Supreme Court :ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೈವಾಡದ ಶಂಕೆ – ಕೇಂದ್ರಕ್ಕೆ ಸು.ಕೋರ್ಟ್ ಸೂಚನೆ
ಚುನಾವಣಾ ಆಯೋಗದ ಆಯುಕ್ತರನ್ನಾಗಿ ಅರುಣ್ ಗೋಯಲ್ ಅವರನ್ನು ನೇಮಿಸಿದ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಪೀಠದ ಮುಂದೆ ಸಲ್ಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ಸೂಚನೆ ನೀಡಿದೆ.
ಮಾಜಿ IAS ಅಧಿಕಾರಿ ಅರುಣ್ ಗೋಯಲ್ ಅವರಿಂದ ನಿವೃತ್ತಿಗೆ ಕೇವಲ 6 ವಾರ ಬಾಕಿ ಇರುವಾಗ ವಿಆರ್ಎಸ್ ಪಡೆದು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿರುವುದರ ಹಿಂದೆ ಕೈವಾಡವಿರಬಹುದೇ ಎಂದು ತಿಳಿಯಲು ಬಯಸಿರುವುದಾಗಿ ನ್ಯಾ. ಕೆಎಂ ಜೋಸಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಬುಧವಾರ ಹೇಳಿದೆ.
ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ಹೊಂದಿದ್ದ ಅರುಣ್ ಗೋಯಲ್ ಅವರನ್ನು ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.
ಚುನಾವಣಾ ಆಯುಕ್ತರ ನೇಮಕಾತಿ ಬಗ್ಗೆ ಸಂಶಯವಿದೆ ಎಂದು ಆರೋಪಿಸಿ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು.
ಅರುಣ್ ಗೋಯಲ್ ಗುರುವಾರದವರೆಗೂ ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿದ್ದರು. ಇದ್ದಕ್ಕಿದ್ದಂತೆ ಶುಕ್ರವಾರ ಅವರಿಗೆ ವಿಆರ್ಎಸ್ ನೀಡಿ ನಂತರ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಡಿ. 31ರಂದು ಅವರು ಅಧಿಕೃತವಾಗಿ ನಿವೃತ್ತರಾಗಬೇಕಿತ್ತು ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.
Supreme Court: Suspicion of involvement in the appointment of Election Commissioner – Supreme Court notice to the Centre