Rohit Sharma: ಶಿಖರ್ ಕಂ ಬ್ಯಾಕ್ ಬಗ್ಗೆ ರೋಹಿತ್ ಹೇಳಿದ್ದೇನು..?
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೌಲರ್ ಗಳನ್ನು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹೊಗಳಿದ್ದಾರೆ.
ಓವೆಲ್ ಪಿಚ್ ನಲ್ಲಿ ತಮ್ಮ ಬೌಲರ್ ಗಳು ಅದ್ಭುತವಾಗಿ ಅಬ್ಬರಿಸಬಲ್ಲರು ಎಂದು ನನಗೆ ತಿಳಿದಿತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.
ಈ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರೋಹಿತ ಶರ್ಮಾ, ಪಿಚ್ ಕಂಡೀಷನ್ ನೋಡಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ.
ಅದರಂತೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡೆ. ನಮ್ಮ ಬೌಲರ್ ಗಳು ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ದಾಳಿ ನಡೆಸಿದರು.
ಸ್ವಿಂಗ್, ಸೀಮ್ ಗೆ ಅನುಕೂಲಕರವಾಗಿದ್ದ ಪಿಚ್ ಅನ್ನು ನಾವು ಸಮರ್ಥವಾಗಿ ಬಳಸಿಕೊಂಡಿದ್ದೇವೆ.
ನಮ್ಮ ಬೌಲರ್ ಗಳು ಅದ್ಭುತವಾಗಿ ಆಡಿದ್ದಾರೆ. ಇನ್ನು ಶಿಖರ್, ನಾನು ತುಂಬಾ ವರ್ಷಗಳಿಂದ ಕೂಡಿ ಬ್ಯಾಟಿಂಗ್ ಮಾಡುತ್ತಿದ್ದೇವೆ.
ಒಬ್ಬರನ್ನೊಬ್ಬರು ಪರಸ್ಪರ ಅರ್ಧ ಮಾಡಿಕೊಳ್ಳುತ್ತೇವೆ. ಆದ್ರೆ ಮೊದಲ ಎಸೆತದಲ್ಲಿಯೇ ನಮ್ಮ ನಿರ್ಧಾರ ತಪ್ಪಾಗಿತ್ತು.
ಶಿಖರ್ ಗೆ ಏಕದಿನ ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವವಿದೆ. ಈ ಹಿಂದೆ ಹಲವು ಗೆಲುವುಗಳಲ್ಲಿ ಆತ ಪ್ರಮುಖ ಪಾತ್ರವಹಿಸಿದ್ದರು.
ಈ ಗೆಲುವು ನಮಗೆ ಎಷ್ಟೋ ಸಂತೋಷವನ್ನು ಕೊಟ್ಟಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.