ADVERTISEMENT
Friday, August 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಬುದ್ದಿವಂತನೆಂಬ ಡೆಡ್‌ಎಂಡ್‌ಗಿಂತ ಮೂರ್ಖನೆಂಬ ಕಂಟಿನ್ಯೂ ಪ್ರೋಸೆಸ್‌ ಹೆಚ್ಚು ಮಹತ್ವದ್ದು:

Shwetha by Shwetha
October 9, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Saakshatv Oshoyisam episode 7
Share on FacebookShare on TwitterShare on WhatsappShare on Telegram

ಓಶೋಯಿಸಂ:

ಬುದ್ದಿವಂತನೆಂಬ ಡೆಡ್‌ಎಂಡ್‌ಗಿಂತ ಮೂರ್ಖನೆಂಬ ಕಂಟಿನ್ಯೂ ಪ್ರೋಸೆಸ್‌ ಹೆಚ್ಚು ಮಹತ್ವದ್ದು: Saakshatv Oshoyisam episode 7

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026

ಓಶೋ ತಮ್ಮ ಉಪನ್ಯಾಸಗಳಲ್ಲಿ, ಪ್ರವಚನಗಳಲ್ಲಿ ಹಾಗೂ ಸತ್ಸಂಗಗಳಲ್ಲಿ ಮನುಷ್ಯನ ಒಳಗಿನ ಪರಿವರ್ತನೆಯ ಕುರಿತಾಗಿ ಸಾಕಷ್ಟು ಮಾತಾಡಿದ್ದಾರೆ. ಮನುಷ್ಯನ ಅಂತರಂಗದ ಪರಿವರ್ತನೆಯನ್ನು ಒಂದು ರೀತಿಯ ವೈಜ್ಞಾನಿಕ ಕ್ರಾಂತಿ ಎಂದು ಓಶೋ ಬಗೆಯುತ್ತಿದ್ದರು. ತಮ್ಮ ಸಮಕಾಲೀನ ಸಂಗಾತಿಗಳ ಜೀವನದ ನೋವು-ನಲಿವು, ದುಃಖ-ದುಮ್ಮಾನ, ಬೇಸರ-ಹತಾಶೆ, ಅಸಮಧಾನ-ರಾಗ-ದ್ವೇಷ, ಸಂತೋಷ-ಸಂತೃಪ್ತಿ ಎಲ್ಲಾ ಭಾವನೆಗಳನ್ನೂ ಓಶೋ ಅರ್ಥ ಮಾಡಿಕೊಳ್ಳುತ್ತಿದ್ದರು, ತಮ್ಮದೇ ಆದ ದೃಷ್ಟಿಕೋನದಲ್ಲಿ ಆ ಭಾವಗಳಿಗೆ ಒಂದು ತಾತ್ವಿಕವಾದ ವ್ಯಾಖ್ಯಾನ ನೀಡುತ್ತಿದ್ದರು. ಆಧುನಿಕ ಬದುಕಿನ ವೇಗದ ಜಂಜಾಟದಲ್ಲಿ ಮನಸನ್ನು ಪ್ರಶಾಂತವಾಗಿಸಿಕೊಳ್ಳಲು ಮತ್ತು ಬದುಕನ್ನು ನೆಮ್ಮದಿಯಾಗಿಸಿ ಸಹ್ಯಗೊಳಿಸಲು ಧ್ಯಾನದ ವಿಧಾನವನ್ನು ಉಪದೇಶಿಸುತ್ತಿದ್ದರು. ಓಶೋರ ಜೀವನಾನುಭವ, ತಾತ್ವಿಕತೆ, ನಿಲುವು ಮತ್ತು ಬದುಕಿನ ಸಂತಸ, ಸುಖ ಹಾಗೂ ಶಾಂತಿಯ ಕುರಿತಾಗಿ ಓಶೋ ಕಂಡುಕೊಂಡ ಮಾರ್ಗ ಸರಳ ಆದರೆ ಅದನ್ನು ಅನುಸರಿಸಲು ಮತ್ತು ಅನುಭವಿಸಲು ನಾವೂ ಓಶೋರಂತೆಯೇ ಸರಳವಾಗಬೇಕು. ಓಶೋ ಬುದ್ದಿವಂತಿರಿಗಿಂತ ಹೆಚ್ಚು ಮೂರ್ಖರ ವಿಧಾನಗಳನ್ನು ಇಷ್ಟಪಡುತ್ತಿದ್ದರು. Saakshatv Oshoyisam episode 7
Saakshatv Oshoyisam episode 2
ಓಶೋ ಹೇಳುತ್ತಿದ್ದರು, ಇಡೀ ಅಸ್ತಿತ್ವಕ್ಕೆ ಸೇರಿದವರು ನೀವು; ಒಂದು ದೊಡ್ಡ ವಿಶ್ವ ನಿಮ್ಮದು. ಹೀಗಿದ್ದಾಗ ಅತ್ಯಂತ ಕ್ಷುಲ್ಲಕವೆನಿಸುವ ಸಣ್ಣ-ಸಣ್ಣ ವಿಷಯಗಳಿಗೆ ನಿಮ್ಮನ್ನು ನೀವು ಏಕೆ ಸೀಮಿತಗೊಳಿಸಿಕೊಳ್ಳುತ್ತೀರಿ. ಪೂರ್ತಿ ಲಭ್ಯವಾಗುವ ಅವಕಾಶವಿದ್ದಾಗ ಪೂರ್ತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ; ಯಕಃಶ್ಚಿತ ಸಂಗತಿಗಳಿಗೆ ಹಾತೊರೆದು ನಿರಾಶರಾಗಬೇಡಿ. ಓಶೋ ಮಟ್ಟಿಗೆ ಯಶಸ್ಸಿನ ಸರಳ ಸೂತ್ರವೇ ಇದು. ಒಂದಷ್ಟು ಕಾದರೂ ಇಡಿಯಾಗಿ ಪಡೆದುಕೊಳ್ಳುವುದು, ಇಡಿಯಾಗಿ ಜೀವಿಸುವುದು ಮತ್ತು ಪೂರ್ತಿ ಅಸ್ಥಿತ್ವವನ್ನು ಕನವರಿಸುವುದು ಜೊತೆಗೆ ಆ ಪೂರ್ತಿ ಅಸ್ಥಿತ್ವದ ಭಾಗವಾಗಿ ಬದುಕುವುದು.

ಒಬ್ಬ ವ್ಯಕ್ತಿಯನ್ನು (ಅವನನ್ನು ಅಥವಾ ಅವಳನ್ನು) ನೀವು ನಿಜಕ್ಕೂ ಪ್ರೀತಿಸಿದ್ದೇ ಆದರೆ, ನೀವು ಅವರ ವೈಯಕ್ತಿಕ ಜೀವನದಲ್ಲಿ ಖಂಡಿತಾ ಹಸ್ತಕ್ಷೇಪ ಮಾಡುವುದಿಲ್ಲ. ಅವನ ಅಥವಾ ಅವಳ ಆಂತರಿಕ ಪ್ರಪಂಚದ ಗಡಿಗಳನ್ನು ದಾಟಲು ನೀವು ಧೈರ್ಯ ಮಾಡುವುದಿಲ್ಲ; ಕನಿಷ್ಠ ಹಾಗೆ ಯೋಚಿಸುವುದೂ ಇಲ್ಲ. ಪ್ರಾಯಶಃ ಇದೊಂದೇ ನಿಮ್ಮ ಬಾಂದವ್ಯವನ್ನು ಜೀವಂತವಾಗಿಡುವ ಸರಳ ಸೂತ್ರ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರತ್ಯೇಕತೆಯಿರುತ್ತದೆ. ಯಾರೂ ಯಾರಿಗೂ ಸ್ವಂತವಾಗುವುದಿಲ್ಲ, ಸ್ವಂತವಾಗಲೂಬಾರದು. ಪ್ರತಿಯೊಬ್ಬರ ಪ್ರತೀ ಪ್ರತ್ಯೇಕತೆಯನ್ನು ಗೌರವಿಸಿದಾಗ ಮಾತ್ರ ಅವರೂ ನಿಮ್ಮ ಬಗೆಗೆ ಅದೇ ಗೌರವದ ಭಾವನೆ ತಳೆಯುತ್ತಾರೆ. ಹೀಗೊಂದು ದಿವ್ಯ ಬಾಂದವ್ಯ ಮೊಳೆತಾಗ ಜೀವನದಲ್ಲಿ ಹರ್ಷ ನೆಲೆಸುತ್ತದೆ, ನೆಮ್ಮದಿ ದಾಖಲಾಗುತ್ತದೆ. ವೈಯಕ್ತಿಕ ಜೀವನ ನೆಮ್ಮದಿಯಿಂದ ಇದ್ದಾಗ ಮಾತ್ರವೇ ಬಾಹ್ಯ ವಿಶ್ವದಲ್ಲಿ ನಿಮ್ಮದೊಂದು ಅಸ್ಥಿತ್ವ ದಾಖಲಾಗಲು ಸಾಧ್ಯ. ಪ್ರತಿ ಸಾಧಕನ ಶಕ್ತಿ ಮತ್ತು ಸಾಮರ್ಥ್ಯಗಳ ಹಿಂದೆ ಅವನ ವಿವೇಕ, ವಿವೇಚನೆ ಮತ್ತು ಜ್ಞಾನ ಮಾತ್ರ ಅಡಗಿರುವುದಿಲ್ಲ; ಅವನ ವೈಯಕ್ತಿಕ ಬದುಕಿನಲ್ಲಿರುವ ನೆಮ್ಮದಿಯೂ ಕಾರಣವಾಗಿರುತ್ತದೆ.

