ನನಗೆ ಮಾತ್ರವೇ ಯಾಕ್ ಹೀಗೆ,,??? ದೇವ್ರೇ ಅದ್ಯಾಕೆ ನನಗೆ ಮಾತ್ರ ಇಂತಹ ಕಷ್ಟಗಳು ಬರುತ್ತೆ… ನನ್ನ ಜೀವನವೇ ಯಾಕ್ ಹೀಗೆ… ನನ್ನ ಬದುಕಿನಲ್ಲಿ ಯಾಕಿಷ್ಟು ಕಷ್ಟಗಳು…??? ನನ್ನ ಇನ್ನೂ ಯಾಕ್ ಬದುಕಿಸಿದ್ದೀಯಾ… ಯಾರಿಗೆ ನಾನ್ ಯಾವ ಮೋಸ ಮಾಡಿದ್ದೀನಿ ಅಂತ ನನಗೆ ಈ ಸಮಸ್ಯೆಗಳು.. ಯಾವ ಜನ್ಮದಲ್ಲಿ ಅದೇನ್ ಪಾಪ ಮಾಡಿರುವೆ ಅಂತ ಈ ನೋವು ಸಂಕಟ.. ಈ ದುಃಖ , ಈ ಕಣ್ಣೀರು.. ಅವರು ನೋಡು ಅಷ್ಟ್ ಚನ್ನಾಗಿದ್ದಾರೆ.. ಇವರಿಷ್ಟು ಚನಾಗಿದ್ದಾರೆ…
ಅವರ ಜೀವನ ನೋಡು ಮಸ್ತ್ ಇದೆ.. ಇವರ ಬದುಕು ನೋಡು ,, ಇವರದ್ದು ಲೈಫ್ ಅಂದ್ರೆ… ಅವರ ಜೀವನ ಪರ್ಫೆಕ್ಟ್… ಅವರಷ್ಟೆಲ್ಲಾ ಮೋಸ ಮಾಡಿದ್ರೂ ಚನಾಗಿದ್ದಾರೆ…
ಅಷ್ಟ್ ಖುಷಿಯಾಗಿದ್ದಾರೆ… ನನ್ನ ಲೈಫ್ ಯಾಕ್ ಆ ರೀತಿ ಇಲ್ಲ… ನಾನೇನ್ ಕರ್ಮ ಮಾಡಿದ್ದೆ.. ನನ್ನ ಹಣೆ ಬರಹ ಯಾಕ್ ಹೀಗಿದೆ..
ನನ್ನ ಜೀವನ ಮಾತ್ರವೇ ಯಾಕೆ ನರಕ ಮಾಡಿಬಿಟ್ಟೆ.. ಯಾಕೆ.??? ಯಾಕೆ…??? ಅಂತ ಅನ್ಸುತ್ತೆ…
ಸಾಕು ಈ ಜೀವನ ಜಿಗುಪ್ಸೆ ಹುಟ್ಟಿದೆ ಅಂತ ದೇವರನ್ನ ಕೋಸಿಸಿದ್ದೀನಿ ಗೆಳೆಯ.. ( Dairy )
ಆದ್ರೆ ಆತ್ಮಾವಲೋಕನ , ಒಂಟಿತನ , ಒಂಟಿ ಓಡಾಟ, ನಾನಾ ರೀತಿಯ ಜನರ ಜೊತೆಗೆ ಮಾತುಕತೆ ನನ್ನ ಮನಸ್ಥಿತಿಯನ್ನ ಒಂದ್ ಹಂತಕ್ಕೆ ಬದಲಾಯಿಸಿತು ಗೊತ್ತಾ..??
ಸೆಲೆಬ್ರಿಟಿಗಳ ಜೀವನ ಸೂಪರ್ ಅಂದ್ ಕೊಂಡಿದ್ದೆ… ಅಷ್ಟ್ ದುಡ್ಡಿದೆ ಇಷ್ಟ್ ದುಡ್ಡಿದೆ.. ಅದೃಷ್ಟವಂತರು ಅಂದ್ ಕೊಂಡಿದ್ದೆ… ಮಣ್ಣು ಇಲ್ಲ… ಅವರ ಜೀವನದಲ್ಲೇ ಸಾವಿರ ಕಷ್ಟ ಕಾರ್ಪಣ್ಯಗಳಿವೆ… ಖುಷಿಯೇ ಇರಲ್ಲ … ನಿಜವಾದ ಪ್ರೀತಿಯೇ ಇರಲ್ಲ… ದುಡ್ಡಿದ್ ಏನ್ ಮಾಡೋದು..
ಇನ್ನು ಶ್ರೀಮಂತರಿಗೇನ್ ತುಂಬಾ ಖುಷಿ ಇರುತ್ತಾ…??? ಅವರಿಗೆ ದುಡ್ಡಿದ್ರೂ ಸಾವಿರ ನ್ಯೂನತೆಗಳು , ಕೊರಗು , ಸಂಕಟ , ಕಷ್ಟ ಕಾರ್ಪಣ್ಯಗಳು..
