Monday, December 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತವಾಂಗ್… ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..! ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!

Namratha Rao by Namratha Rao
June 25, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ತವಾಂಗ್… ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..! ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!

ಅರುಣಾಚಲ ಪ್ರದೇಶ.. ತನ್ನಲ್ಲಿ ಸಾಕಷ್ಟು ಪ್ರಾಕೃತಿಕ ಸಂಪತ್ತನ್ನಿರಿಸಿಕೊಂಡ ಭಾರತದ ರಾಜ್ಯಗಳಲ್ಲಿ ಒಂದು. ಅದರಲ್ಲೂ ಇಲ್ಲಿನ ತವಾಂಗ್ ವ್ಯಾಲಿ ಹೆಚ್ಚೆಚ್ಚು ಸುದ್ದಿಯಲ್ಲಿರುವ ಸ್ಥಳ. ಸಮುದ್ರ ಮಟ್ಟದಿಂದ ಸುಮಾರು 3,048 ಮೀಟರ ಎತ್ತರದಲ್ಲಿದೆ. ಅಷ್ಟೆ ಅಲ್ಲ, ಎರಡು ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಉತ್ತರದಲ್ಲಿ ಟಿಬೆಟ್ ಮತ್ತು ನೈರುತ್ಯದಲ್ಲಿ ಭೂತಾನ್ ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡ ತವಾಂಗ್ ಗೆ ಭೇಟಿ ನೀಡಿದಾಗ ಪ್ರವಾಸಿಗರು ಅವರ್ಣನೀಯ ಅನುಭವಕ್ಕೆ ಒಳಗಾಗುತ್ತಾರೆ.

Related posts

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

December 3, 2023
ದೇಶಕ್ಕೆ ಮೋದಿಯೇ ಗ್ಯಾರಂಟಿ!!

ದೇಶಕ್ಕೆ ಮೋದಿಯೇ ಗ್ಯಾರಂಟಿ!!

December 3, 2023

ತವಾಂಗ್ ಗೆ ಈ ಹೆಸರು ಬಂದಿದ್ದು ಹೇಗೆ ಗೊತ್ತಾ?

ತವಾಂಗ್ ಗೆ ಈ ಹೆಸರು ಬರಲು ಕಾರಣ ಅಲ್ಲಿನ ಮಠಗಳು. ತವಾಂಗ್ ನಗರದ ನಗರದ ಪಶ್ಚಿಮದ ಅಂಚಿನುದ್ದಕ್ಕೂ ನಿರ್ಮಿಸಲಾಗಿದ್ದ ತವಾಂಗ್ ಮಠಗಳಿಂದಲೇ ಈ ನಗರಕ್ಕೆ ತವಾಂಗ್ ಎಂಬ ಹೆಸರು ಬಂದಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳು , ಶಿಖರಗಳು ಮತ್ತು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ತವಾಂಗ್ ಐತಿಹಾಸಿಕವಾಗಿ ಟಿಬೆಟ್‌ನ ಭಾಗವಾಗಿತ್ತು, ಇದರಲ್ಲಿ ಮೊನ್ಪಾ ಜನರು ವಾಸಿಸುತ್ತಿದ್ದರು . ತವಾಂಗ್ ಮಠವನ್ನು ಮೆರಾಕ್ ಲಾಮಾ ಲೋಡ್ರೆ ಗಯಾಟ್ಸೊ ಅವರು 1681 ರಲ್ಲಿ 5 ನೇ ದಲೈ ಲಾಮಾ, ನ್ಗಾವಾಂಗ್ ಲೋಬ್ಸಾಂಗ್ ಗಯಾಟ್ಸೊ ಅವರ ಆಶಯಗಳಿಗೆ ಅನುಗುಣವಾಗಿ ಸ್ಥಾಪಿಸಿದರು ಎನ್ನಲಾಗುತ್ತದೆ.

ಮೌಂಟ್ ಅಬು – ಇದು ಮರುಭೂಮಿಯ ಒಯಾಸಿಸ್..! ರಾಜಸ್ಥಾನದ ಏಕೈಕ ಗಿರಿಧಾಮ..!

