ನವದೆಹಲಿ: ಲಾಕ್ ಡೌನ್ ಹಿನ್ನೆಲೆ ದೂರದರ್ಶನ ಈಗಾಗಲೇ ರಾಮಾಯಣ, ಮಹಾಭಾರತ, ಸರ್ಕಸ್ ಧಾರವಾಹಿಗಳನ್ನು ಪುನರ್ ಪ್ರಸಾರ ಮಾಡಲು ಆರಂಭಿಸಿದೆ. ವೀಕ್ಷಕರು ಕೂಡ ಅಂದಿನಷ್ಟೇ ಖುಷಿಯಲ್ಲಿ ಈ ಪೌರಾಣಿಕ ಧಾರವಾಹಿಗಳನ್ನು ವೀಕ್ಷಿಸುತ್ತಿದ್ದಾರೆ.
ಈ ನಡುವೆ ವೀಕ್ಷಕರು ಮತ್ತೆ ‘ಶಕ್ತಿಮಾನ್’ ಧಾರವಾಹಿ ಪ್ರಸಾರ ಆರಂಭಿಸಿ ಎಂದು ಬೇಡಿಕೆಯಿಟ್ಟಿದ್ದರು. ಅದರಂತೆ ಇದೀಗ ಏಪ್ರಿಲ್ 1 ರಿಂದ ಮಧ್ಯಾಹ್ನ 1 ಗಂಟೆಗೆ ಶಕ್ತಿಮಾನ್ ಪ್ರಸಾರ ಮಾಡಲು ದೂರದರ್ಶನ ತೀರ್ಮಾನಿಸಿದೆ. ದೂರದರ್ಶನ ಪ್ರಕಟಣೆ ಹೊರಬೀಳುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ
ಬಾಗಲಕೋಟೆ: ಆರ್ಎಸ್ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...








