ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟಿದ್ದು ನಿಮ್ಮ ಪರಿವಾರದ ಸಾವರ್ಕರ್ : ಸಿದ್ದರಾಮಯ್ಯ ಟಾಂಗ್ Siddaramaiah saaksha tv
ಬೆಂಗಳೂರು : ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟು ಶರಣಾಗಿದ್ದು ನಿಮ್ಮ ಪರಿವಾರದ ಸಾವರ್ಕರ್ ಮತ್ತು ದೇಶಭಕ್ತರು ಎನ್ನುವ ಇತಿಹಾಸವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿದಿರಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಿಜೆಪಿ ಪಕ್ಷ ದೇಶಭಕ್ತಿಯನ್ನು ಹೊಂದಿರುವಂತಹ ಪಕ್ಷವಾಗಿದೆ. ಕಾಂಗ್ರೆಸ್ ಪಾರ್ಟಿ ಗುಲಾಮಗಿರಿ ಪಾರ್ಟಿಯಾಗಿದೆ.
ಬಿಜೆಪಿ ತೋರುತ್ತಿರುವ ದೇಶ ಭಕ್ತಿ ಕಾಂಗ್ರೆಸ್ ಗೆ ತಾಲಿಬಾನಿಗಳ ತರ ಕಾಣುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಟಾಂಗ್ ನೀಡಿದ ಅವರು, ಬ್ರಿಟಿಷರ ಗುಲಾಮಗಿರಿ ವಿರುದ್ಧ ಹೋರಾಡಿ ಜೈಲು ಸೇರಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷದ ನಾಯಕರು.
ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟು ಶರಣಾಗಿದ್ದು ನಿಮ್ಮ ಪರಿವಾರದ ಸಾವರ್ಕರ್ ಮತ್ತು ದೇಶಭಕ್ತರು ಎನ್ನುವ ಇತಿಹಾಸವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿದಿರಲಿ ಎಂದು ಕುಟುಕಿದ್ದಾರೆ.