ಭಾರತೀಯ ವಿಜ್ಞಾನಿಗಳಿಂದ ಡೆಂಗ್ಯೂ ಜ್ವರಕ್ಕೆ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸುವ ಯೋಜನೆ
ದೇಶಾದ್ಯಂತ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದ್ದಂತೆ, ಭಾರತೀಯ ವಿಜ್ಞಾನಿಗಳು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ವಿಜ್ಞಾನಿಗಳು ಡೆಂಗ್ಯೂ ಜ್ವರಕ್ಕೆ ಒಂದು ರೀತಿಯ ಡಿಎನ್ಎ ಲಸಿಕೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದ್ದಾರೆ.
COVID-19 ಗಾಗಿ ಝೈಡಸ್ ಕ್ಯಾಡಿಲಾ ಅವರ DNA ಲಸಿಕೆಯ ಆಧಾರದ ರೀತಿಯ ಸೂತ್ರದ ಡೆಂಗ್ಯೂ ಲಸಿಕೆ ಅನ್ನು ಅಭಿವೃದ್ಧಿಪಡಿಸಲಾಗುವುದು. ಕೇಂದ್ರವು 11 ರಾಜ್ಯಗಳಲ್ಲಿ ಡೆಂಗ್ಯೂ ಶೀಘ್ರ ಹರಡುವಿಕೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದು ಡೆಂಗ್ಯೂ ಜ್ವರಕ್ಕೆ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಹಿರಿಯ ವಿಜ್ಞಾನಿಯೊಬ್ಬರು, ವೈರಸ್ನ ನಾಲ್ಕು ಸಿರೊಟೈಪ್ಗಳಿವೆ ಎಂದು ನಮಗೆ ತಿಳಿದಿದೆ. ಆದರೆ ಸಿರೊಟೈಪ್ಗಳಲ್ಲಿ ಆನುವಂಶಿಕ ವ್ಯತ್ಯಾಸಗಳಿರುವುದನ್ನು ನಾವು ಕಂಡುಕೊಂಡಿದ್ದೇವೆ. 6% ಕ್ಕಿಂತ ಹೆಚ್ಚಿನ ವ್ಯತ್ಯಾಸವಿರುವ ಯಾವುದೇ ಅನುಕ್ರಮವನ್ನು ವಿಭಿನ್ನ ಜೀನೋಟೈಪ್ ಎಂದು ಪರಿಗಣಿಸಲಾಗುತ್ತದೆ . ಆದ್ದರಿಂದ, ತಂಡವು ಒಮ್ಮತದ ಅನುಕ್ರಮವನ್ನು ರಚಿಸಿದ್ದು ಅದು ಜೀನೋಟೈಪ್ಗಳಾದ್ಯಂತ ಒಂದೇ ಆಗಿರುತ್ತದೆ ಎಂದು ಹೇಳಿದ್ದಾರೆ.
ಡೆಂಗ್ಯೂ ಜ್ವರದ ಸಿರೊಟೈಪ್- II ತಳಿ ಹರಡುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ಭಾರತದ 11 ರಾಜ್ಯಗಳಿಗೆ ಕೇಳಿಕೊಂಡಿದೆ . ಇದು ಡೆಂಗ್ಯೂ ನ ಹೆಚ್ಚು ಹಾನಿಕಾರಕ ರೂಪವಾಗಿದೆ.
ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ 11 ರಾಜ್ಯಗಳಲ್ಲಿ ಡೆಂಗ್ಯೂ ಎಚ್ಚರಿಕೆಯನ್ನು ಕೇಂದ್ರ ನೀಡಿದೆ. ಈ ರಾಜ್ಯಗಳು ಕಳೆದ ಕೆಲವು ವಾರಗಳಲ್ಲಿ ವೈರಲ್ ಜ್ವರದ ತೀವ್ರ ಪ್ರಕರಣಗಳನ್ನು ವರದಿ ಮಾಡಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಕೋವಿಡ್ ಸಾಂಕ್ರಾಮಿಕ ಮತ್ತು ಡೆಂಗ್ಯೂ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯಗಳು ಅಗತ್ಯವಾದ ಮುನ್ನೆಚ್ಚರಿಕೆಗಳು ಮತ್ತು ಜನಸಂದಣಿ, ಜನದಟ್ಟಣೆ ತಪ್ಪಿಸಲು ಪರಿಣಾಮಕಾರಿ ನಿಯಮಗಳನ್ನು ಜಾರಿಗೊಳಿಸಲು ಹೇಳಿದೆ.
ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳು ಡೆಂಗ್ಯೂ ಪ್ರಕರಣಗಳನ್ನು ಮುಂಚಿತವಾಗಿ ಪತ್ತೆಹಚ್ಚುವುದಕ್ಕೆ ಕ್ರಮ ಕೈಗೊಳ್ಳಬೇಕು. ಸಹಾಯವಾಣಿ ಮತ್ತು ವ್ಯಾಪಕವಾದ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಬೇಕು, ಸಾಕಷ್ಟು ಪರೀಕ್ಷಾ ಕಿಟ್ಗಳು, ಲಾರ್ವಿಸೈಡ್ಗಳು ಮತ್ತು ಔಷಧಿಗಳನ್ನು ಸಂಗ್ರಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಎಲ್ಲಾ ರಾಜ್ಯಗಳಲ್ಲಿ ಶಾಲೆಗಳು ಹಂತ ಹಂತವಾಗಿ ಮತ್ತೆ ತೆರೆಯುತ್ತಿರುವುದರಿಂದ ಮಕ್ಕಳಲ್ಲಿ ಸೋಂಕಿನ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಮಿತಿಗೊಳಿಸಲು ರಾಜ್ಯಗಳನ್ನು ಕೇಳಲಾಗಿದೆ. ಹೊಸ ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸಲು ತಂಡಗಳನ್ನು ನಿಯೋಜಿಸಲು ಕೇಳಲಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮೈದಾ ಹಿಟ್ಟು ದೇಹಕ್ಕೆ ಅಪಾಯಕಾರಿಯೇ? https://t.co/7FVEPGo9pS
— Saaksha TV (@SaakshaTv) September 28, 2021
ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಅಗಸೆ ಬೀಜಗಳ ಪ್ರಯೋಜನಗಳು https://t.co/KO091FmNrP
— Saaksha TV (@SaakshaTv) September 29, 2021
ಉತ್ತಮ ಲಾಭದ ಅಂಚೆ ಇಲಾಖೆಯ ಸೂಪರ್ ಹಿಟ್ ಎಂಐಎಸ್ ಯೋಜನೆ https://t.co/MOjDv2w6Ho
— Saaksha TV (@SaakshaTv) September 29, 2021
ರುಚಿಯಾದ ಚಿರೋಟಿ https://t.co/OmCa5Me5Ag
— Saaksha TV (@SaakshaTv) September 29, 2021
#scientists #DNAvaccine #denguefever








