‘ಸಿದ್ದರಾಮಯ್ಯ ನಿಜವಾಗಲೂ ಮಲ್ಕೊಂಡಿದ್ರೆ ನಾನು ಎಬ್ಬಿಸುತ್ತೇನೆ’ ; ಟಗರಿಗೆ ತಿವಿದ ಸಾಮ್ರಾಟ್
ಬೆಂಗಳೂರು : ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು, ಸಿದ್ದರಾಮಯ್ಯ ನಿಜವಾಗಲೂ ಮಲ್ಕೊಂಡಿದ್ರೆ ನಾನು ಅವರನ್ನು ಎಬ್ಬಿಸುತ್ತೇವೆ. ಆದರೆ, ಮಲ್ಕೊಂಡಿರೋರ್ ತರ ನಾಟಕ ಮಾಡೋರನ್ನು ಎಂದಿಗೂ ಎಬ್ಬಿಸೋಕೆ ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆಯನ್ನು ಮಾಜಿ ಸಿಎಂ ದೇವದಾಜ ಅರಸು ತಂದವರು. ಅವರು ಕಾಂಗ್ರೆಸ್ ನವರಾಗಿದ್ದು, ಅರಸು ತಂದ ಕಾಯ್ದೆ ಬದಲಿಸಬಾರದು ಅನ್ನೋದು ಸಿದ್ದರಾಮಯ್ಯ ಉದ್ದೇಶವಾಗಿದೆ. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಿದೆ. ಸದ್ಯ ವಿದ್ಯಾವಂತರು ಕೃಷಿ ಕಡೆ ಬರಬೇಕು ಅನ್ನೋ ಉದ್ದೇಶದಿಂದ ಈ ತಿದ್ದುಪಡಿ ತಂದಿದ್ದೇವೆ. ಸಿದ್ದರಾಮಯ್ಯ ನಿಜವಾಗಲೂ ಮಲ್ಕೊಂಡಿದ್ರೆ ನಾನು ಅವರನ್ನು ಎಬ್ಬಿಸುತ್ತೇವೆ. ಆದರೆ, ಮಲ್ಕೊಂಡಿರೋರ್ ತರ ನಾಟಕ ಮಾಡೋರನ್ನು ಎಂದಿಗೂ ಎಬ್ಬಿಸೋಕೆ ಆಗಲ್ಲ ಎಂದು ಆರ್. ಅಶೋಕ್ ಅವರು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇನ್ನು ಅಗ್ರಿಕಲ್ಚರ್ ಗೆ ತಿದ್ದುಪಡಿ ಕಾಯ್ದೆ ಸಮಸ್ಯೆ ಆಗಲ್ಲ. ಈ ಕಾಯ್ದೆಯಿಂದ ಕೃಷಿ ರಫ್ತಿಗೆ ಅವಕಾಶ ಸಿಗಲಿದೆ ಎಂದು ತಿಳಿಸಿದ ಅಶೋಕ್, ನಿಮ್ಮ ಸರ್ಕಾರ ಇದ್ದಾಗ ಎಷ್ಟು ಜಮೀನು ವರ್ಷಕ್ಕೆ ತಗೊಂಡಿದ್ದಿರಿ..? ಹಣ ವಸೂಲಿಗೆ ಮಾತ್ರ ಈ ಭೂ ಸುಧಾರಣಾ ಕಾಯ್ದೆ ಇತ್ತು. ನೂರು ಎಕರೆನಾದರೂ ವಷಕ್ಕೆ ತೆಗೆದುಕೊಂಡಿದ್ದಾರಾ..? ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು.