sakaleshpura Elephant attack: ಆನೆ ದಾಳಿಗೆ ರೈತ ಬಲಿ – ಸ್ಥಳೀಯರ ಆಕ್ರೋಶ….
ಆನೆಯೊಂದು ರೈತನನ್ನ ತುಳಿದು ಕೊಂದು ಹಾಕಿರುವ ದುರ್ಘಟನೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನೆಡದಿದೆ.
32 ವರ್ಷದ ಹೆಬ್ಬನಹಳ್ಳಿಯ ಮನು ಎಂಬ ರೈತ ಇಂದು ಬೆಳಿಗ್ಗೆ ಗ್ರಾಮದ ಹೊರಹೊಲಯದಲ್ಲಿರುವ ದೇವಸ್ಥಾನಕ್ಕೆ ಹೋಗಿ ಬರುವಾಗ ಆನೆಯೊಂದು ಅಟ್ಟಿಸಿಕೊಂಡು ಬಂದು ದಾಳಿ ನಡೆಸಿದೆ.
ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಮನು ಗೆ ಸಾಧ್ಯವಾಗಲಿಲ್ಲ.ದಾಳಿಯ ತೀವ್ರತೆಗೆ ಮನುವಿನ ಇಡೀ ದೇಹ ಒಡೆದು, ದೇಹದಿಂದ ಕಾಲು ಮತ್ತು ಕೈಯನ್ನು ಬೇರ್ಪಟ್ಟಿದೆ. ಘಟನೆ ನಡೆದು ಅರ್ಧ ಗಂಟೆಯಾದರೂ ಆನೆ ಸ್ಥಳದಿಂದ ಕದಲಲಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಗ್ರಾಮಸ್ಥರ ಗುಂಪು ಜೋರಾಗಿ ಕೂಗಿದ ನಂತರ ಆನೆ ಸ್ಥಳದಿಂದ ತೆರಳಿದೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕ್ರೋಶಗೊಂಡ ಜನರನ್ನು ಸಮಾಧಾನಪಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Sakaleshpura: Farmer killed in elephant attack – Locals outraged….