ಬದುಕೆಂದರೇ ಕೇವಲ ಅಗಾಧ ಬುದ್ದಿವಂತಿಕೆಯಲ್ಲ. ನಾವು ಹಾಗಂದುಕೊಂಡೇ ಸೋಲುತ್ತೇವೆ. ಬದುಕಿನಲ್ಲಿ ಗಳಿಸಿಕೊಳ್ಳಲು ಕೊಂಚ ಮೂರ್ಖತನವೂ ಅಗತ್ಯ. ಮನುಷ್ಯ ಮೂರ್ಖನಾಗಿದ್ದಷ್ಟು ಕಾಲ ಹೆಚ್ಚು ಕಲಿಯಲು ಉತ್ಸುಕನಾಗುತ್ತಾನೆ. ಮೂರ್ಖತನ ಮನುಷ್ಯನನ್ನು ಅಹಂಕಾರ ವಿಮುಖನನ್ನಾಗಿಸುತ್ತದೆ. ನಮ್ಮಲ್ಲಿ ಮೂರ್ಖತನ ಇರುವಷ್ಟೂ ದಿನ ನಾವು ವಿದ್ಯಾರ್ಥಿಗಳಾಗಿರುತ್ತೇವೆ. ಮೂರ್ಖನೊಬ್ಬನ ಬದುಕಿನಲ್ಲಿ ಅನಪೇಕ್ಷಿತ ಇಗೋಗಳಿರುವುದಿಲ್ಲ. ಮೂರ್ಖನೊಬ್ಬ ತನ್ನ ಜೀವನವನ್ನು ಆನಂದಿಸುವಷ್ಟು ಒಬ್ಬ ಬುದ್ದಿವಂತ ಪಂಡಿತ ಆನಂದಿಸಲಾರ. ಮೂರ್ಖನ ತಪ್ಪುಗಳು ಹಾಗೂ ದೋಷಗಳು ಅವನನ್ನು ಪ್ರಯೋಗಶೀಲನನ್ನಾಗಿಸುತ್ತದೆ. ಅವನು ಎಡುವುತ್ತಲೇ ಸರಿಯಾದ ದಾರಿ ಹುಡಕಿಕೊಳ್ಳುತ್ತಾನೆ. ಅವನ ಬದುಕು ಅವನ ಪೀಳಿಗೆಗೆ ನಿಜವಾದ ಮಾದರಿಯಾಗುತ್ತದೆ. ಸರಳವಾಗಿ ಹೇಳುವುದಾದರೆ ಮೂರ್ಖನ ಜೀವನ ಅವನ ಪೂರ್ಣತ್ವ, ಅವನ ಪ್ರತ್ಯೇಕತೆ ಮತ್ತು ಅವನ ಸ್ವಾತಂತ್ರ್ಯ. ಯಾಕಂದರೆ ಮೂರ್ಖನನ್ನು ಯಾರೂ ಅನುಸರಿಸುವುದಿಲ್ಲ, ಮೂರ್ಖನಿಗೆ ಯಾರ ಮರ್ಜಿಯೂ ಇಲ್ಲ, ಮುಲಾಜೂ ಇಲ್ಲ, ಸಮಾಜಕ್ಕೆ ಅಂಜಬೇಕಾದ ಅಗತ್ಯವೂ ಇಲ್ಲ. ಒಬ್ಬ ಬುದ್ಧಿವಂತ ವ್ಯಕ್ತಿಯ ಯಶಸ್ಸು ಆತನ ಒಳನೋಟವನ್ನು ಅವಲಂಬಿಸಿರುತ್ತದೆ; ಅವನು ತನ್ನ ಅಸ್ತಿತ್ವವನ್ನು ನಂಬುತ್ತಾನೆ. ಹಾಗೂ ತನ್ನನ್ನು ಮಾತ್ರ ಪ್ರೀತಿಸುತ್ತಾನೆ, ಗೌರವಿಸಿಕೊಳ್ಳುತ್ತಾನೆ. ಆದರೆ ಮೂರ್ಖನ ಯಶಸ್ಸು ಅವನ ಪ್ರಯೋಗದ ಮೇಲೆ ನಿಂತಿರುತ್ತದೆ. ಅವನು ಹತ್ತಾರು ಮೂರ್ಖರ ಮಾತು ಕೇಳುತ್ತಾನೆ. ಎಲ್ಲರನ್ನೂ ಪ್ರೀತಿಸುತ್ತಾನೆ, ಎಲ್ಲರನ್ನೂ ಗೌರವಿಸುತ್ತಾನೆ.

