ರೋಹಿತ್ ಶರ್ಮಾ ಭಾರತದ ನಾಯಕನಾಗಲಿ : ಗವಾಸ್ಕರ್
ಮುಂಬೈ : 2021ರ ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟಿ-20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ.
ಆ ಸ್ಥಾನಕ್ಕೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಹೆಸರು ಕೇಳಿಬರುತ್ತಿದೆ.
ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಮುಂದಿನ ಎರಡು ಟಿ20 ವಿಶ್ವಕಪ್ ಗಳಿಗೆ ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಕೆ.ಎಲ್.ರಾಹುಲ್ ಅಥವಾ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.
ಮುಂದಿನ ನಾಯಕ ಯಾರು ಎಂಬ ವಿಚಾರವಾಗಿ ಸ್ಟಾರ್ ಸ್ಪೋಟ್ಸ್ ನಲ್ಲಿ ಮಾತನಾಡಿದ ಅವರು, ಮುಂದಿನ ಎರಡು ವಿಶ್ವಕಪ್ ಗಳು ಒಂದರ ಹಿಂದೊಂದು ಬರಲಿದೆ. ಹೀಗಾಗಿ ಎರಡು ವಿಶ್ವಕಪ್ ಗಳಿಗೆ ಭಾರತ ತಂಡದ ನಾಯಕನಾಗಲು ರೋಹಿತ್ ನನ್ನ ಆಯ್ಕೆ ಎಂದಿದ್ದಾರೆ.
ಅಲ್ಲದೆ ಕೆ.ಎಲ್.ರಾಹುಲ್ ರನ್ನು ನಾನು ಉಪನಾಯಕನನ್ನಾಗಿ ನೋಡಲು ಎದುರು ನೋಡುತ್ತಿದ್ದೇನೆ.
ಜೊತೆಗೆ ರಿಷಬ್ ಪಂತ್ ಕೂಡ ಉಪನಾಯಕನಾಗಲು ಸೂಕ್ತವಾದ ಆಟಗಾರ ಎಂದಿದ್ದಾರೆ ಸುನೀಲ್ ಗವಾಸ್ಕರ್.