ಇಲ್ಲಿದೆ ಭಾರತದ ಅತಿದೊಡ್ಡ ಬೌದ್ಧ ಮಠ..!

ತವಾಂಗ್ನಲ್ಲಿರುವ ಬೌದ್ಧ ಮಠಗಳು ಎಲ್ಲೆಡೆ ಪ್ರಸಿದ್ಧಿ ಹೊಂದಿದೆ. ಅದರಲ್ಲೂ ಇಲ್ಲಿನ ತವಾಂಗ್ ಮಠಕ್ಕೆ ಭೇಟಿ ನೀಡಲು ಹಲವರು ಆಗಮಿಸುತ್ತಾರೆ. ತವಾಂಗ್ ಮಠವನ್ನು ಮೇರಾ ಲಾಮಾ ಲೋಡ್ರೆ ಗಯಾಟ್ಸೊ 5 ನೇ ದಲೈ ಲಾಮಾ , ನಾಗ್ವಾಂಗ್ ಲೋಬ್ಸಾಂಗ್ ಗಯಾಟ್ಸೊ ಅವರ ಆಶಯಕ್ಕೆ ಅನುಗುಣವಾಗಿ ಸ್ಥಾಪಿಸಿದರು . ಇದು ಗೆಲುಗ್ಪಾ ಪಂಥಕ್ಕೆ ಸೇರಿದ್ದು, ಭಾರತದ ಅತಿದೊಡ್ಡ ಬೌದ್ಧ ಮಠವಾಗಿದೆ.ಇದು ಟಿಬೆಟಿಯನ್ ಬೌದ್ಧರಿಗೆ ಪ್ರಮುಖ ಪವಿತ್ರ ತಾಣವಾಗಿದ್ದು, ಇದು ಆರನೇ ದಲೈ ಲಾಮಾ ಅವರ ಜನ್ಮಸ್ಥಳ.

ಇಲ್ಲಿಯ ಮರದ ಪಾತ್ರೆಗಳು ಭಾರೀ ಫೇಮಸ್..!

ತವಾಂಗ್ ಸೇರಿದಂತೆ ಅರುಣಾಚಲ ಪ್ರದೇಶದ ಬಹುತೇಕ ಕಡೆಗಳಲ್ಲಿ ಬಳಸುವ ಮರದ ಪಾತ್ರೆಗಳು ಆಕರ್ಷಕವಾಗಿರುತ್ತವೆ. ಡೊಲೊಂ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಮುಚ್ಚಳವಿರುವ ಮರದ ಬೌಲ್. ಇದನ್ನು ಊಟ ಮಾಡಲು ಬಳಸುತ್ತಾರೆ. ಶೆಂಗ್ ಖ್ಲೆಂ ಎಂದರೆ ಮರದಿಂದ ಮಾಡಿದ ಚಮಚ. ಗ್ರುಕ್, ಇದು ಚಹಾ ಸೇವನೆಗೆ ಬಳಸಲಾಗುವ ಮರದ ಕಪ್.

ಇನ್ನು ಇಲ್ಲಿನ‌ ತವಾಂಗ್ ಯುದ್ಧ ಸ್ಮಾರಕವನ್ನು ನೋಡಲೇಬೇಕು. 1962 ಇಂಡೋ – ಚೀನಾ ಯುದ್ಧದ ಸಮಯದಲ್ಲಿ ಭಾರತದ ರಕ್ಷಣೆಗೆ ತಮ್ಮ ಪರಮೋಚ್ಚ ತ್ಯಾಗ ನೀಡಿದ ಹುತಾತ್ಮರ ಗೌರವಾರ್ಥ ಕಟ್ಟಲಾಗಿದೆ . ಈ ಸ್ಮಾರಕ ಯುದ್ಧಘಟನೆಗಳು ಮತ್ತು ತಮ್ಮ ಜೀವವನ್ನು ತ್ಯಾಗ ಮಾಡಿದ ಸೈನಿಕರ ಪಟ್ಟಿಗಳನ್ನು ಒಳಗೊಂಡಿದೆ.

ಈ ಪ್ರಪಂಚದ ನಕಲಿ ದೇಶ… ಇವರು ತಿನ್ನದೇ ಇರುವ ಜೀವಿ ಇಲ್ಲ.. ಕಾಪಿ ಮಾಡೋದ್ರಲ್ಲಿ ಈ ದೇಶ ಎಕ್ಸ್ ಪರ್ಟ್..!

ಜಾತ್ರೆಗಳು ಮತ್ತು ಉತ್ಸವಗಳು ಅರುಣಾಚಲ ಪ್ರದೇಶದ ಬುಡಕಟ್ಟು ಜನರ ಜೀವನದ ಅವಿಭಾಜ್ಯ ಅಂಗ. ತವಾಂಗ್ ನಲ್ಲಿರುವ ಮೊನ್ಪ ಜನಾಂಗವೂ ಇದಕ್ಕೆ ಹೊರತಲ್ಲ. ಮೊನ್ಪ ಜನಾಂಗದ ಉತ್ಸವಗಳೂ ಕೂಡ ಹೆಚ್ಚಾಗಿ ಕೃಷಿ ಮತ್ತು ಧರ್ಮಕ್ಕೆ ಸಂಬಂಧಿಸಿರುತ್ತವೆ. ಪ್ರತಿ ವರ್ಷ ಮೊನ್ಪ ಜನಾಂಗದವರು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು, ಲೊಸಾರ್ ಉತ್ಸವ. ಇದು ಹೊಸ ವರ್ಷದ ಹಬ್ಬವಾಗಿದ್ದು, ಫೆಬ್ರುವರಿಯ ಕೊನೆಯ ವಾರ ಮತ್ತು ಮಾರ್ಚದ ಮೊದಲ ವಾರದಲ್ಲಿ ಇದನ್ನು ಭಕ್ತಿಪೂರ್ವಕವಾಗಿ, ವಿಜೃಂಭಣೆಯಿಂದ ಆಚರಿಸುವರು.

ಮಾರ್ಚ್ ದಿಂದ ಅಕ್ಟೋಬರ್ ವರೆಗಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಹಿತಕರವಾಗಿರುತ್ತವೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಅಸ್ಸಾಂನ ಗೌಹಾತಿ ಮತ್ತು ತೇಜ್ಪುರ್ ಮೂಲಕ ದೇಶದ ಇತರ ಭಾಗಗಳಿಂದ ತವಾಂಗ್ ತಲುಪಬಹುದು .

ಚೀನಾದ ರೇನ್‌ಬೋ ಪರ್ವತಗಳು ವಿಶ್ವದ ಭೌಗೋಳಿಕ ಅದ್ಭುತ, ಈ ಬೆಟ್ಟಗಳು ರೂಪುಗೊಂಡಿದ್ದು ಹೇಗೆ ಗೊತ್ತಾ?

ಗುಲಾಬಿ‌ ಸರೋವರ..! ಪಿಂಕ್ ಲೇಕ್ ಹೆಸರಿನ ಹಿಂದಿನ‌ ಇತಿಹಾಸ ಗೊತ್ತಾ..?

ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!

ಈ ನಗರಕ್ಕಿದೆ ಭವ್ಯ ಇತಿಹಾಸ..! ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಎಂಥವರೂ ಮಾರಿ ಹೋಗದೇ ಇರಲ್ಲ..!

Tags: arunachalapradeshtaavangtourism
ShareTweetSendShare
Join us on:

Related Posts

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

ಮೂರು ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿ ಹೇಳಿದ್ದೇನು?

by Honnappa Lakkammanavar
December 3, 2023
0

ದೆಹಲಿ: ದೇಶದಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ಇತ್ತೀಚೆಗೆ ನಡೆದಿತ್ತು. ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬಿದ್ದಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ....

ದೇಶಕ್ಕೆ ಮೋದಿಯೇ ಗ್ಯಾರಂಟಿ!!