ಉತ್ಕಟ ಭಾವನೆಗಳೆಂದರೆ ಏನು ಅನ್ನುವುದನ್ನು ನಿಮ್ಮನ್ನು ಪ್ರೀತಿಸುವವರಿಂದ ಕಂಡುಕೊಳ್ಳಬೇಕಾಗಿಲ್ಲ. ನೀವು ಯಾರೆಂದು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಭಾವಪರವಶತೆ ಮತ್ತೊಂದಿಲ್ಲ. ಅಸಲಿಗೆ ಈ ಸೃಜನಶೀಲರಾಗಿರುವುದು ಎಂದರೆ ನಿಮ್ಮ ಜೀವನವನ್ನು ಹೆಚ್ಚಾಗಿ ಪ್ರೀತಿಸುವುದು ಎಂದಷ್ಟೆ ಅರ್ಥ. ಜೀವನ ಸರಳವಾಗಿದ್ದಷ್ಟೂ ಸಂಭ್ರಮ ಸಂತೋಷ ಹೆಚ್ಚಾಗಿರುತ್ತದೆ. ಬದುಕನ್ನು ವಿನಾಕಾರಣ ಕಷ್ಟಕರವಾಗಿಸಿಕೊಳ್ಳುವುದು ಅಥವಾ ಕ್ಲಿಷ್ಟವಾಗಿಸಿಕೊಳ್ಳುವುದು ಮೂರ್ಖತನ ಅಲ್ಲ ಅದು ಬುದ್ದಿವಂತಿಕೆ. ಉದಾಹರಣೆ ಸಹಿತ ಹೇಳುವುದಾದರೆ ಆಗಲು ಪ್ರಯತ್ನಿಸುವುದು ಮತ್ತು ಆಗಿಯೇ ಬಿಡುವುದು ಎರಡರ ಮಧ್ಯೆ ಒಂದು ಸ್ಪಷ್ಟವಾದ ವ್ಯತ್ಯಾಸವಿದೆ. ಆಗಲು ಪ್ರಯತ್ನಿಸುವುದು ಮೂರ್ಖನ ಕೆಲಸ, ಆಗೇ ಬಿಡುವುದು ಬುದ್ದಿವಂತಿಕೆ. ಆಗಿಬಿಟ್ಟ ಅಂದರೆ ಮುಗಿದುಹೋದ. ಅಲ್ಲಿಗೆ ಅವನಿಂದ ಮತ್ತೆ ಆಗುವಿಕೆಗಳು ಸಂಭವಿಸುವುದಿಲ್ಲ. ಆದರೆ ಆಗಲು ಪ್ರಯತ್ನಿಸುತ್ತಲೇ ಇರುವವನಿಂದ ಎಷ್ಟೋ ಆಗುವಿಕೆಗಳು ಆಗುತ್ತಲೇ ಇರುತ್ತವೆ. ಆಗಿಬಿಡುವುದು ಎಂದರೆ ಡೆಡ್‌ ಎಂಡ್‌, ಆಗಲು ಪ್ರಯತ್ನಿಸುತ್ತಲೇ ಇರುವುದು ಕಂಟಿನ್ಯೂ ಪ್ರೊಸೆಸ್; ನಿರಂತರ ಪ್ರಕ್ರಿಯೆ. ಬದುಕಿನ ಕ್ರಿಯಾಶೀಲತೆ, ಚಲನಶೀಲತೆ ಮತ್ತು ಸೃಜನಶೀಲತೆ ಇರುವುದೇ ಈ ಕಂಟಿನ್ಯೂ ಪ್ರೊಸೆಸ್‌ ಅಥವಾ ನಿರಂತರ ಪ್ರಕ್ರಿಯೆಯಲ್ಲಿ. ಮೂರ್ಖನ ಬದುಕು ನಿರಂತರ ಪ್ರಕ್ರಿಯೆ ಅದೊಂದು ನದಿಯ ಹಾಗೆ. ಹಾಗಾಗಿಯೇ ನಾವೆಲ್ಲರೂ ಮೂರ್ಖರಾಗಿದ್ದಷ್ಟೂ ಕ್ರಿಯಾಶೀಲರಾಗಿರುತ್ತೇವೆ.

