ADVERTISEMENT
Saturday, June 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿಕೊಂಡ ಸೂರ್ಯವಂಶಿ ಕ್ಷತ್ರಿಯರ 105 ಗ್ರಾಮಗಳಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ:

admin by admin
August 2, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿಕೊಂಡ ಸೂರ್ಯವಂಶಿ ಕ್ಷತ್ರಿಯರ 105 ಗ್ರಾಮಗಳಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ:


ಅಯೋಧ್ಯೆಯ ಸುತ್ತಮುತ್ತಲಿನ ಸುಮಾರು 105 ಹಳ್ಳಿಗಳಲ್ಲಿ ಈಗ ಹಬ್ಬದ ವಾತಾವರಣ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂತಸದ ಜೊತೆಗೆ ಇಲ್ಲಿಯ ಜನರು 500 ವರ್ಷಗಳ ನಂತರ ತಲೆಗೆ ಸಾಂಪ್ರದಾಯಿಕ ಪೇಟ ಮತ್ತು ಚರ್ಮದ ಶೂ ಗಳನ್ನು ಧರಿಸಲಿದ್ದಾರೆ.

Related posts

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

June 14, 2025
ಮತ್ತೊಮ್ಮೆ  ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

ಮತ್ತೊಮ್ಮೆ ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

June 14, 2025

ಅಯೋಧ್ಯೆಯ ಬಸ್ತಿ ಗ್ರಾಮಗಳಲ್ಲಿ ವಾಸಿಸುವವರು ಸೇರಿದಂತೆ ಸುತ್ತಮುತ್ತಲಿನ ಸುಮಾರು 105 ಹಳ್ಳಿಗಳಲ್ಲಿ ವಾಸಿಸುವ ಸೂರ್ಯವಂಶಿ ಕ್ಷತ್ರಿಯ ಕುಲಕ್ಕೆ ಸೇರಿದ ಪುರುಷರು ಈಗ ಪೇಟ ಮತ್ತು ಚರ್ಮದ ಬೂಟುಗಳನ್ನು ಧರಿಸಲಿದ್ದಾರೆ. ಅವರ ಪೂರ್ವಜರು 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ, ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು.

ಸೂರ್ಯವಂಶಿ ಕ್ಷತ್ರಿಯ ಕುಲದ ಜನರು ತಮ್ಮನ್ನು ರಾಮನ ವಂಶಸ್ಥರೆಂದೇ ಪರಿಗಣಿಸುತ್ತಾರೆ. ಈ ಧೈರ್ಯಶಾಲಿ ಪುರುಷರು 16 ನೇ ಶತಮಾನದಲ್ಲಿ ಪ್ರಬಲ ಮೊಘಲರ ವಿರುದ್ಧ ದೇವಾಲಯದ ಉಳಿವಿಗಾಗಿ ಹೋರಾಡಿದ್ದರು. ಆದರೆ ಅಂತಿಮವಾಗಿ ಹೋರಾಟದಲ್ಲಿ ಮೊಘಲರು ಜಯ ಗಳಿಸಿದರು. ಅಂದು ದೇವಾಲಯ ನಿರ್ಮಾಣವಾಗುವವರೆಗೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ ಮತ್ತು ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂದು ಸೂರ್ಯವಂಶಿ ಕ್ಷತ್ರಿಯ ವಂಶಸ್ಥರು ಪ್ರತಿಜ್ಞೆ ಮಾಡಿದ್ದರು. ಪೂರ್ವಜರ ಪ್ರತಿಜ್ಞೆಗೆ ಭಂಗವಾಗದಂತೆ ನಂತರದ ಪೀಳಿಗೆ ಅದನ್ನು ‌ಇಂದಿಗೂ ಅನುಸರಿಸಿಕೊಂಡ ಬಂದಿದೆ. ಇದೀಗ ಇವರ ಪ್ರತಿಜ್ಞೆ ನೆರವೇರುವ ಸಂದರ್ಭ ಬಂದಿದ್ದು, ಸಂಭ್ರಮದ ವಾತಾವರಣ ಹಳ್ಳಿಯ ಎಲ್ಲೆಡೆಯೂ ಮನೆ ಮಾಡಿದೆ.

ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪು ಇವರ ಈ ಸಂಭ್ರಮಕ್ಕೆ ಕಾರಣವಾಗಿದ್ದು, ಐತಿಹಾಸಿಕ ತೀರ್ಪಿನ ನಂತರ ಹಳ್ಳಿಗಳಲ್ಲಿ ಕ್ಷತ್ರಿಯ ವಂಶಸ್ಥ ಪುರುಷರಿಗೆ ಪೇಟವನ್ನು ವಿತರಿಸಲು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಈಗ ಅಯೋದ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ಇವರ 500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿದೆ.

ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಡಿ. ಗಜ್ಸಿಂಗ್ ಅವರು ಹೇಳುವಂತೆ ಹೀಗೊಂದು ಶಪಥ ಕೈಗೊಂಡ ಕ್ಷತ್ರಿಯ ಕುಲದ ಪುರುಷರು ಪೇಟ ಮತ್ತು ಬೂಟುಗಳ ಬಳಕೆಯನ್ನು ತ್ಯಜಿಸಿದ್ದರು. ಈ ಗ್ರಾಮಗಳಲ್ಲಿ ಸುಮಾರು ಒಂದು ಲಕ್ಷ ಜನ ಸೂರ್ಯವಂಶಿ ಕ್ಷತ್ರಿಯ ಕುಲದವರು ವಾಸಿಸುತ್ತಿದ್ದು, ಈಗಾಗಲೇ ಸುಮಾರು 400 ಪೇಟಗಳನ್ನು ವಿತರಿಸಲಾಗಿದೆ ಮತ್ತು ವಿತರಣೆ ಮುಂದುವರಿದಿದೆ. ‌

ಸಂಪ್ರದಾಯಿ ಪುರುಷಶಾಹಿಗಳು ಮದುವೆ, ಸಮಾರಂಭ ಸೇರಿದಂತೆ ಯಾವ ಸಂದರ್ಭದಲ್ಲಿಯೂ ಶಿರಸ್ತ್ರಾಣ, ಪೇಟವನ್ನು ಧರಿಸಿಲ್ಲ. ಈ ಪದ್ಧತಿ 500 ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಈ ಘಟನೆಯು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದರೂ, ಉತ್ತರಪ್ರದೇಶದಲ್ಲಿ ಶತ ಶತಮಾನಗಳಿಂದ ಅಯೋಧ್ಯೆ, ರಾಮ ಮತ್ತು ರಾಮ ಮಂದಿರ ಜಾತಿ ವೈವಿಧ್ಯತೆಗಳ ಬದುಕನ್ನು ಹೇಗೆ ಭಾವನಾತ್ಮಕವಾಗಿ ಬೆಸೆದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಸೂರ್ಯವಂಶಿ ಕುಲಕ್ಕೆ ಐದು ಶತಮಾನಗಳ ನಂತರ ಮಂದಿರ ನಿರ್ಮಾಣ ಜೀವನದಲ್ಲಿ ಸಂತೋಷ ಮತ್ತು ರೋಮಾಂಚನ ಕ್ಷಣವನ್ನು ಮರಳಿ ತಂದಿದೆ.

ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅಯೋದ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭುವಿನ ದೇಗುಲ ನಿರ್ಮಾಣ ಅಕ್ಷರಶಃ ಸೂರ್ಯವಂಶ ಕ್ಷತ್ರಿಯ ಕುಲಕ್ಕೆ ಹರ್ಷದ ತಿಲಕವನ್ನಿಟ್ಟಿದೆ ಮತ್ತು ಅವರ ಶತಶತಮಾನಗಳ ಸೂತಕ ಕಳೆದು ಸಂತೋಷವನ್ನು ಪುನರ್ ಸ್ಥಾಪಿಸಿದೆ.

