ಮುಷ್ತಾಕ್ ಆಲಿ ಟಿ-20 ನಾಕೌಟ್ ಹಂತ – ಕರ್ನಾಟಕದ ಸಾರಥಿ ಮನೀಷ್ ಪಾಂಡೆ
ಮುಷ್ತಾಕ್ ಆಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮನೀಷ್ ಪಾಂಡೆ ಅವರೇ ಮುನ್ನಡೆಸಲಿದ್ದಾರೆ.
ನವೆಂಬರ್ 16ರಿಂದ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. ದೆಹಲಿಯಲ್ಲಿ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.
ಲೀಗ್ ಹಂತದಲ್ಲಿ ಕರ್ನಾಟಕ ತಂಡ ಅದ್ಭುತವಾದ ಪ್ರದರ್ಶನವನ್ನೇ ನೀಡಿದೆ. ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿರುವ ಕರ್ನಾಟಕ ಲೀಗ್ ನ ಕೊನೆಯ ಪಂದ್ಯದಲ್ಲಿ ಪಶ್ವಿಮ ಬಂಗಾಳ ವಿರುದ್ಧ ಸೋಲು ಅನುಭವಿಸಿತ್ತು. ಉಳಿದಂತೆ ಸರ್ವಿಸಸ್, ಮುಂಬೈ, ಬರೋಡಾ ಮತ್ತು ಛತ್ತೀಸ್ ಗಢ ವಿರುದ್ಧ ಗೆಲುವಿನ ನಗೆ ಬೀರಿತ್ತು.
ಕರ್ನಾಟಕ ತಂಡ – ಮನೀಷ್ ಪಾಂಡೆ (ನಾಯಕ), ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್. ರೋಹನ್ ಕದಂ, ಅನಿರುದ್ಧ್ ಜೋಶಿ, ಅಭಿನವ್ ಮನೋಹರ್, ಕರುಣ್ ನಾಯರ್, ಬಿ. ಆರ್. ಸಮರ್ಥ್ (ವಿಕೆಟ್ ಕೀಪರ್), ಜೆ. ಸುಚಿತ್, ಶ್ರೇಯಸ್ ಗೋಪಾಲ್, ಕೆ.ಸಿ. ಕಾರ್ಯಪ್ಪ, ನಿಹಾಲ್ ಉಳ್ಳಾಲ್, ಪ್ರವೀಣ್ ದುಬೆ, ಕೌಶಿಕ್, ವೈಶಾಕ್, ದರ್ಶನ್. ಪ್ರತೀಕ್ ಜೈನ್. ರಿತೇಶ್ ಭಟ್ಕಳ, ವಿಧ್ಯಾದರ್ ಪಾಟೀಲ, ಆದಿತ್ಯ ಸೋಮಣ್ಣ.
ಹೆಡ್ ಕೋಚ್ – ಯರೇ ಗೌಡ, ಬೌಲಿಂಗ್ ಕೋಚ್ ಎಸ್. ಅರವಿಂದ್, ಫೀಲ್ಡಿಂಗ್ ಕೋಚ್ – ದೀಪಕ್ ಚೌಗುಲೆ.