ಸಂಕ್ರಾಂತಿ ಬಳಿಕ ಜೆಡಿಎಸ್ ನಲ್ಲಿ ಸಮ್ `ಕ್ರಾಂತಿ’ : ಪಕ್ಷದಲ್ಲಿ ಭಾರಿ ಬದಲಾವಣೆ
ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷದಲ್ಲಿ ಭಾರಿ ಬದಲಾವಣೆಗಳಾಗುವ ಸೂಚನೆ ಕೊಟ್ಟಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ದೇವೇಗೌಡರು, ನಾನು ಇರುವಷ್ಟು ದಿನ ಮಾತ್ರ ಅಲ್ಲ, ನಾನು ಹೋದ್ಮೇಲೆನೂ ಈ ಪಕ್ಷ ಉಳಿಯಲಿದೆ.
ಅದಕ್ಕಾಗಿ ನನ್ನ ಹೋರಾಟ ಇರಲಿದೆ. ಕುಮಾರಸ್ವಾಮಿ ಅವರ ಜೊತೆಯೇ ಮಾತಾಡಿದ್ದೇನೆ. ಏಕ ತೀರ್ಮಾನ ಬೇಡ, ಕೋರ್ ಕಮಿಟಿ ಮಾಡಿ ಅಲ್ಲಿ ಚರ್ಚೆ ಮಾಡೋಣ ಎಂದಿದ್ದೆ ನಾನು, ಕುಮಾರಸ್ವಾಮಿ, ರೇವಣ್ಣ ತೀರ್ಮಾನ ಮಾಡೋದು ಬೇಡ ಎಂದು ಹೇಳಿದ್ದೆ.
ನಾನು ಬೇಸಿಕಲಿ ಕಾಂಗ್ರೆಸ್ ಮ್ಯಾನ್ : ಹೆಚ್.ಡಿ.ದೇವೇಗೌಡ
ಶಿರಾ ಉಪಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ ನಮಗೆ ಇನ್ನು ಕಾರ್ಯಕರ್ತರು ಇದ್ದಾರೆ. ಕಾರ್ಯಕರ್ತರಿಗೆ ಉಮ್ಮಸ್ಸು ಇದೆ, ಹಾಗಾಗಿ ಯಾರಿಗಾದರೂ ಜವಾಬ್ದಾರಿ ಕೊಡಬೇಕಿದೆ ಎಂದು ಹೇಳಿದರು.
ಇನ್ನು ಯಾರು ಕೆಲಸ ಮಾಡ್ತಾರೆ ಅವರಿಗೆ ಜವಾಬ್ದಾರಿ ನೀಡಲಾಗುತ್ತದೆ. ನಾವು ಕರೆದುಕೊಂಡು ಬಂದು ನಿಲ್ಲಿಸೋದು ಅವರು ಹೋಗೋದು ಬೇಡ.
ಸಂಕ್ರಾಂತಿ ಬಳಿಕ ಕುಮಾರಸ್ವಾಮಿ ಅವರೇ ತಮ್ಮದೇ ಐಡಿಯಾಗಳನ್ನ ಮುಂದುವರಿಸ್ತಾರೆ ಎಂದು ಹೇಳುವ ಮೂಲಕ ಸಂಕ್ರಾಂತಿ ಬಳಿಕ ಪಕ್ಷದಲ್ಲಿ ಬದಲಾವಣೆಗಳು ಆಗಲಿವೆ ಎಂದು ಸುಳಿವು ನೀಡಿದ್ದಾರೆ.
ಜನವರಿ 7ರಂದು ಜೆಡಿಎಸ್ ಸಭೆ ಇದ್ದು, ಈ ಸಭೆಯಲ್ಲಿ ಕುಮಾರಸ್ವಾಮಿ ತಮ್ಮ ಐಡಿಯಾಗಳನ್ನು ಹೇಳ್ತಾರೆ. ಆ ಬಳಿಕ ಜನವರಿ 14ರ ನಂತರ ಆ ಐಡಿಯಾದಂತೆ ಪಕ್ಷ ಸಂಘಟನೆ ಮುಂದುವರಿಸ್ತಾರೆ.
ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ, ನಮಗೆ ಯಾವ ಹೈಕಮಾಂಡ್ ಕೂಡ ಇಲ್ಲ. ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ, ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೀನಿ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