ಬಡವ , ಬಲ್ಲಿದವರು , ಪೆದ್ದರು , ಬುದ್ದಿವಂತರು , ಪ್ರತಿಯೊಬ್ಬರಿಗೂ ,,, ಅವರದ್ದೇ ಆದ ಕಷ್ಟಗಳಿವೆ.. ಅವರಿಗೂ ಜೀವನ ಸಾಕೆನಿಸುವಂತಹ ಘಟ್ಟಗಳು ಎದುರಾಗಿವೆ… ಅವರಲ್ಲೂ ಒಂದಾದ್ರೂ ಒಂದು ಕಾರಣ ಕೊರಗಿಸುತ್ತದೆ…
ನನ್ನ ಸ್ನೇಹಿತರೇ ನೋಡು ಒಬ್ಬೊಬ್ಬರಿಗೂ ಒಂದೊಂದು ಸಂಕಟವೇ.. ಇದೆಲ್ಲಾ ಅರಿವಾಗಿದ್ದು ಅವರೊಂದಿಗೆ ನಾ ಮಾತನಾಡಿ ಅವರ ಜೀವನದ ಬಗ್ಗೆ ಆಲಿಸಿದಾಗಲೇ.. ಅಗಲೇ ಎನಿಸಿದ್ದು ಅಯ್ಯೋ ದೇವರೆ ..??
ನಿಜ ಯಾರ ಜೀವನವೂ ಪರ್ಫೆಕ್ಟ್ ಇಲ್ಲ… ಯಾರ ಜೀವನದಲ್ಲೂ ಎಲ್ಲವೂ ಸರಿ ಇಲ್ಲ… ಕಷ್ಟಗಳಿಲ್ಲದ ವ್ಯಕ್ತಿಗಳೇ ಇಲ್ಲ… ಎಲ್ಲರಲ್ಲೂ ಒಂದೊಂದು ಕೊರಗಂತೂ ಖಂಡಿತವಾಗಿಯೂ ಇದೆ…
ಅಷ್ಟೇ ಯಾಕೆ ನಾನು ಯೋಚನೆ ಮಾಡಿದಾಗ ನನಗನಿಸಿದ್ದು ,,, ಧರ್ಮದ ಹೋರಾಟದಲ್ಲಿ ಧರ್ಮದ ಪರ ನಿಂತವರೇ ಪಾಪ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದು ಇತಿಹಾಸದ ಪುಟಗಳಲ್ಲಿ ಇಲ್ಲವಾ..??
ದೇವರುಗಳೇ ಕಷ್ಟಗಳನ್ನ ಅನುಭವಿಸಿದ ಇತಿಹಾಸವಿಲ್ಲವಾ…??? ಇನ್ನೂ ಮನುಷ್ಯ ಜೀವಿಗಳು ನಾವು… ಕಷ್ಟ ಇಲ್ಲದೇ ಇರುತ್ತಾ…???
ಎಲ್ರಿಗೂ ಇದೆ… ನನಗೂ ಸಮಸ್ಯೆ ಇದೆ… ಸಹನೆ ಇದ್ರೆ ಎಲ್ಲವೂ ಬಗೆ ಹರಿಯುತ್ತೆ… ಜೀವನವನ್ನ ಈ ರೀತಿ ನರಕ ಮಾಡಿಕೊಂಡವರೂ ನಾವೇ ಅಂದ್ ಮೇಲೆ ಸರಿ ಪಡಿಸಿಕೊಳ್ಳುವ ಶಕ್ತಿ ಇಲ್ವಾ…??? ಖಂಡಿತ ಇದೆ… ಸಹನೆ ಇದ್ರೆ ಎಲ್ಲವೂ ಸರಿಹೋಗುತ್ತೆ…
ನನಗೆ ಕನ್ನಡಿ ಮುಂದೆ ನಿಂತಾಗ ಅನ್ನಿಸಿದ್ದು ನನಗೆ ಆ ದೇವರು ಕೈ, ಕಾಲು , ಕಿವಿ , ಮಾತು , ಕಣ್ಣು , ಯೋಚನಾ ಶಕ್ತಿ , ವಿವೇಚನೆ , ಸ್ನೇಹಿತರು , ಪುಟ್ಟ ಪ್ರೀತಿಸುವ ಕುಟುಂಬ , ಕೆಲ ಹಿತೈಷಿಗಳನ್ನೂ ಕೊಟ್ಟಿದ್ದಾರೆ.. ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಕೊಟ್ಟಿದ್ದಾರೆ… ಎಷ್ಟೋ ಜನರಿಗೆ ಈ ವಿಚಾರಗಳ ಕೊರತೆಯಿದೆ… ಅವರೇ ಬದುಕಿದ್ದಾಗ ,, ನನಗೇನ್ ಆಗಿದೆ…. ನನ್ನ ಜೀವನವೂ ಎಲ್ಲರಂತೆಯೇ… ಎಲ್ಲರಿಗೂ ನೋವಿದೆ , ಸಂಕಟ ಇದೆ ಏರಿಳಿತಗಳಿದೆ ನನಗೂ ಇದೆ ಅಷ್ಟೇ ಅನ್ನಿಸಿದಾಗ ಮನಸ್ಸು ಕೊಂಚ ಹಗುರಾಯ್ತು
ಕಣೋ ಗೆಳೆಯ..
ಆದ್ರೆ ಸಮಾಧಾನ ಆಗಿದ್ದು ನಿನ್ನ ಜೊತೆಗೆ ಹಂಚಿಕೊಂಡಾಗ… ನೀನೆಷ್ಟು ಮುದ್ದು ಕಣೋ ಮಿತ್ರ ನಾನೆಷ್ಟೇ ಹಿಂಸೆ ಕೊಟ್ಟರೂ ನನ್ನ ಗೋಳು ಮೌನವಾಗಿ ಕೇಳಿಸಿಕೊಳ್ತಿಯ ಥ್ಯಾಂಕ್ಸ್ ಕಣೋ …
ಗೆಳೆಯ ಐ ಲವ್ ಯು… ( Dairy )
– ನಿಹಾರಿಕಾ ರಾವ್ –