RP Singh | ಮೈಂಡ್ ಸೆಟ್ ಬದಲಿಸಿಕೊಳ್ಳಬೇಕು
ಟೀಂ ಇಂಡಿಯಾ ಬ್ಯಾಟರ್ಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಆರ್ಪಿ ಸಿಂಗ್ ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ದದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಗಳು ಅತ್ಯಂತ ಹೀನಾಯ ಪ್ರದರ್ಶನ ನೀಡಿದರು.
ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಆರ್ ಪಿ ಸಿಂಗ್, ಏಕದಿನ ಕ್ರಿಕೆಟ್ ಆಡುವಾಗ ಟೀಂ ಇಂಡಿಯಾದ ಬ್ಯಾಟರ್ ಗಳು ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕು. ಪ್ರತಿ ಎಸೆತವನ್ನು ಅಟ್ಯಾಕ್ ಮಾಡುತ್ತಾ ಭಾರಿ ಶಾಟ್ಸ್ ಹೊಡೆಯುತ್ತೇನೆ ಅಂದ್ರೆ ಅದು ಅಸಾಧ್ಯವಾದದ್ದು. ಪ್ರತಿ ಬಾರಿ ಇದೇ ರೀತಿ ಮಾಡಿದ್ರೆ ಇಂತಹ ಫಲಿತಾಂಶ ಮುರುಕಳಿಸುತ್ತಲೇ ಇರುತ್ತದೆ. ಕೊನೆಯವರೆಗೂ ಇನ್ನಿಂಗ್ಸ್ ಸಾಗಿಸಬೇಕು. ಇಂಗ್ಲೆಂಡ್ ನೆಲದಲ್ಲಿ ಟೈಲೆಂಡರ್ಗಳಿಗೆ ಬ್ಯಾಟಿಂಗ್ ಸುಲಭವಲ್ಲ. ಮೂರನೇ ಏಕದಿನ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸುವ ಜವಾಬ್ದಾರಿ ಟೀಂ ಇಂಡಿಯಾದ ಟಾಪ್ ಆರ್ಡರ್ ಮೇಲಿದೆ,” ಎಂದು ಟೀಂ ಇಂಡಿಯಾದ ಮಾಜಿ ಬೌಲರ್ ಆರ್.ಪಿ.ಸಿಂಗ್ ಹೇಳಿದ್ದಾರೆ.
![rp-singh-india-weakness-they-have-change-mindset saaksha tv](http://saakshatv.com/wp-content/uploads/2022/07/rohit-300x204.jpg)
ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಲ್ರೌಂಡ್ ಪ್ರದರ್ಶನ ನೀಡಿತು. ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್, 49 ಓವರ್ಗಳಲ್ಲಿ 246 ರನ್ಗಳಿಗೆ ಆಲೌಟ್ ಆಯಿತು. ಆದರೆ ಈ ಟಾರ್ಗೆಟ್ ಬೆನ್ನತ್ತಿದ ಭಾರತ 38.5 ಓವರ್ಗಳಲ್ಲಿ 146 ರನ್ಗಳಿಗೆ ಸರ್ವಪತನಗೊಂಡಿತು.
ಪಂದ್ಯ ಗೆಲ್ಲಲು 247 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತದ ಬ್ಯಾಟರ್ ಗಳು ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ (0) ಹಾಗೂ ಧವನ್(9) ಬಹುಬೇಗನೆ ವಿಕೆಟ್ ಒಪ್ಪಿಸಿದರೆ. ನಂತರ ಬಂದ ವಿರಾಟ್ ಕೊಹ್ಲಿ(16) ಹಾಗೂ ರಿಷಬ್ ಪಂತ್(0) ಬೇಜಾವಾಬ್ದಾರಿಯ ಆಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್(27), ಹಾರ್ದಿಕ್(29), ಜಡೇಜಾ(29) ಹಾಗೂ ಶಮಿ(23) ರನ್ಗಳಿಸಿದ್ದು ಬಿಟ್ಟರೆ, ಮತ್ಯಾರು ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲ. ಪರಿಣಾಮ 38.5 ಓವರ್ ಗಳಿಗೆ ಭಾರತ ಸರ್ವಪತನಗೊಂಡಿತು.