ವಿಚಾರದಲ್ಲಿ ನೆರೆ ರಾಜ್ಯಗಳ ಜೊತೆ ಚರ್ಚೆ ಮಾಡಿದ್ದೇನೆ ಎನ್ನುವ ಸಿಎಂ, ರಾಜ್ಯದ ಜನತೆಗೆ ಅಥವಾ ವಿರೋಧ ಪಕ್ಷಗಳಿಗೆ ಯಾವುದೇ ಮಾಹಿತಿ ನೀಡದೆ ಎಲ್ಲವನ್ನೂ ಕತ್ತಲೆಯಲ್ಲಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ದಾನಶೂರ ಕರ್ಣನಾಗಬೇಡಿ

ನಮ್ಮ ರಾಜ್ಯದ ಹಣದಲ್ಲಿ ಯೋಜನೆ ಜಾರಿಯಾಗಿ, ನೀರು ಮಾತ್ರ ನೆರೆ ರಾಜ್ಯಗಳಿಗೆ ಹರಿಯುವಂತೆ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಇದ್ದಕ್ಕಿದ್ದಂತೆ ಉದಾರತೆ ಬಂದಂತಿದೆ. ಅಕ್ಕಪಕ್ಕದ ರಾಜ್ಯಗಳ ವಿರುದ್ಧ ಸಂಘರ್ಷ ಮಾಡುವುದನ್ನು ಬಿಟ್ಟು, ನಮ್ಮ ಪಾಲಿನ ನೀರನ್ನು ಬಿಟ್ಟುಕೊಡುವ ದಾನಶೂರ ಕರ್ಣನಂತೆ ವರ್ತಿಸುತ್ತಿರುವುದು ಕನ್ನಡಿಗರಿಗೆ ಮಾಡುವ ದ್ರೋಹ ಎಂದು ಎಚ್ಚರಿಸಿದ್ದಾರೆ.

ನೀರಾವರಿ ಜ್ಞಾನದ ಅಗತ್ಯವಿದೆ

ಸಿಎಂ ಅವರೇ, ನಿಮಗೆ ಮಾಹಿತಿ ಇಲ್ಲದಿದ್ದರೆ ನಿಮ್ಮದೇ ಪಕ್ಷದ ನಾಯಕ ಹೆಚ್ ಕೆ ಪಾಟೀಲ್ ಅವರ ಬಳಿ ಕೇಳಿ. ಅವರು ಕೃಷ್ಣಾ ಕಣ್ಣೀರ ಕಥೆ ಎನ್ನುವ ಪುಸ್ತಕ ಬರೆದಿದ್ದಾರೆ. ಕನಿಷ್ಠ ಅವರ ಸಲಹೆಯನ್ನಾದರೂ ಪಡೆಯಿರಿ. ನೀರಿನ ಹಂಚಿಕೆಯ ಮಿತಿ ನಿಗದಿಯಾಗದೆ ಯೋಜನೆಕ್ಕೆ ಒಪ್ಪಿಗೆ ಕೊಟ್ಟರೆ ಮುಂದಿನ ಪೀಳಿಗೆ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ShareTweetSendShare
Join us on:

Related Posts

ಬಿಜೆಪಿ ಗೆಲ್ಲಿಸಲು ಚುನಾವಣಾ ಆಯೋಗದ ಸಂಚು: ಆಯೋಗ ಕೇಂದ್ರದ ಕಪಿಮುಷ್ಠಿಯಲ್ಲಿದೆ – ಪ್ರಿಯಾಂಕ್ ಖರ್ಗೆ ಸ್ಫೋಟಕ ಆರೋಪ

ಅಧಿಕಾರ ಕೊಟ್ಟರೆ ಕೆಪಿಎಸ್‌ಸಿ ಮತ್ತು ಕೆಎಟಿ ರದ್ದು ಮಾಡ್ತೀನಿ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದೇಕೆ? ಭ್ರಷ್ಟ ವ್ಯವಸ್ಥೆಗೆ ಬೀಳಲಿದೆಯೇ ಬಿಗ್ ಲಾಕ್?: ಕರ್ನಾಟಕದ ಇತಿಹಾಸದಲ್ಲೇ ಮೊದಲು ಇಂತಹ ಎಚ್ಚರಿಕೆ!

by Shwetha
July 12, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಪುತ್ರಿಯ ವಿರುದ್ಧ ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ ಆರೋಪದಡಿ ಎಫ್‌ಐಆರ್ ದಾಖಲಾಗಿರುವುದು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಈ ಗಂಭೀರ...

ಸಿದ್ದರಾಮಯ್ಯ ಮೌನದ ಹಿಂದೆ ಅಡಗಿದೆಯೇ ಅಹಿಂದ 2.0 ಬಿರುಗಾಳಿ? -ಟೈಗರ್ ಈಸ್ ಸೈಲೆಂಟ್ ಬಟ್ ನಾಟ್ ಔಟ್ :ಆಗಸ್ಟ್ ನಿಂದ ಶುರುವಾಗಲಿದೆ “ಸಿದ್ದ”ರಾಮಯ್ಯ ಎಂಬ ಅಸಲಿ ಅಬ್ಬರ!

ಸಿದ್ದರಾಮಯ್ಯ ಮೌನದ ಹಿಂದೆ ಅಡಗಿದೆಯೇ ಅಹಿಂದ 2.0 ಬಿರುಗಾಳಿ? -ಟೈಗರ್ ಈಸ್ ಸೈಲೆಂಟ್ ಬಟ್ ನಾಟ್ ಔಟ್ :ಆಗಸ್ಟ್ ನಿಂದ ಶುರುವಾಗಲಿದೆ “ಸಿದ್ದ”ರಾಮಯ್ಯ ಎಂಬ ಅಸಲಿ ಅಬ್ಬರ!

by Shwetha
July 12, 2026
0

ಬೆಂಗಳೂರು: ರಾಜಕೀಯದಲ್ಲಿ ಮೌನ ಎನ್ನುವುದು ಕೇವಲ ನಿಶ್ಯಬ್ದವಲ್ಲ ಅದು ಮುಂದಿನ ದೊಡ್ಡ ಬಿರುಗಾಳಿಯ ಮುನ್ಸೂಚನೆ ಎಂಬ ಮಾತಿದೆ. ಸದ್ಯ ಕರ್ನಾಟಕ ರಾಜಕಾರಣದ ದ್ರುವತಾರೆ ಸಿದ್ದರಾಮಯ್ಯ ಅವರ ವಿಷಯದಲ್ಲೂ...

ದಿನ ಭವಿಷ್ಯ (07-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 12, 2026
0

ದಿನ ಭವಿಷ್ಯ 12-07-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಮಿಶ್ರ ಫಲಗಳ ದಿನವಾಗಿದೆ. ಸೂರ್ಯನ ಪ್ರಭಾವದಿಂದಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಹೊಸ ಜವಾಬ್ದಾರಿಗಳು...

team india

t-20 cricket: ಟೀಮ್ ಇಂಡಿಯಾ ಕಣಜದಲ್ಲಿ ಕೀಟಾಣುಗಳ ಕಾಟ..! ಆಂಗ್ಲರ ಐಸಿಯುನಲ್ಲಿ ಗಂಭೀರ್ ಹುಡುಗರು..! 🚨🏏🔥

by admin
July 12, 2026
0

t-20 cricket: ಟೀಮ್ ಇಂಡಿಯಾ ಕಣಜದಲ್ಲಿ ಕೀಟಾಣುಗಳ ಕಾಟ..! ಆಂಗ್ಲರ ಐಸಿಯುನಲ್ಲಿ ಗಂಭೀರ್ ಹುಡುಗರು..! 🚨🏏🔥 💥 ಕೊನೆಗೂ ಅರ್ಥವಾಗಬೇಕು.. ಅರ್ಥವಾಗಿದೆ ಅನ್ಸುತ್ತೆ. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬರೀ...

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

by Shwetha
July 11, 2026
0

ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಮತ್ತು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಗಾನಕೋಗಿಲೆಯಾಗಿ ನೆಲೆಸಿದ್ದ ಎಸ್ ಜಾನಕಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ಸಮಯದಿಂದ ವಯೋಸಹಜ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram