ನೆಲ್ಯಾಡಿ ಜನತೆಯ ಮಾನವೀಯ ಕಳಕಳಿಗೊಂದು ಸಲಾಂ…Nelyadi cid Shankar
ನೆಲ್ಯಾಡಿ, ಅಕ್ಟೋಬರ್27: ಶರಣರ ಬದುಕನ್ನು ಅವರ ಮರಣದಲ್ಲಿ ನೋಡು ಎಂಬ ಮಾತೊಂದಿದೆ. ಅಂದರೆ ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಆ ವ್ಯಕ್ತಿಯ ಕೊನೆಯ ಗಳಿಗೆಯಲ್ಲಿ ಬಂದು ಸೇರುವ ಜನರನ್ನು ನೋಡಿ ವ್ಯಕ್ತಿ ಸಂಪಾದಿಸಿದ ಮಹತ್ವವನ್ನು ಅರಿಯಬಹುದು ಎಂದು ಇದರರ್ಥ. Nelyadi cid Shankar
ಈ ಮಾತಿನ ನಿಜಾರ್ಥವನ್ನು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಜನತೆ ಒಬ್ಬ ಅಪರಿಚಿತ ವ್ಯಕ್ತಿಗೆ ಗೌರವ ತೋರಿಸಿ ನಿಜ ಮಾಡಿ ತೋರಿಸಿದರು.

ಅದೇಕೋ ಈ ವರ್ಷದ ವಿಜಯ ದಶಮಿ ನೆಲ್ಯಾಡಿ ಜನರಿಗೆ ವಿಭಿನ್ನವಾಗಿತ್ತು. ಅಲ್ಲಿನ ಜನತೆಗೆ 25 ವರ್ಷಗಳ ಹಿಂದೆ ಅಪರಿಚಿತನಾಗಿ ನೆಲ್ಯಾಡಿ ಪರಿಸರಕ್ಕೆ ಬಂದು ಚಿರಪರಿಚಿತನಾಗಿದ್ದ, ಸಿಐಡಿ ಎಂದೇ ಅಡ್ಡನಾಮದಿಂದ ಕರೆಯಲ್ಪಡುತ್ತಿದ್ದ ಶಂಕರ್ ನ ನಿಧನದ ವಾರ್ತೆಯನ್ನು ಅರಗಿಸಿಕೊಳ್ಳಲಾಗಲಿಲ್ಲ.
ಸಿಐಡಿ ಶಂಕರ್ ಅವರ ಮೃತದೇಹವನ್ನು ಪುತ್ತೂರಿನಿಂದ ಆಂಬುಲೆನ್ಸ್ ಮೂಲಕ ನೆಲ್ಯಾಡಿ ಗಾಂಧಿ ಮೈದಾನಕ್ಕೆ ತಂದು, ನೆಲ್ಯಾಡಿ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಇಂದು ಸಂಜೆಯಿಂದ ಅ.28ರವರೆಗೆ ಬೆಂಗಳೂರಿನಲ್ಲಿ ಎಣ್ಣೆ ಸಿಗಲ್ಲ
ನಂತರ ಅಲ್ಲಿಂದ ಬೈಕ್ ಜಾಥ ಮೂಲಕ ಮೃತದೇಹವನ್ನು ಕೌಕ್ರಾಡಿಯ ಸ್ಮಶಾನಕ್ಕೆ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ತಾನು ಹುಟ್ಟಿ ಬೆಳೆದ ಊರು ಜಾತಿ ಧರ್ಮ ಯಾವುದೆಂದು ಅರಿವಿಲ್ಲದ ವ್ಯಕ್ತಿಗೆ ನೆಲ್ಯಾಡಿಯ ಸರ್ವ ಧರ್ಮದವರು ಮತ್ತು ಎಲ್ಲಾ ರಾಜಕೀಯ ಪಕ್ಷದವರು ಒಂದಾಗಿ ನಿಂತು ಅಂತ್ಯಕ್ರಿಯೆ ನಡೆಸಿದ್ದು ನೆಲ್ಯಾಡಿ ಜನರ ಮಾನವೀಯತೆಗೆ ಹಿಡಿದ ಕೈಗನ್ನಡಿಯಂತಿತ್ತು. ಒಬ್ಬ ಅನಾಮದೇಯ ವ್ಯಕ್ತಿ ಇಷ್ಟೊಂದು ಜನರ ಪ್ರೀತಿ ಸಂಪಾದಿಸಿದ್ದಾನೆ ಎಂದರೆ ಅದು ಯಾವ ಜನ್ಮದ ಋಣಾನುಬಂಧವೋ…

ಊರು ಕೇರಿ, ಜಾತಿ ಧರ್ಮ ಅಷ್ಟೇ ಅಲ್ಲ, ತನ್ನ ಮೂಲ ಹೆಸರು ಗೊತ್ತಿಲ್ಲದ ಆ ವ್ಯಕ್ತಿಗೆ ನೆಲ್ಯಾಡಿ ಜನತೆ ಇಟ್ಟ ಹೆಸರು ಸಿಐಡಿ ಶಂಕರ್. ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ನೆಲ್ಯಾಡಿಯಲ್ಲೆ ನೆಲೆಸಿ, ನೆಲ್ಯಾಡಿಯ ಬೀದಿಯಲ್ಲಿ ಅಲೆಯುತಿದ್ದ ನಿರುಪದ್ರವಿ ಶಂಕರ್, ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ಎಂಬಂತೆ, ಹೋಟೆಲ್ ನವರು ಕೊಡುತಿದ್ದ ಆಹಾರ, ಪಂಚಾಯತ್ ನಿಂದ ಬರುವ ನೀರು ಕುಡಿದು, ಅಂಗಡಿಗಳ ವರಾಂಡಗಳಲ್ಲಿ ಮಲಗಿ ಹಾಯಾಗಿರುತ್ತಿದ್ದರು.
ನೆಲ್ಯಾಡಿಗೆ ಮೊದ ಮೊದಲು ಪರಿಚಯವಾದಾಗ ಇವರು ಸಿಐಡಿ ಆಗಿರಬೇಕು,ಯಾವುದೋ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ಮಾರುವೇಷದಲ್ಲಿ ಬಂದಿರಬೇಕು ಎಂದು ನೆಲ್ಯಾಡಿ ಜನತೆ ಅವರಲ್ಲಿ ಮಾತನಾಡಲು ಭಯಪಟ್ಟದ್ದು ಇದೆ . ಆದರೆ ವರ್ಷಗಳು ಕಳೆದಂತೆ ಯಾರೊಂದಿಗೂ ಮಾತನಾಡದೆ ತನ್ನಷ್ಟಕ್ಕೆ ತಾನಿರುತಿದ್ದ ಆ ಅನಾಮಿಕ ವ್ಯಕ್ತಿ ತನ್ನ ನಿರುಪ್ರದವಿ ಗುಣದಿಂದ ನೆಲ್ಯಾಡಿ ಜನತೆಗೆ ಅಚ್ಚುಮೆಚ್ಚಿನವರಾದರು.
ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಅಸುನೀಗಿದ ಶಂಕರ್ ರವರ ಮೃತದೇಹವನ್ನು ನೆಲ್ಯಾಡಿಯ ಎಲ್ಲಾ ಸಮುದಾಯದವರು ಒಂದಾಗಿ ನಿಂತು ಸ್ವೀಕರಿಸಿದರು ಮಾತ್ರವಲ್ಲ ಶಂಕರ್ ರವರಿಗೆ ಅಂತಿಮ ವಿದಾಯ ಕೋರಲು ಸಾಲುಗಟ್ಟಿ ನಿಂತದ್ದು, ಶಂಕರ್ ರವರ ಜನಪ್ರಿಯತೆಗೆ ಸಾಕ್ಷಿ.

ಸ್ವಂತ ಕುಟುಂಬದವರು ಸ್ನೇಹಿತರು ಸೇರಿದಂತೆ ಎಲ್ಲರೂ ಇದ್ದೂ ಅನೇಕರು ಕೊನೆ ಗಳಿಗೆಯಲ್ಲಿ ಅನಾಥ ಶವವಾಗುವ ಈ ಕಾಲದಲ್ಲಿ ಅನಾಥನಾಗಿದ್ದರೂ ನೆಲ್ಯಾಡಿಯ ಜನತೆ ಒಟ್ಟಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಈ ಮೂಲಕ ಶಂಕರ್ ಗೆ ಗೌರವ ಸೂಚಿಸಿದರು.
ಶಂಕರ್ ನಿಧನರಾದ ಸುದ್ದಿ ತಿಳಿದು ನೆಲ್ಯಾಡಿಯ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರು, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಂತಿಮ ವಿಧಿ ವಿಧಾನದ ಕಾರ್ಯಗಳನ್ನು ಪೂರೈಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