Tags: AyodhyaindiakarnatakakshatriyaLatestlatest-newsRammandirShree-ramSupremecourtsuryavamsha
ShareTweetSendShare
Join us on:

Related Posts

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ‌2025

by Shwetha
June 14, 2025
0

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇದರ ವತಿಯಿಂದ ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಮಿನಿಸ್ಟ್ರಿಗಳಲ್ಲಿ ಖಾಲಿಯಾಗಿರುವ ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ...

ಮತ್ತೊಮ್ಮೆ  ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

ಮತ್ತೊಮ್ಮೆ ಎಚ್ಚರಿಕೆ ಘಂಟೆ ಮೊಳಗಿಸಿದ ಕೊರೋನಾ: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,131ಕ್ಕೆ ಏರಿಕೆ

by Shwetha
June 14, 2025
0

ಕೊರೋನಾ ವೈರಸ್‍‌ನ ಹೊಸ ತಳಿ ದೇಶದಾದ್ಯಂತ ಮತ್ತೆ ಆತಂಕ ಸೃಷ್ಟಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ,...

ಅದೃಷ್ಟದ ಸಂಖ್ಯೆಯೇ ಮಾಜಿ ಸಿಎಂ ರೂಪಾನಿಗೆ ಅಶುಭ ಆಯಿತಾ?

ಅದೃಷ್ಟದ ಸಂಖ್ಯೆಯೇ ಮಾಜಿ ಸಿಎಂ ರೂಪಾನಿಗೆ ಅಶುಭ ಆಯಿತಾ?

by Shwetha
June 14, 2025
0

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಭೀಕರವಾಗಿ ಪತನಗೊಂಡ ಪರಿಣಾಮ, ವಿಮಾನದಲ್ಲಿದ್ದ 265 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಗುಜರಾತ್‌ನ...

ಅಹಮದಾಬಾದ್ ವಿಮಾನ ದುರಂತ: DNA ಪರೀಕ್ಷೆಯಲ್ಲಿ 110 ಜನರ ಗುರುತು ಪತ್ತೆ – ಶವಗಳ ಗುರುತು ಇನ್ನೂ ಸವಾಲು

ಅಹಮದಾಬಾದ್ ವಿಮಾನ ದುರಂತ: DNA ಪರೀಕ್ಷೆಯಲ್ಲಿ 110 ಜನರ ಗುರುತು ಪತ್ತೆ – ಶವಗಳ ಗುರುತು ಇನ್ನೂ ಸವಾಲು

by Shwetha
June 14, 2025
0

ಜೂನ್ 12ರಂದು ಸಂಭವಿಸಿದ ಅಹಮದಾಬಾದ್ ವಿಮಾನ ದುರಂತದ ಸಾವು-ನೋವಿಗೆ ದೇಶವಿಡಿ ಶೋಕ ಆವರಿಸಿದೆ. 241 ಪ್ರಯಾಣಿಕರು ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 265 ಮಂದಿ...

‘ಥಗ್ ಲೈಫ್’ ವಿವಾದ: ಕ್ಷಮೆ ಕೇಳದೆ ಇರುವುದನ್ನು ಪ್ರಶ್ನಿಸಿ, ಕಮಲ್ ಹಾಸನ್ ಅರ್ಜಿ ವಿಚಾರಣೆ  ಮುಂದೂಡಿಕೆ

‘ಥಗ್ ಲೈಫ್’ ವಿವಾದ: ಕ್ಷಮೆ ಕೇಳದೆ ಇರುವುದನ್ನು ಪ್ರಶ್ನಿಸಿ, ಕಮಲ್ ಹಾಸನ್ ಅರ್ಜಿ ವಿಚಾರಣೆ ಮುಂದೂಡಿಕೆ

by Shwetha
June 14, 2025
0

ಕಮಲ್ ಹಾಸನ್ ನಟನೆಯ ಮತ್ತು ನಿರ್ಮಾಣದ 'ಥಗ್ ಲೈಫ್' ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಭದ್ರತೆ ಕಲ್ಪಿಸಬೇಕು ಎಂಬ ಮನವಿಯ ಮೇರೆಗೆ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram