ಮಂಡ್ಯ : ಹೈವೇ ಯೋಜನೆ , ರೈತರ ಸಮಸ್ಯೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅವರು ಚರ್ಚೆ ನಡೆಸಿ ಅವರ ಸಮಸ್ಯೆಗಳ ಬಗೆಹರಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ಧಾರೆ…
ಹೈವೇಯಿಂದ ಮಂಡ್ಯ ಜನರಿಗೆ ಸಮಸ್ಯೆಯಾಗಿದೆ. ಈ ಯೋಜನೆ ಮೈಸೂರು-ಬೆಂಗಳೂರು ಜನರಿಗೆ ಮಾತ್ರ ಉಪಯೋಗವಾಗ್ತಿದೆ… ಮಂಡ್ಯ ಜನರು, ರೈತರು, ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ. ಹೈವೇ ಯೋಜನೆ ಮಂಡ್ಯ ಜನರಿಗೂ ಉಪಯೋಗವಾಗಲಿ ಎಂದಿದ್ದು , ಈ ಬಗ್ಗೆ ಡಿಸಿ ಜೊತೆ ಸ್ಥಳ ಪರಿಶೀಲನೆ ನಡೆಸುವಂತೆ ಗೆ ಸಚಿವರಿಗೆ ಸಲಹೆ ನೀಡಿದ್ದಾರೆ..
ನಾಲೆಗಳಿಗೆ ನೀರು ಬಿಡದಿರುವ ಬಗ್ಗೆ ರೈತರು ಆಕ್ರೋಶ ಹೊರಹಾಕಿದ್ದಾರೆ.. ಕೂಡಲೇ ನಾಲೆಗಳಿಗೆ ನೀರು ಬಿಟ್ಟು, ರೈತರ ಬೆಳೆ ಉಳಿಸಿ ಎಂದು ಸಚಿವರಿಗೆ ಸಂಸದೆ ಸುಮಲತಾ ಮನವಿ ಮಾಡಿದ್ದಾರೆ..
ಇನ್ನೂ ನೀರಾವರಿ ಇಲಾಖೆ ವಿರುದ್ಧ ಸಚಿವರು, ಶಾಸಕರು ಆಕ್ರೋಶ ಹೊರಹಾಕಿದ್ದಾರೆ.. ಯಾರನ್ನ ಹೇಳಿ ಕೇಳಿ ನೀರು ನಿಲ್ಲಿಸಿದ್ದೀರಿ ಎಂದು ಸಚಿವ ನಾರಾಯಣಗೌಡ ಅವರು ಆಕ್ರೊಶ ಹೊರಹಾಕಿದ್ದು , ಇವತ್ತೇ ನೀರು ಬಿಡುಗಡೆ ಮಾಡಬೇಕೆಂದು ಸಚಿವ ಗೋಪಾಲಯ್ಯ ಅವರು ಸೂಚನೆ ನೀಡಿದ್ದಾರೆ..
ನಿಮಗೆ ನೀರು ನಿಲ್ಲಿಸಲು ಪರ್ಮೀಷನ್ ಕೊಟ್ಟವರು ಯಾರು? ಸಚಿವರು, ಶಾಸಕರ ಅನುಮತಿ ಪಡೆದಿದ್ದೀಯ? ಕೊಂದಾಕ್ಬಿಡ್ತಾರೆ ರೈತರು ಹುಷಾರ್. ನೀರಾವರಿ ಇಲಾಖೆ ಸೂಪರಿಡೆಂಟ್ ಎಂದು ಆನಂದ್ ವಿರುದ್ಧ ನಾರಾಯಣಗೌಡ ಕಿಡಿಕಾರಿದ್ದಾರೆ.. ಅಲ್ಲದೇ ಈ ಕೂಡಲೇ ಈತನನ್ನ ಸಸ್ಪೆಂಡ್ ಮಾಡಿ ಎಂದಿದ್ದಾರೆ.. ಯಾರ ಅನುಮತಿ ಪಡೆದು ನಾಲಾ ಕಾಮಗಾರಿ ಮಾಡ್ತಿದ್ದೀರಿ? ಈ ಕೂಡಲೇ, ಸಂಜೆ ಸಭೆ ಮುಗಿಯೋದ್ರೊಳಗೆ ನೀರು ಬಿಡಿ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಆದೇಶ ಹೊರಡಿಸಿದ್ದಾರೆ..