Rohit Sharma : ನಮ್ಮ ಸೋಲಿಗೆ ಇದೇ ಕಾರಣ : ರೋಹಿತ್ ಅಸಮಾಧಾನ
‘‘ನಮ್ಮ ಬೌಲಿಂಗ್ ವಿಭಾಗ ಅತ್ಯುತ್ತಮವಾಗಿದೆ. ಆದರೆ ನಾವು ಬ್ಯಾಟಿಂಗ್ ಮಾಡಿದ ರೀತಿ ಸಂಪೂರ್ಣ ನಿರಾಶಾದಾಯಕವಾಗಿತ್ತು.
ಪಿಚ್ ಬ್ಯಾಟಿಂಗ್ ಮಾಡಲು ಚೆನ್ನಾಗಿತ್ತು. ಬ್ಯಾಟರ್ ಗಳ ಕೆಟ್ಟ ಪ್ರದರ್ಶನದಿಂದಲೇ ನಾವು ಈ ಸ್ಥಿತಿಯಲ್ಲಿದ್ದೇವೆ.
ವಾಸ್ತವವಾಗಿ ಇಲ್ಲಿ ನಮಗೆ ನಾಲ್ಕನೇ ಪಂದ್ಯವಾಗಿದೆ.ಪಿಚ್ ಹೇಗಿರುತ್ತದೆ ಎಂಬೋದು ಮೊದಲೇ ಗೊತ್ತಿತ್ತು.
ಸೀಮರ್ಗಳಿಗೆ ಪಿಚ್ ಸಹಕರಿಸುತ್ತದೆ ಎಂದು ತಿಳಿದಿತ್ತು. ನಾವು ಜೊತೆಯಾಟ ಆಡುವಲ್ಲಿ ವಿಫಲರಾದವು ಎಂದು ರೋಹಿತ್ ಶರ್ಮಾ ತಮ್ಮ ತಂಡದ ಬ್ಯಾಟರ್ ಗಳ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶ್ರೇಯಸ್ಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವು ಸಾಧಿಸಿದೆ.
ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡ 52 ರನ್ ಗಳ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
ಈ ಟಾರ್ಗೆಟ್ ಬೆನ್ನಟ್ಟಿದ ರೋಹಿತ್ ಶರ್ಮಾ ಬಳಕ 17.3 ಓವರ್ ಗಳಲ್ಲಿ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯ್ತು.
ಇದರೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಡ್ ತಂಡ ಮುಂಬೈ ವಿರುದ್ದ 52 ರನ್ ಗಳ ಗೆಲುವು ಕಂಡಿದೆ.
ಈ ಹಿನ್ನೆಲೆಯಲ್ಲಿ ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಮೊದಲ 10 ಓವರ್ ಗಳಲ್ಲಿ ಕೆಕೆಆರ್ ಬ್ಯಾಟ್ಸ್ ಮನ್ ಗಳು ಅದ್ಭುತವಾಗಿ ಆಡಿದರು.
11 ಓವರ್ಗಳಲ್ಲಿ 100 ರನ್ ಪೂರೈಸಿತು. ಇಂತಹ ಸಮಯದಲ್ಲಿ ನಮ್ಮ ಬೌಲರ್ಗಳು ಉತ್ತಮವಾಗಿ ಕಂ ಬ್ಯಾಕ್ ಮಾಡಿದರು.
ಮುಖ್ಯವಾಗಿ ಬುಮ್ರಾ ಅದ್ಭುತವಾಗಿ ಮಿಂಚಿದರು. ಆದ್ರೆ ನಮ್ಮ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲಾದರು.
ಬ್ಯಾಟಿಂಗ್, ಬೌಲಿಂಗ್ ನಲ್ಲಿ ವಿಫಲವಾದ ಕಾರಣದಿಂದಲೇ ನಾವು ಈ ಸ್ಥಿತಿಯಲ್ಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. rohit-sharma-says-bumrah-was-special-they-let-us-down