ಮಗಳನ್ನ ಬೈದಿದ್ದಕ್ಕೆ ಸಿಟ್ಟಿಗೆದ್ದು, ಶಿಕ್ಷಕರಿಗೆ ಗುಂಡಿಕ್ಕಿದ ಯೋಧ….
ಶಿಕ್ಷಕರು ತನ್ನ ಮಗಳಿಗೆ ಹೊಡೆದಿದ್ದಾರೆ ಎಂದು ಸಿಟ್ಟಿಗೆದ್ದ ಯೋಧ ಶಿಕ್ಷಕರ ಮೇಲೆ ಗುಂಡು ಹಾರಿಸಿದ್ದಾನೆ. ಶಿಕ್ಷನನ್ನ ಉಳಿಸಲು ಆತನ ಪತ್ನಿ ಮುಂದೆ ಬಂದಿದ್ದು ಗುಂಡು ತಗುಲಿ ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ ಸೋಮವಾರ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಕೋಲ್ಕತ್ತಾದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಯೋಧ ಘಟನೆಯ ನಂತರ ಪರಾರಿಯಾಗಿದ್ದಾನೆ.
“ರಾಮ್ ಕಿಶನ್ ಸುರೇಂದ್ರ ಸಿಂಗ್ ಎಂಬ ಶಿಕ್ಷರ ಮೇಲೆ ಗುಂಡು ಹಾರಿಸಿದ್ದಾರೆ ಆದರೆ ಬುಲೆಟ್ ಅವರ ಪತ್ನಿ ರಾಜಬಾಲಾಗೆ ತಗುಲಿದೆ. ಅವರು ತನ್ನ ಪತಿಗೆ ಊಟ ನೀಡಲು ಶಾಲೆಗೆ ಬಂದಿದ್ದರು” ಎಂದು ಕಮಾನ್ ಪೊಲೀಸ್ ಠಾಣೆಯ ಉಸ್ತುವಾರಿ ದೌಲತ್ ರಾಮ್ ಹೇಳಿದರು.
ಜೈ ಬಜರಂಗ್ ಪಬ್ಲಿಕ್ ಸ್ಕೂಲ್ನಲ್ಲಿ ಹೋಮ್ವರ್ಕ್ ಮಾಡಿರದ ಕಾರಣ ತನ್ನ 12 ವರ್ಷದ ಮಗಳನ್ನು ನಿಂದಿಸಿದ್ದಕ್ಕಾಗಿ ಕಿಶನ್ ಸಿಂಗ್ ಕೃತ್ಯ ಎಸೆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಬಾಲಾ ಅವರ ಸ್ಥಿತಿ ಸದ್ಯ ಸ್ಥಿರವಾಗಿದ್ದು, ಮಂಗಳವಾರದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.