ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಧರ್ಮದ ಲೆಕ್ಕವಲ್ಲ ಸಂಘದ ಲೆಕ್ಕ ಬೇಕು – ಸಂಘದ ಲೆಕ್ಕ ಕೇಳಿದರೆ ಹಿಂದೂ ವಿರೋಧಿ ಪಟ್ಟ ಏಕೆ? ಶ್ರೀರಾಮನೇ ಲೆಕ್ಕ ಕೊಡುವಾಗ ಇವರಿಗೇನು ಸಮಸ್ಯೆ? ಪ್ರಿಯಾಂಕ್ ಖರ್ಗೆ ಖಾರವಾದ ಪ್ರಶ್ನೆ

Shwetha by Shwetha
June 17, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಆರ್ಥಿಕ ವ್ಯವಹಾರಗಳ ಬಗ್ಗೆ ಲೆಕ್ಕ ಕೇಳಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನಾನು ಕೇಳುತ್ತಿರುವುದು ಸಂಘದ ಲೆಕ್ಕವೇ ಹೊರತು ಹಿಂದೂ ಧರ್ಮದ ಲೆಕ್ಕವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಪಾರದರ್ಶಕತೆ ಬಯಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಇಲ್ಲಿ ಸಫಾಯಿ ಕರ್ಮಚಾರಿಗಳಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಪ್ರತಿಯೊಬ್ಬರಿಗೂ ಲೆಕ್ಕವಿದೆ. ಪ್ರತಿದಿನ ನೂರಾರು ಶಾಖೆಗಳನ್ನು ನಡೆಸುವ, ಸಾವಿರಾರು ಸಂಖ್ಯೆಯಲ್ಲಿ ಪಥಸಂಚಲನಗಳನ್ನು ಹಮ್ಮಿಕೊಳ್ಳುವ ಆರ್ ಎಸ್ ಎಸ್ ಸಂಸ್ಥೆಯ ಲೆಕ್ಕವನ್ನು ಕೇಳಬಾರದೇ? ಎಂದು ಸಚಿವರು ಪ್ರಶ್ನಿಸಿದ್ದಾರೆ. ಲೆಕ್ಕ ಕೇಳುವುದನ್ನು ಹಿಂದೂಗಳ ವಿರುದ್ಧದ ಪಿತೂರಿ ಎಂದು ಕರೆಯುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

Related posts

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

June 17, 2026
ರಸ್ತೆ ಮಾಡೋದು ರಾಕೆಟ್ ಸೈನ್ಸಾ? ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಬೆವರಿಳಿಸಿದ ಪರಿ!

ರಸ್ತೆ ಮಾಡೋದು ರಾಕೆಟ್ ಸೈನ್ಸಾ? ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಬೆವರಿಳಿಸಿದ ಪರಿ!

June 17, 2026

ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವವರು ಈ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪುರಾಣಗಳ ಪ್ರಕಾರ ಶ್ರೀರಾಮನೇ ಲೆಕ್ಕ ಕೊಡುತ್ತಾನೆ ಎಂಬ ನಂಬಿಕೆಯಿದೆ. ಅಂತಹದ್ದರಲ್ಲಿ ಶ್ರೀರಾಮನ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರು ಲೆಕ್ಕ ಕೊಡಲು ಹಿಂಜರಿಯುತ್ತಿರುವುದು ಏಕೆ? ನನ್ನ ಪತ್ರದಲ್ಲಿ ಎಲ್ಲಿಯೂ ಹಿಂದೂ ಎಂಬ ಪದವನ್ನು ಬಳಸಿಲ್ಲ. ನಾನು ಮಾತನಾಡುತ್ತಿರುವುದು ಕೇವಲ ಸಂಘಟನೆಯ ಹಣಕಾಸಿನ ಪಾರದರ್ಶಕತೆಯ ಬಗ್ಗೆ ಮಾತ್ರ ಎಂದು ಅವರು ವಿವರಿಸಿದ್ದಾರೆ.