ಜೀವನದಲ್ಲಿ ಎಂದೂ ಕೋಪಗೊಳ್ಳಬೇಡಿ; ಕೋಪ ನಿಮ್ಮ ಸೃಜನಶೀಲತೆಯನ್ನು ನಾಶಮಾಡುತ್ತದೆ. ಪ್ರಕೃತಿಯ ಒಂದು ರಹಸ್ಯವೇನೆಂದರೆ ಯಾರ ಜೀವನವು ಯಾರನ್ನು ನಿರಾಶೆಗೊಳಿಸುವುದಿಲ್ಲ. ಜೀವನ ಎಂದರೆ ಅದು ಅವಕಾಶಗಳ ದೊಡ್ಡ ಮಾರುಕಟ್ಟೆ. ಅಲ್ಲಿ ಒಂದಲ್ಲ ಒಂದು ಅವಕಾಶಗಳು ಲಭ್ಯವಿರುತ್ತವೆ. ಕೆಲವು ಪುಕ್ಕಟೆ ಸಿಗುತ್ತವೆ ಇನ್ನೂ ಕೆಲವಕ್ಕೆ ಒಂದು ಮೌಲ್ಯವಿರುತ್ತದೆ. ಬುದ್ದಿವಂತ ಮೌಲ್ಯವಿರುವುದನ್ನು ಕೊಂಡುಕೊಳ್ಳುತ್ತಾನೆ ಕಾರಣ ಆ ಮೌಲ್ಯದ ಎರಡು ಪಟ್ಟು ಮೌಲ್ಯವನ್ನು ಸಂಪಾದಿಸಿಕೊಳ್ಳುವುದು ಅವನ ಉದ್ದೇಶವಾಗಿರುತ್ತದೆ. ಆದರೆ ನಮ್ಮ ಮೂರ್ಖನಿದ್ದಾನಲ್ಲ, ಅವನು ಸದಾ ಪುಕ್ಕಟೆ ಸಿಗುವ ಅವಕಾಶಕ್ಕಾಗಿ ಕಾಯುತ್ತಾನೆ, ಅರಸುತ್ತಾನೆ, ನಿರೀಕ್ಷಿಸುತ್ತಾನೆ. ಕಳೆದುಕೊಳ್ಳುವ ಭಯ ಅವನಿಗಿರುವುದಿಲ್ಲ ಹಾಗಾಗಿ ಸುಲಭವಾಗಿ ಸಿಗಬಹುದಾದ ಅವಕಾಶವನ್ನು ಕಷ್ಟ ಪಟ್ಟು ಗಳಿಸಿಕೊಳ್ಳುತ್ತಾನೆ. ಆ ಅವಕಾಶವೇ ಅವನ ಬದುಕನ್ನು ನಿರ್ಧರಿಸುತ್ತದೆ, ಜೀವನಾನುಭವ ಕಲಿಸುತ್ತದೆ ಮತ್ತು ಇತರೆ ಮೂರ್ಖರೊಂದಿಗೆ ಬಾಂದವ್ಯಗಳನ್ನು ಬೆಸೆಯುತ್ತದೆ. ಹೀಗಾಗಿ ಮೂರ್ಖ ಸದಾ ಸುಖಿ.
Saakshatv Oshoyisam episode 1
ಓಶೋ ಸದಾ ಒಂದು ಸಲಹೆ ನೀಡುತ್ತಾರೆ, ಬದುಕಿನಲ್ಲಿ ಎಲ್ಲವೂ ಕಳೆದುಹೋಯಿತಾ? ಹೋಗಲಿ ಬಿಡಿ. ಆದರೂ ಒಂದಷ್ಟು ಉಳಿಯುತ್ತದಲ್ಲ, ಉಳಿದುಕೊಂಡಿರುವುದನ್ನು ನೋಡಿ. ಅದೇ ನಿಮ್ಮ ಪಾಲಿನ ನಿಜವಾದ ನಿಧಿ. ಕಳೆದು ಹೋದ ಸಂಗತಿ, ವಸ್ತು