ನ್ಯಾಷನಲ್ ಇಂಟರೆಸ್ಟ್ ಗೆ ತದ್ವಿರುದ್ಧವಾಗಿ RSS ಕೆಲಸ ಮಾಡುತ್ತದೆ: ಪ್ರಿಯಾಂಕ್ ಖರ್ಗೆ Saaksha Tv
ಬೆಂಗಳೂರು: ಈಶ್ವರಪ್ಪ ಅವರು ಮೂಲತಃ ಆರ್ ಎಸ್ ಎಸ್ ನಿಂದ ತರಬೇತಿ ಪಡೆದ ರಾಜಕಾರಣಿ. ನ್ಯಾಷನಲ್ ಇಂಟರೆಸ್ಟ್ ಗೆ ತತ್ವಿರುದ್ಧವಾಗಿ ಆರ್ ಎಸ್ ಎಸ್ ಕೆಲಸ ಮಾಡುತ್ತಲೇ ಇದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ಕೆಲವು ದಿನಗಳಿಂದ ಈಶ್ವರಪ್ಪ ರಾಜಿಮಾನೆ ನಾವು ಕೇಳುತ್ತಾ ಇದ್ದೀವಿ. ಆದರೆ ಅವರು ಒಂದು ದಿನ ಕೇಸರಿ ಧ್ವಜ ಕೆಂಪು ಕೋಟೆ ಮೇಲೆ ಹಾರಿಸುತ್ತೇವೆ ಅನ್ನೊದನ್ನು ಅವರು ಸಮರ್ಥನೆ ಮಾಡಿಕೊಳುತ್ತಾ ಇದ್ದಾರೆ. ಆದರೆ ಪ್ರಸ್ತುತ ಸಂವಿಧಾನದಲ್ಲಿ ಅದು ಅಸಂವಿಧಾನಿಕ ಹೇಳಿಕೆ. RSS ಇತಿಹಾಸ ತಿರುಗಿಸಿ ನೋಡಿದರೆ ಅವರ ಬಣ್ಣ ಬಯಲಾಗುತ್ತದೆ ಎಂದು ಕಿಡಿಕಾರಿದರು.
ಅಲ್ಲದೇ ಆಗಷ್ಟ್ 14 1997 ರಂದು ಒಂದು ಆರ್ಟಿಕಲ್ ಪಬ್ಲಿಷ್ ಆಗುತ್ತದೆ, ಅದರಲ್ಲಿ ತ್ರಿವರ್ಣ ಧ್ವಜ ತಿರಸ್ಕಾರ ಮಾಡಿರೋದು ಆರ್ಟಿಕಲ್ ನಲ್ಲಿ ಇರುತ್ತದೆ. ತ್ರಿವರ್ಣ ಧ್ವಜದಿಂದ ನಮಗೆ ತೊಂದರೆಯಾಗುತ್ತದೆ, ನಾಥೂರಾಮ್ ಗೂಡ್ಸೆ ಗಾಂಧಿಜಿಯವರನ್ನು ಕೊಲ್ಲುತ್ತಾರೆ. ದೇಶ ದ್ರೋಹದ ಚಟುವಟಿಕೆ ಮಾಡುತ್ತಾ ಇದ್ದಾರೆ ಅಂತ ಆರ್ ಎಸ್ ಎಸ್ ನ ಬ್ಯಾನ್ ಮಾಡುತ್ತಾರೆ ಎಂದು ಹೇಳಿದರು.
RSS ನ್ನು ಬ್ಯಾನ್ ಮಾಡಿರುವುದನ್ನು ಪಟೇಲ್ ಅವರು ತೆಗಿತಾರೆ, ಅದಕ್ಕೊಂದಿಷ್ಟು ಕಂಡೀಷನ್ ಹಾಕಿದ್ದರು. ನಮ್ಮ ಸಂವಿಧಾನಕ್ಕೆ ಬದ್ದರಾಗಿರಬೇಕು ಎಂದು ಕಂಡೀಷನ್ ಹಾಕಿ ನಿಷೇಧ ವಾಪಸ್ ಪಡದಿದ್ದರು. ಗೋಲ್ವಾಕರ್ ಬಂಚ್ ಆಫ್ ಥಾಟ್ಸ್ ಅನ್ನೊ ಪುಸ್ತಕದಲ್ಲಿ ಈ ಧ್ವಜ ಯಾಕೆ ಬೇಕು ಪ್ರಾಚೀನ ಭಾರತದಲ್ಲಿ ಈ ಧ್ವಜ ಇತ್ತಾ? ಇವಾಗ ಯಾಕೆ ಬೇಕು ಅಂತ ಬರೆದಿದ್ದಾರೆ. ಪ್ರಾಚೀನ ಭಾರತದಲ್ಲಿ ಅವರದ್ದೇ ಬೇರೆ ಬೇರೆ ಸಾಮಾಜ್ಯಗಳು ಇದ್ದವು. ಹಾಗಿದ್ದರೆ ಪ್ರಾಚೀನದಲ್ಲೆ ಅದನ್ನೂ ಹೇಳಬೇಕಿತ್ತು ಎಂದು ಕಿಡಿಕಾರಿದರು.