ಇದೇ ವೇಳೆ ಮೋಹನ್ ಭಾಗವತ್ ಅವರು ತಮ್ಮ ಪತ್ರಕ್ಕೆ ಉತ್ತರ ನೀಡಿದ್ದಾರೆ ಎಂಬ ಸುದ್ದಿಯನ್ನು ಸಚಿವರು ಅಲ್ಲಗಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ತಿರುಚಿದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾನು ಪತ್ರ ಬರೆದಿದ್ದು ನಿನ್ನೆ, ಆದರೆ ಬಿಜೆಪಿ ನಾಯಕರು ಜೂನ್ 13 ರಂದು ಭಾಗವತ್ ಅವರು ನೀಡಿದ್ದ ಹಳೆಯ ಹೇಳಿಕೆಯನ್ನೇ ಈ ಪತ್ರಕ್ಕೆ ನೀಡಿದ ಉತ್ತರ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಜನರನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವ ಯಾವುದೇ ಸಂಘಟನೆಯು ಹಣಕಾಸಿನ ವಿಚಾರದಲ್ಲಿ ಪಾರದರ್ಶಕವಾಗಿರಬೇಕು ಎಂಬುದು ಸಚಿವರ ವಾದವಾಗಿದೆ. ಲೆಕ್ಕ ಕೇಳಿದ್ದನ್ನೇ ಧರ್ಮಕ್ಕೆ ಜೋಡಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಸಚಿವರು ಹರಿಹಾಯ್ದಿದ್ದಾರೆ.

ShareTweetSendShare
Join us on:

Related Posts

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

ಟೆಲಿಗ್ರಾಮ್ ನಿರ್ಬಂಧ ಕುರಿತು NTA ಸ್ಪಷ್ಟನೆ; ನಕಲಿ ನೀಟ್ ಪೇಪರ್ ಜಾಲದ ವಿರುದ್ಧ ಕ್ರಮ

by Shwetha
June 17, 2026
0

ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ವೇದಿಕೆಯ ಕೆಲವು ಚಾನೆಲ್‌ಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸ್ಪಷ್ಟನೆ ನೀಡಿದೆ. NTA ಪ್ರಕಾರ, ಕೆಲವು ಟೆಲಿಗ್ರಾಮ್...

ರಸ್ತೆ ಮಾಡೋದು ರಾಕೆಟ್ ಸೈನ್ಸಾ? ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಬೆವರಿಳಿಸಿದ ಪರಿ!

ರಸ್ತೆ ಮಾಡೋದು ರಾಕೆಟ್ ಸೈನ್ಸಾ? ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಬೆವರಿಳಿಸಿದ ಪರಿ!

by Shwetha
June 17, 2026
0

ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಚಿವ ಕೃಷ್ಣ ಭೈರೇಗೌಡ ಅವರು ಭರ್ಜರಿ ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗ್ರೇಟರ್ ಬೆಂಗಳೂರು...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 17, 2026
0

ದಿನ ಭವಿಷ್ಯ : 17-06-2026 ಮೇಷ ರಾಶಿ ವೃತ್ತಿ ಮತ್ತು ವ್ಯಾಪಾರ: ಉದ್ಯೋಗದಲ್ಲಿರುವವರಿಗೆ ಇಂದು ಅತ್ಯಂತ ಉತ್ಸಾಹದ ದಿನ. ನಿಮ್ಮ ನಾಯಕತ್ವದ ಗುಣಗಳನ್ನು ಮೇಲಧಿಕಾರಿಗಳು ಗುರುತಿಸುತ್ತಾರೆ. ವ್ಯಾಪಾರಸ್ಥರಿಗೆ...

fifa world cup2026- spain vs capeverde

by admin
June 16, 2026
0

ಅಂಟ್ಲಾಟಿಕ್ ಮಹಾಸಾಗರವನ್ನು ದಾಟಿ ಬಂದ "ಬ್ಲೂ ಶಾರ್ಕ್ಸ್" ಮೀನುಗಳ ಫುಟ್‍ಬಾಲ್ ಪಯಣ..! ಕೇಪ್ ವರ್ಡೆ...ನಿನ್ನೆ ಮೊನ್ನೆಯ ತನಕ ಯಾರು ಕೂಡ ಕಣ್ಣೆತ್ತಿ ನೋಡದ ವಿಶ್ವ ಭೂಪಟದ ಒಂದು...

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

by Shwetha
June 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಬಂಡಾಯದ ಕಿಡಿ ಈಗ ಉತ್ತರ ಪ್ರದೇಶದ ಚುನಾವಣಾ ಅಖಾಡದಲ್ಲಿ ಭಾರೀ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ರೆಬೆಲ್ ಸಂಸದರು ದೆಹಲಿಯಲ್ಲಿ ಎನ್‌ಡಿಎ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram