ವೈಯಕ್ತಿಕ ವಾಗಿ ಈಶ್ವರಪ್ಪ ಅವರಿಗೂ ಮುಜುಗರ ಇದು – ಸುಧಾಕರ್
ಬೆಂಗಳೂರು : ಯಡಿಯೂರಪ್ಪ ಅವರ ಸಂಪುಟದಲ್ಲಿ ನಾವೆಲ್ಲ ಸಂಪುಟ ಸಹೋದ್ಯೋಗಿಗಳು. ಎಲ್ಲರೂ ಸರ್ವಾನುಮತದಿಂದ ಆಯ್ಕೆ ಮಾಡಿ ಬಿಎಸ್ ವೈ ಯನ್ನು ಸಿಎಂ ಮಾಡಿದ್ದೇವೆ. ಎಲ್ಲಾ ಇಲಾಖೆಯ ಫೈಲ್ ಅನ್ನು ಸಿಎಂ ತರಿಸಬಹುದು. ಜರೂರು ಕೆಲಸ ಇದ್ರೆ ಸಚಿವರ ಗಮನಕ್ಕೆ ಬಾರದ ಅನುದಾನ ಬಿಡುಗಡೆ ಮಾಡಬಹುದು. ಈಶ್ವರಪ್ಪ ನವರು ಸಿಎಂ ಸಮಾನರು . ಸಿಎಂ ಜತೆಗೆ ನೇರವಾಗಿ ಬಂದು ಮಾತಾಡಬಹುದು. ರಾಜ್ಯ ಪಾಲರ ಅಂಗಳಕ್ಜೆ ಇದನ್ನು ತೆಗೆದು ಕೊಂಡು ಹೋಗಿದ್ದಾರೆ. ಸಿಎಂ ಹಾಗೂ ಪಕ್ಷಕ್ಕೆ ಮುಜುಗರ ಆಗಿದೆ. ವೈಯಕ್ತಿಕ ವಾಗಿ ಈಶ್ವರಪ್ಪ ರವರಿಗೂ ಮುಜುಗರ ಇದು. ಬಹಳ ಯೋಚ್ತೆ ಮಾಡಿ ಇಂತ ವಿಚಾರಕ್ಕೆ ಕೈ ಹಾಕಬೇಕಿತ್ತು ಎಂದು ಸಚಿವ ಡಾ. ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬಿಎಸ್ ವೈ ವಿರುದ್ಧ ಈಶ್ವರಪ್ಪ ದೂರು ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಸಿಎಂ ಅವರನ್ನು ವೀಕ್ ಮಾಡಬೇಕಿತ್ತು ಅನ್ನೋದು ಅವರ ಯೋಚ್ತೆ ಇರಲಿಕ್ಕೆ ಇಲ್ಲ. ಆದ್ರೆ ಇಲಾಖೆ ವಿಚಾರ ಅವರ ಗಮನಕ್ಕೆ ತರಬೇಕಿತ್ತು ಅನ್ನೋದು ಅವರ ಧೋರಣೆ. ನಮ್ಮ ನಾಯಕರಿಗೆ ಪತ್ರ ಕೊಡೊದು ತಪ್ಪು ಅಲ್ಲ. ಆದ್ರೆ ರಾಜ್ಯಪಾಲರಿಗೆ ಪತ್ರ ಬರೆದಿರೋದು ಆಡಳಿತಾತ್ಮಕವಾಗಿ ಕಾನೂನಾತ್ಮಕ ವಾಗಿ ಸರಿಯಲ್ಲ ಎಂದಿದ್ದಾರೆ.
ವೈದ್ಯನಿಗೆ ಚಪ್ಪಳಿಯಿಂದ ಹೊಡೆದ ಮಹಿಳೆ… ವಿಡಿಯೋ ವೈರಲ್..!
ಸಿಡಿ ಕೇಸ್ – SIT ಬದಲು CBIಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು.
ಸಿಎಂ ರಾಜೀನಾಮೆ ಕೊಡಲಿ… ಇಲ್ಲಾ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ – ಡಿಕೆಶಿ