ಸಿಧು ಮುಸೇವಾಲಾ ಹತ್ಯೆ ಪ್ರಕರಣ – ಶಂಕಿತ 6 ಮಂದಿ ಬಂಧನ
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಪಂಜಾಬಿ ಗಾಯಕ ಸಿಧು ಮುಸೇವಾಲಾ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ಆರು ಮಂದಿಯನ್ನು ಉತ್ತರಾಖಂಡ ಮತ್ತು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಶಂಕಿತ 6 ಮಂದಿಯನ್ನ ಡೆಹ್ರಾಡೂನ್ನಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಖಚಿತಪಡಿಸಿದ್ದಾರೆ. ಉತ್ತರಾಖಂಡ ಎಸ್ಟಿಎಫ್ ಮತ್ತು ಪಂಜಾಬ್ ಪೊಲೀಸರು ಹಠಾತ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗಾಗಿ ಪಂಜಾಬ್ಗೆ ಸಾಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕ ಸಿಧು ಮುಸೇವಾಲಾ ಹತ್ಯೆ, ಪಂಜಾಬ್ ಸರ್ಕಾರ ಮುಸೇವಾಲಾಗೆ ಭದ್ರತೆ ಕಡಿಮೆ ಮಾಡಿದ 24 ಗಂಟೆಯೊಳಗೆ ನಡೆಸಿರುವುದು ಸಂಚಲನ ಮೂಡಿಸಿತ್ತು. ಮೂಸೆವಾಲಾ ಅವರು ತಮ್ಮ ಪೂರ್ವಿಕರ ಹುಟ್ಟೂರಾದ ಮಾನ್ಸಾಗೆ ಥಾರ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಸುಮಾರು 10 ರಿಂದ 12 ಜನ ಅಡ್ಡಹಾಕಿ ಅವರ ಮೇಲೆ ಅತ್ಯಂತ ಸಮೀಪದಿಂದ 20 ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮುಸೇವಾಲಾ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಆತನ ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೆನಡಾದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಮುಸೇವಾಲಾ ಅವರ ಹತ್ಯೆ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿತ್ತು. ಪಂಜಾಬ್ ಸರ್ಕಾರ ಈ ಹತ್ಯೆಗೆ ಸವಾಲೆಸೆದಿದ್ದು, ಹಂತಕರು ಕೈಬಿಡುವುದಿಲ್ಲ ಎಂದು ಸಿ ಎಂ ಭಗವಂತ್ ಸಿಂಗ್ ಮಾನ್ ಘೋಷಿಸಿದ್ದಾರೆ.