ದೇಶಕ್ಕೆ ಮೋದಿಯೇ ಗ್ಯಾರಂಟಿ!!

by Honnappa Lakkammanavar
December 3, 2023
0

ನವದೆಹಲಿ: ದೇಶದ ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಭರ್ಜರಿ ಗೆಲುವಿನತ್ತ ಮುನ್ನುಗ್ಗತ್ತಿದೆ. ಹೀಗಾಗಿ ಮತ್ತೆ ಪ್ರಧಾನಿ ಮೋದಿ ಅವರು ಟ್ರೆಂಡ್ ಆಗುತ್ತಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ,...

ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಸ್ಥಳೀಯ ಪಕ್ಷಗಳದ್ದೇ ಹವಾ!

ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಸ್ಥಳೀಯ ಪಕ್ಷಗಳದ್ದೇ ಹವಾ!

by Honnappa Lakkammanavar
November 30, 2023
0

ನವದೆಹಲಿ: ಮಿಜೋರಾಂನಲ್ಲಿ ಮೊದಲ ಹಂತದಲ್ಲಿ ಎಲ್ಲ 40 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸದ್ಯ ಸಮೀಕ್ಷೆ ಹೊರ ಬಿದ್ದಿದ್ದು, ಪ್ರಾದೇಶಿಕ ಪಕ್ಷಗಳು ಮುಂದಿವೆ ಎನ್ನಲಾಗುತ್ತಿದೆ. ನ. 7ರಂದು ನಡೆದ...

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ

by admin
November 27, 2023
0

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ ಸ್ತ್ರೀ ಶಾಪ ಎಂದರೇನು? ಒಬ್ಬ ವ್ಯಕ್ತಿಗೆ ಸ್ತ್ರೀ ಶಾಪವಿದ್ದರೆ ಏನೆಲ್ಲಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ? ಸ್ತ್ರೀ ಶಾಪ ನಿವಾರಣೆ...

27 ನವೆಂಬರ್ 2023 ಕಾರ್ತಿಕ ಹುಣ್ಣಿಮೆ ಮೇಷ ಮತ್ತು ಸಿಂಹ ರಾಶಿಯವರಿಗೆ ಈ 5 ರಾಶಿಗಳಿಗೆ ಅದ್ಭುತವಾದ ಲಾಭಗಳು..!

27 ನವೆಂಬರ್ 2023 ಕಾರ್ತಿಕ ಹುಣ್ಣಿಮೆ ಮೇಷ ಮತ್ತು ಸಿಂಹ ರಾಶಿಯವರಿಗೆ ಈ 5 ರಾಶಿಗಳಿಗೆ ಅದ್ಭುತವಾದ ಲಾಭಗಳು..!

by admin
November 27, 2023
0

27 ನವೆಂಬರ್ 2023 ಕಾರ್ತಿಕ ಹುಣ್ಣಿಮೆ ಮೇಷ ಮತ್ತು ಸಿಂಹ ರಾಶಿಯವರಿಗೆ ಈ 5 ರಾಶಿಗಳಿಗೆ ಅದ್ಭುತವಾದ ಲಾಭಗಳು..! ಜಾತಕ ಇಂದು 27 ನವೆಂಬರ್ 2023 ಇಂದು...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

6 ವರ್ಷದ ಬಾಲಕನನ್ನು ತೀವ್ರವಾಗಿ ಗಾಯಗೊಳಿಸಿದ ನಾಯಿ!

6 ವರ್ಷದ ಬಾಲಕನನ್ನು ತೀವ್ರವಾಗಿ ಗಾಯಗೊಳಿಸಿದ ನಾಯಿ!

December 3, 2023
ಕರ್ತವ್ಯ ನಿರತ ಸಾರಿಗೆ ಬಸ್ ಚಾಲಕ ಹೃದಯಾಘಾತಕ್ಕೆ ಬಲಿ

ಕರ್ತವ್ಯ ನಿರತ ಸಾರಿಗೆ ಬಸ್ ಚಾಲಕ ಹೃದಯಾಘಾತಕ್ಕೆ ಬಲಿ

December 3, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram