ಇಂದು ನಡೆಯಲಿದೆ 2ನೇ ಟಿ-20 ಪಂದ್ಯ – ಕೃನಾಲ್ ಔಟ್.. ಕನ್ನಡಿಗ ಗೌತಮ್ಗೆ ಸಿಗುತ್ತಾ ಚಾನ್ಸ್..!
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ-ಟ್ವೆಂಟಿ ಪಂದ್ಯ ಜುಲೈ 28ರಂದು (ಇಂದು ) ನಡೆಯಲಿದೆ.
ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರಿಗೆ ಕೋವಿಡ್ ಸೋಂಕು ದೃಢವಾಗಿರುವುದರಿಂದ ಜುಲೈ 27ರಂದು ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಬಿಸಿಸಿಐ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಎರಡನೇ ಟಿ-ಟ್ವೆಂಟಿ ಪಂದ್ಯವನ್ನು ಇಂದು ನಡೆಸಲು ನಿರ್ಧರಿಸಿದೆ. ಅದೇ ರೀತಿ ಮೂರನೇ ಟಿ-ಟ್ವೆಂಟಿ ಪಂದ್ಯ ಜುಲೈ 29ರಂದು ನಡೆಯಲಿದೆ.
ಕೃನಾಲ್ ಪಾಂಡ್ಯ ಏಳು ದಿನಗಳ ಕಾಲ ಐಸೋಲೇಷನ್ ನಲ್ಲಿರಲಿದ್ದಾರೆ. ಇನ್ನುಳಿದಂತೆ ಕೃನಾಲ್ ಪಾಂಡ್ಯ ಜೊತೆಗಿದ್ದ ಎಂಟು ಮಂದಿ ಆಟಗಾರರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿತ್ತು. ಈ ಎಂಟು ಮಂದಿಗೂ ನೆಗೆಟಿವ್ ರಿಪೋರ್ಟ್ ಬಂದಿರುವುದರಿಂದ ಪಂದ್ಯವನ್ನು ಇಂದೇ ಆಯೋಜನೆ ಮಾಡಲು ನಿರ್ಧರ ಮಾಡಲಾಗಿದೆ.
ಇನ್ನುಳಿದಂತೆ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಏನು ಇಲ್ಲ. ಕೃನಾಲ್ ಪಾಂಡ್ಯ ಬದಲು ಕೆ. ಗೌತಮ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾಗೇ ಮೊದಲ ಟಿ-ಟ್ವೆಂಟಿ ಪಂದ್ಯದ ಹನ್ನೊಂದರ ಬಳಗವೇ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲೂ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬಹುದು.
ಶ್ರೀಲಂಕಾ ಸಂಭವನೀಯ 11ರ ಬಳಗ
ಅವಿಷ್ಕಾ ಫರ್ನಾಂಡೋ, ಮಿನೋದ್ ಭಾನುಕ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಾಂಕಾ, ಆಶೇನ್ ಬಂಡಾರ/ ಭಾನುಕಾ ರಾಜಪಕ್ಷೆ, ದಸುನ್ ಶಾನಕಾ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣರತ್ನೆ, ಇಸುರು ಉದನಾ, ದುಶ್ಮಂತ ಚಮೀರಾ, ಅಖಿಲ ಧನಂಜಯ.
ಟೀಮ್ ಇಂಡಿಯಾದ ಸಂಭವನೀಯ 11ರ ಬಳಗ
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಸಂಜು ಸಾಮ್ಸನ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶಾನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಯುಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ.