ನಿಂಬೆಹಣ್ಣು.. ಮಾಟ-ಮಂತ್ರ.. ಸೋಮಶೇಖರ್ ಗೆ ಪ್ರಜ್ವಲ್ ಗುನ್ನಾ.!
ಹಾಸನ : ಹಾಸನದಲ್ಲಿ ಪ್ರೀತಂಗೌಡ್ರೇ ಇರಬೇಕು. ನಿಂಬೆಹಣ್ಣಿಗೆ ಪ್ರತಿ ನಿಂಬೆಹಣ್ಣು ತೋರಿಸಿ ಕಂಟ್ರೋಲ್ ಮಾಡುವ ಶಕ್ತಿ ಇದ್ದರೆ ಅದು ಪ್ರೀತಂಗೌಡರಿಗೆ ಮಾತ್ರ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಎಸ್ ಟಿ ಸೋಮಶೇಖರ್ ವ್ಯಂಗ್ಯವಾಡಿದ್ದರು.
ಈ ಬಗ್ಗೆ ಇಂದು ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿ, ನಿಂಬೆಹಣ್ಣಿನ ಬಗ್ಗೆ ಮಾತಾಡೋರಿಗೆ ಹಿಂದುತ್ವದ ಕುರಿತು ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸೋಮಶೇಖರ್ ಅವರ ನಿಂಬೆಹಣ್ಣು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ರಫೆಲ್ ಯುದ್ಧ ವಿಮಾನ ಖರೀದಿಸುವಾಗ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ವಿಮಾನದ ಚಕ್ರಕ್ಕೆ ನಿಂಬೆಹಣ್ಣು ಇರಿಸಿದ್ದರು. ಅವರು ಮಾಟ-ಮಂತ್ರ ಮಾಡಿ ನಿಂಬೆಹಣ್ಣು ಇಟ್ಟಿದ್ದರಾ ಎಂದು ಪ್ರಶ್ನಿಸಿದರು.
ಇಲ್ಲಿ ಹೇಳ್ತೀನಿ ಕೇಳಿ.. ನಾವಿರೋ ತನಕ ಹಾಸನದಲ್ಲಿ ಜೆಡಿಎಸ್ ಗೆ ಸೋಲಿಲ್ಲ : ಪ್ರಜ್ವಲ್
ಇನ್ನು ಯಾವುದೇ ದೇವಸ್ಥಾನಗಳಿಗೆ ಹೋದರೂ ಅಲ್ಲಿ ಮೊದಲಿಗೆ ನಿಂಬೆಹಣ್ಣನ್ನು ಕೊಡುವುದು ಸಂಪ್ರದಾಯ ಇದೆ. ಶೃಂಗೇರಿ ದೇವಾಲಯವನ್ನು ರೇವಣ್ಣನವರು ಬಹಳವಾಗಿ ನಂಬಿದ್ದಾರೆ.
ಜಾತಿ ಒಡೆಯೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮ : ಶೋಭಾ ಕರಂದ್ಲಾಜೆ
ಅಲ್ಲಿಯೂ ನಿಂಬೆಹಣ್ಣನ್ನು ಕೊಡುತ್ತಾರೆ. ಹಾಗಂತ ರೇವಣ್ಣನವರು ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಅಂತ ಹೇಳುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ ಪ್ರಜ್ವಲ್, ಸೋಮಶೇಖರ್ ಅವರಿಗೆ ಅವರಿಗೆ ಹಿಂದುತ್ವದ ಬಗ್ಗೆ ಗೊತ್ತಿಲ್ಲ ಅಂತ ಕಾಣಿಸುತ್ತದೆ ಎಂದು ಟೀಕಿಸಿದರು.
ಇದೇ ವೇಳೆ ವಿಜಯೇಂದ್ರಗೆ ಟಾಂಗ್ ನೀಡಿದ ಪ್ರಜ್ವಲ್ ರೇವಣ್ಣ, 50 ವರ್ಷದಿಂದ ನಮ್ಮ ಕುಟುಂಬ ರಾಜಕೀಯ ನೋಡಿಕೊಂಡು ಬಂದಿದೆ.
ಇಲ್ಲಿ ಗೆಲುವು ಸೋಲು ಶಾಶ್ವತವಲ್ಲ. ನಮ್ಮ ಬಗ್ಗೆ ಮಾತನಾಡುವ ಬದಲು ಅವರ ತಂದೆ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡಲಿ ಎಂದು ಹೇಳಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel