ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆಯಿರಲಿ : ಹೆಚ್ಡಿಕೆಗೆ ರಾಕ್ ಲೈನ್ ವಾರ್ನಿಂಗ್
ಬೆಂಗಳೂರು : ಒಂದೆಡೆ ಭ್ರಷ್ಟಾಚಾರ ಎಂದು ಆರೋಪ ಮಾಡುತ್ತೀರಿ, ಇನ್ನೊಂದೆಡೆ ಸ್ನೇಹಿತ ಎಂದು ಹೇಳುತ್ತೀರಿ.
ಹಿರಿಯ ನಟ ದಿ. ಅಂಬರೀಶ್ ವಿಚಾರ ಮಾತನಾಡುವಾಗ ಪ್ರಜ್ಞೆಯಿರಲಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾವಿನ ರಾಜಕಾರಣ ಯಾಕೆ ಮಾಡುತ್ತೀರಿ..?
ನೀವು ಮಾತನಾಡಿರುವ ರೀತಿ ನಮಗೆ ತುಂಬಾ ನೋವಾಗಿದೆ. ಅಂದು ಅಂಬರೀಶ್ ನಿಧನರಾದಾಗ ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದು ಅಭಿಷೇಕ್ ಒತ್ತಾಯದಿಂದ. ಅವತ್ತು ನೀವಲ್ಲ ಯಾರೇ ಸಿಎಂ ಆಗಿದ್ದರೂ ಹಾಗೇ ಮಾಡುತ್ತಿದ್ದರು ಎಂದು ಟಾಂಗ್ ನೀಡಿದರು.
ಇನ್ನು ಅಭಿ ಒತ್ತಾಯಿಸಿದ್ದಕ್ಕೆ ಮಂಡ್ಯಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ನೀವೂ ಕೂಡ ನನ್ನ ಬಳಿ ಹೇಳಿದ್ದೀರಿ. ಈಗ ಬೇರೆ ಮಾತನ್ನೇ ಆಡುತ್ತಿದ್ದೀರಿ.
ಇರಲಿ ಒಂದುವೇಳೆ ನಿಮ್ಮಿಂದಲೇ ಆಯಿತು ಎಂದರೆ ನೀವು ಮಾಡಿದ ಕೆಲಸದಿಂದ ನಿಮಗೆ ಪುಣ್ಯ ಸಿಕ್ಕಿರುತ್ತೆ. ಸಿಕ್ಕಿರುವ ಪುಣ್ಯ ಹೇಳಿಕೆ ನೀಡಿ ಕಳೆದುಕೊಳ್ಳಬೇಡಿ.
ಚಿತ್ರರಂಗದಿಂದ ಲಾಭಪಡೆದುಕೊಂಡು ಈಗ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದೀರಾ. ನೀವು ಸಿಎಂ ಆದಾಗ ಚಿತ್ರರಂಗಕ್ಕೆ ಏನು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ.
ಸತ್ತಿರುವ ವ್ಯಕ್ತಿಯ ಹೆಸರನ್ನು ತಂದು ಇಂತಹ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ರಾಕ್ ಲೈನ್, ಇದೇ ರೀತಿ ಮುಂದುವರಿದರೆ ಸುಮ್ಮನಿರಲ್ಲ ಎಂದು ವಾನಿರ್ಂಗ್ ನೀಡಿದ್ದಾರೆ.