Karwar: ವಿದ್ಯಾರ್ಥಿಗೆ ಅಮಾನವೀಯವಾಗಿ ಥಳಿಸಿದ ಶಾಲಾ ಶಿಕ್ಷಕಿ
ಕಾರವಾರ : ಉತ್ತರಕನ್ನಡ ಹೊನ್ನಾವರದಲ್ಲಿ ಶಾಲಾ ಶಿಕ್ಷಕಿ ವಿದ್ಯಾರ್ಥಿಯೊಬ್ಬನಿಗೆ ಅಮಾನವೀಯವಾಗಿ ಥಳಿಸಿರುವ ಘಟನೆ ನಡೆದಿದೆ.. ಶಿಕ್ಷಕಿಯ ನಡೆ ವಿರುದ್ಧ ಕ್ರೋಶ ಭುಗಿಲೆದ್ದಿದೆ..
ವಿದ್ಯಾರ್ಥಿಗೆ ಶಿಕ್ಷಕಿಯು ಬಾಸುಂಡೆ ಬರುವಂತೆ ಬಾರಿಸಿದ್ದು, ಪೋಷಕರು ಆಕ್ರೋಶ ಹೊರಹಾಕಿದ್ದಾರೆ..
ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ..
ಕಲ್ಪನಾ ಹೆಗಡೆ ಎಂಬ ಶಿಕ್ಷಕಿಯು ವಿದ್ಯಾರ್ಥಿಗೆ ಈ ರೀತಿಯಾಗಿ ಥಳಿಸಿದ್ದಾರೆ. ಶಿಕ್ಷಕಿ ದುರ್ವರ್ತನೆಯಿಂದ 6ನೇ ತರಗತಿ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾರೆ.
Budget 2022 – ನಾಳೆಯಿಂದ ಬಜೆಟ್ ಅಧಿವೇಶನ – ಪೆಗಾಸಸ್ ವಿಷಯ ಪ್ರಸ್ತಾಪಿಸಲಿವೆ ವಿಪಕ್ಷಗಳು…
ಶಾಲಾ ವಿದ್ಯಾರ್ಥಿಗಳ ಕ್ಷುಲ್ಲಕ ವಿಚಾರಕ್ಕೆ ಶಿಕ್ಷಕಿ ಈ ರೀತಿ ಶಿಕ್ಷೆ ನೀಡಿದ್ದು ಘಟನೆಯನ್ನ ಖಂಡಿಸಿರುವ ಪೋಷಕರು ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಶಿಕ್ಷಕಿ ಪೋಷಕರ ಬಳಿ ಕ್ಷಮೆಯಾಚಿಸಿದ್ದಾರೆ. ಸದ್ಯ ಶಿಕ್ಷಕಿಯ ಈ ವರ್ತನೆ ತಾಲ್ಲೂಕಿನಾದ್ಯಂತ ಚರ್ಚೆ ಹುಟ್ಟುಹಾಕಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ…