ಜನ ಕಾಂಗ್ರೆಸ್ಸಿಗರನ್ನ ಕ್ಯಾಕರಿಸಿ ಉಗಿಯೋಕೆ ಪ್ರಾರಂಭ ಮಾಡ್ತಾರೆ : ಸದಾನಂದಗೌಡ
ಚಿಕ್ಕಬಳ್ಳಾಪುರ : ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಕೇಳುವ ಜನರು ಕ್ಯಾಕರಿಸಿ ಉಗಿಯೋಕೆ ಪ್ರಾರಂಭ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಬಿಟ್ ಕಾಯಿನ್ ಹಗರಣ ವಿಚಾರವಾಗಿ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಅದರಲ್ಲೂ ಕೈ ಶಾಸಕ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಹಗರಣದಿಂದ ಸಿಎಂ ಬದಲಾಗಲಿದ್ದಾರೆ ಎಂದು ಹೇಳಿದ್ದರು.
ಇದೀಗ ಈ ವಿಚಾರವಾಗಿ ಕೇಂದ್ರ ಸಚಿವ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಸರ್ಕಾರ ಬೀಳುತ್ತೆ ಸಿಎಂ ಬದಲಾಗ್ತಾರೆ ಎಂಬುದು ಕಾಂಗ್ರೆಸ್ ನವರ ಹಗಲು ಗನಸು. ಕೆಲಸ ಇಲ್ಲದವರು ಕಾಂಗ್ರೆಸ್ ನವರಾಗಿದ್ದಾರೆ.
ಮೊದಲಿನಿಂದಲೂ ಈ ತರ ಏನಾದರೂ ಹುಡುಕುವಂತಹ ಚಾಳಿ ಕಾಂಗ್ರೆಸ್ ನವರಿಗಿದೆ.
ಕಾಂಗ್ರೆಸ್ ನ ಆತಂರಿಕ ಕಚ್ಚಾಟ ಮುಚ್ಚಿ ಹಾಕಲು ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಬಿಟ್ ಕಾಯಿನ್ ಹಗರಣದಲ್ಲಿ ಯಾವುದೇ ಹುರುಳಿಲ್ಲ ಎಂದ ಸದಾನಂದಗೌಡ, ಈಗಾಗಲೇ ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ.
ಡಿಕೆಶಿ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಒಡಾಡುವುದೇ ಕೆಲಸವಾಗಿದೆ. ಯಾವುದೇ ಇಷ್ಯೂ ಇಲ್ಲದಾಗ ಇದೇ ಕೆಲಸ ಮಾಡೋದೆ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.