Shrilanka Crisis : ಜುಲೈ 13 ಕ್ಕೆ ರಾಜೀನಾಮೆ ನೀಡುವೆ ಎಂದ ಅಧ್ಯಕ್ಷ ರಾಜಪಕ್ಸೆ..!!
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕೆಯಲ್ಲಿ ಜನರ ಆಕ್ರೋಶ ಕಾಡ್ಗಿಚ್ಚಿನಂತೆ ಹಬ್ಬಿದೆ.. ಜನಾಕ್ರೋಶಕ್ಕೆ ರಾವಣನ ನಾಡು ಲಂಕಾ ದಹನವಾಗುತ್ತಿದೆ… ಪ್ದರತಿಭಟನಾಕಾರರು ಇತ್ತೀಚೆಗೆ ಪರಾಷ್ಟ್ರಪತಿ ಭವನವನ್ನ ಕಬ್ಜ ಮಾಡಿಕೊಂಡಿದ್ದಾರೆ.. ಅಧ್ಯಕ್ಷ ರಾಜಪಕ್ಸೆ ನಿವಾಸದಿಂದ ಪಲಾಯನ ಮಾಡಿದ್ದಾರೆ..
ಪ್ರತಿಭಟನಾನಿರತರು ರಾಜಪಕ್ಸೆ ರಾಜೀನಾಮೆ ನೀಡುವವರೆಗೂ ತಾವು ರಾಷ್ಟ್ರಪತಿ ಭವನ ತೊರೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ… ಅಲ್ಲಿಯೇ ಆಹಾರವನ್ನೂ ತಯಾರಿಸಿ ಸೇವಿಸುತ್ತಿದ್ದಾರೆ… ಇದೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಲಂಕಾ ಅದ್ಯಕ್ಷ ಗೋತಬಯ ರಾಜಪಕ್ಸೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದಾರೆ..
ತಾವು ಜುಲೈ 13 ಕ್ಕೆ ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ.. ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರಿಗೆ ತಿಳಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಸೋಮವಾರ ತಿಳಿಸಿದೆ.
ಇತ್ತ ವಿಕ್ರಮಸಿಂಘೆ ಸಹ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಹಾಗೂ ಸರ್ವಪಕ್ಷ ಸರ್ಕಾರ ಸ್ಥಾಪನೆಗೆ ಅನುವು ಮಾಡಿಕೊಡುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ :
South Africa – ಜೋಹಾನ್ಸ್ಬರ್ಗ್ನ ಬಾರ್ ನಲ್ಲಿ ಗುಂಡಿನ ದಾಳಿ; 14 ಮಂದಿ ಮೃತ…