ಟ್ರಿಂಬಾಗೋ ನೈಟ್ ರೈಡರ್ಸ್ ಸಿಪಿಎಲ್ ಚಾಂಪಿಯನ್ಸ್
1. ಶಾರೂಕ್ ಖಾನ್ ಒಡೆತನದ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಅಜೇಯ ಗೆಲುವಿನೊಂದಿಗೆ 2020ರ ಸಿಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ಎಂಟು ವಿಕೆಟ್ ಗಳಿಂದ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಪರಾಭವಗೊಳಿಸಿತು. ಈ ಮೂಲಕ ಟ್ರಿಂಬಾಗೋ ನೈಟ್ ರೈಡರ್ಸ್ ತಂಡ ನಾಲ್ಕನೇ ಬಾರಿ ಸಿಪಿಎಲ್ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ. 2020ರ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡಿರುವ ನೈಟ್ ರೈಡರ್ಸ್ ತಂಡ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.
ಫೈನಲ್ ಗೆ ಒಸಾಕಾ
2. ಪ್ರತಿಷ್ಠಿತ 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ನೌಮಿ ಒಸಾಕಾ ಅವರು ಫೈನಲ್ ಪ್ರವೇಶಿಸಿದ್ದಾರೆ. ಎರಡು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದಿರುವ ನೌಮಿ ಒಸಾಕಾ ಅವರು ಇದೀಗ ಮೂರನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಯುಎಸ್ ಓಪನ್ ಟೂರ್ನಿಯ 11ನೇ ದಿನ ನಡೆದ ಮಹಿಳೆಯರ ಮೊದಲ ಸೆಮಿಫೈನಲ್ ನಲ್ಲಿ ನೌಮಿ ಒಸಾಕಾ ಅವರು 7-6, 3 -6, 6-3ರಿಂದ ಜೆನ್ನಿಫರ್ ಬ್ರ್ಯಾಂಡಿ ಅವರನ್ನು ಪರಾಭವಗೊಳಿಸಿದ್ರು.
ಯುವಿ ಕಮ್ ಬ್ಯಾಕ್ ಗೆ ನಿಯಮ ಅಡ್ಡಿ
3. ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪಂಜಾಬ್ ಪರ ಆಡುವ ಸಲುವಾಗಿ ನಿವೃತ್ತಿ ಹಿಂಪಡೆಯಲು ಉತ್ಸುಕರಾಗಿದ್ದು, ಈ ಬಗ್ಗೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ. ಆದರೆ ಬಿಸಿಸಿಐಯ ನಿಯಮಗಳು ಯುವಿಗೆ ಅಡ್ಡಿಯಾಗಬಹುದು ಎನ್ನಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಅಂತಿಮ ತೀರ್ಮಾನ ಮಂಡಳಿಗೆ ಬಿಟ್ಟಿದ್ದು. ಆದರೆ 2019ರ ಜೂನ್ನಲ್ಲಿ ನಿವೃತ್ತಿಯಾದ ನಂತರ ಮಾಸಿಕ ಪಿಂಚಣಿ ಪಡೆಯುವುತ್ತಿರುವುದರಿಂದ ಬಿಸಿಸಿಐನ ನೀತಿಗಳು ಅಡ್ಡಿಯಾಗಬಹುದು ಎಂದಿದ್ದಾರೆ.
ಭಜ್ಜಿಗೆ ಉದ್ಯಮಿ ಪಂಗನಾಮ
4. ಹರ್ಭಜನ್ ಸಿಂಗ್ ತಮಗೆ ಚೆನ್ನೈ ಮೂಲದ ಉದ್ಯಮಿಯೊಬ್ಬ 4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. ಕೆಲ ಕಾರಣಗಳಿಂದಾಗಿ ಐಪಿಎಲ್ ನಿಂದ ಹೊರಬಂದಿರುವ ಭಜ್ಜಿ, ವಂಚನೆ ಪ್ರಕರಣದ ಸಂಬಂಧ ಪೊಲೀಸರ ನೆರವು ಕೋರಿದ್ದಾರೆ. 2015ರಲ್ಲಿ ಉದ್ಯಮಿ ಮಹೇಶ್ ಗೆ ಹರ್ಭಜನ್ 4 ಕೋಟಿ ರೂ. ಸಾಲ ನೀಡಿದ್ದರು. ಸಾಲ ವಾಪಸ್ ನೀಡುವುದಾಗಿ ಹೇಳಿದ್ದ ಮಹೇಶ್ ಕಳೆದ ತಿಂಗಳು 25 ಲಕ್ಷ ರೂಗಳ ಚೆಕ್ ನೀಡಿದ್ದ. ಆದ್ರೆ ಉದ್ಯಮಿ ನೀಡಿದ್ದ ಚೆಕ್ ಚೆಕ್ ಬೌನ್ಸ್ ಆಗಿತ್ತು. ಇದರೊಂದಿಗೆ ಹಣ ಪಡೆಯಲು ನೇರ ಚೆನ್ನೈಗೆ ತೆರಳಿದ ಹರ್ಭಜನ್ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಹರ್ಭಜನ್ ಸಿಂಗ್ ದೂರು ನೀಡಲು ಮುಂದಾಗುತ್ತಿದಂತೆ ಉದ್ಯಮಿ ಮಹೇಶ್ ಮದ್ರಾಸ್ ಹೈಕೋರ್ಟಿನಲ್ಲಿ ನಿರೀಕ್ಷಿತ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ
ಹಿಟ್ ಮ್ಯಾನ್ ಬಿಗ್ ಸಿಕ್ಸರ್
5. ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ನೆಟ್ಸ್ ನಲ್ಲಿ ಬೆವರು ಹರಿಸಿದ್ದಾರೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಬಾರಿಸಿದ ಸಿಕ್ಸರ್ ಚಲಿಸುತ್ತಿದ್ದ ಬಸ್ ಗೆ ಅಪ್ಪಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ವಿಡಿಯೋದಲ್ಲಿ ರೋಹಿತ್ ಶರ್ಮಾ ನೆಟ್ಸ್ ನಲ್ಲಿ ಅಭ್ಯಾಸದ ವೇಳೆ ಸಿಕ್ಸರ್ ಬಾರಿಸುತ್ತಾರೆ. ಚಂಡು ಮೈದಾನದ ಹೊರಗೆ ರಸ್ತೆಯ ಮೇಲೆ ಸಾಗುತ್ತಿದ್ದ ಬಸ್ ಮೇಲೆ ಬೀಳುತ್ತದೆ. ಮುಂಬೈ ಇಂಡಿಯನ್ಸ್ ತಂಡದ ಜಾಲತಾಣದ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.