ಅಥವಾ ಭಾವಗಳನ್ನು ನೆನದು ಕೊರಗುವುದರಿಂದ ಉಳಿದ ಅಸ್ಥಿತ್ವವನ್ನೂ ನೀವು ಕಳೆದುಕೊಳ್ಳುತ್ತೀರಿ. ಜೀವನ ಸಮೃದ್ಧ ಅಭಯಾರಣ್ಯ. ಇಲ್ಲಿ ಕಳೆದು ಹೋಗಿದ್ದು ಮತ್ತೆ ಇಲ್ಲಿಯೇ ಸಿಗುತ್ತದೆ. ಇಲ್ಲಿ ಎಲ್ಲವೂ ವಿಫುಲವಾಗಿದೆ, ಇರುವ ಉಳಿದ ಅಸ್ಥಿತ್ವವನ್ನು ಜೋಪಾನ ಮಾಡಿಕೊಳ್ಳಿ. ನಿಮ್ಮ ಭವಿಷ್ಯಕ್ಕೆ ಅದೇ ಕೀಲಿಕೈ. ಶೂನ್ಯ ಎನ್ನುವ ಅಸ್ಥಿತ್ವ ಇರುವುದೇ ಇಲ್ಲ. ಹತ್ತರ ಬದಲು ಒಂದು ಉಳಿದಿರುತ್ತದೆ, ಅದು ಶೂನ್ಯವಾಗಿರುವುದಿಲ್ಲ. ಆ ಒಂದನ್ನು ಮತ್ತೆ ಹತ್ತು ಮಾಡುವ ಅವಕಾಶವನ್ನು ಬದುಕು ಕೊಡುತ್ತದೆ. ಕಳೆದು ಹೋದ ಹತ್ತನ್ನು ನೆನಪಿಸಿ ಕೊರಗುತ್ತಾ ಇರುವ ಒಂದನ್ನೂ ಕಳೆದುಕೊಳ್ಳುವುದು ಮೂರ್ಖರ ಕೆಲಸವಲ್ಲ ಅದು ಬುದ್ದಿವಂತರ ಕೆಲಸ. ಅದು ನಿಜವಾದ ಹತಾಶೆ, ಆಗ ಬುದ್ದಿವಂತ ಖಿನ್ನತೆಗೆ ಜಾರುತ್ತಾನೆ. ಆದರೆ ಕಳೆದುಕೊಳ್ಳಲು ಏನೂ ಇಲ್ಲದ ಮೂರ್ಖನಿಗೆ ಇದೊಂದು ಸೋಲು ಮಾತ್ರ. ಮತ್ತೆ ಗೆಲ್ಲಲು ಹೊಸ ಪ್ರಯೋಗದೊಂದಿಗೆ ಅವನು ಸಿದ್ಧನಾಗುತ್ತಾನೆ. “ನಾನೂ ಒಬ್ಬ ಮೂರ್ಖನೇ ಹಾಗಾಗಿಯೇ ಮೂರ್ಖರನ್ನು ಪ್ರೀತಿಸಿದಷ್ಟು ಪಂಡಿತರನ್ನು ಪ್ರೀತಿಸಲಾರೆ” ಎನ್ನುತ್ತಿದ್ದರು ಓಶೋ.

-ವಿಶ್ವಾಸ್‌ ಭಾರದ್ವಾಜ್‌

#Oshoyisam #ಓಶೋ #ವಿಭಾ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Tags: Saakshatv Oshoyisam episode 7
ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram