ಚಿಕ್ಕಬಳ್ಳಾಪುರ: ಜಿಲ್ಲೆಯ ಮಳಮಾಚನಹಳ್ಳಿ (Malamachanahalli) ಗ್ರಾಮದಲ್ಲಿನ ಬ್ಯಾಟರಾಯಸ್ವಾಮಿ ದೇವಸ್ಥಾನದಲ್ಲಿ (byatarayana swamy temple)ದೇವಸ್ಥಾನದ ಗರ್ಭಗುಡಿಯಲ್ಲಿ ರಕ್ತ ಹಾಗೂ ಮಾಂಸ ಸುರಿದು ಪಾಪಿಗಳು ವಿಕೃತಿ ಮೆರೆದಿದ್ದಾರೆ.
ದುಷ್ಕರ್ಮಿಗಳ ಈ ವಿಕೃತಿಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಕ್ತ ಹಾಗೂ ಮಾಂಸ ಪ್ರಾಣಿಗಳದ್ದೋ ಅಥವಾ ಮನುಷ್ಯರದ್ದೋ ಎಂಬ ಕುರಿತು ಪರಿಶೀಲನೆ ಮಾಡಲಾಗುತ್ತಿದ್ದು, ದೇವರ ಮೂರ್ತಿಯ ಪಾದದವರೆಗೂ ರಕ್ತ ಹರಿದಿದೆ ಎನ್ನಲಾಗುತ್ತಿದೆ. ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ಇದ್ದು, ಗ್ರಾಮಸ್ಥರು ಕೆಂಡಾಮಂಡಲವಾಗಿದ್ದಾರೆ.