Sunday, April 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿಕೊಂಡ ಸೂರ್ಯವಂಶಿ ಕ್ಷತ್ರಿಯರ 105 ಗ್ರಾಮಗಳಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ:

admin by admin
August 2, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿಕೊಂಡ ಸೂರ್ಯವಂಶಿ ಕ್ಷತ್ರಿಯರ 105 ಗ್ರಾಮಗಳಲ್ಲಿ ಈಗ ಎಲ್ಲೆಲ್ಲೂ ಸಂಭ್ರಮ ಸಡಗರದ ವಾತಾವರಣ:


ಅಯೋಧ್ಯೆಯ ಸುತ್ತಮುತ್ತಲಿನ ಸುಮಾರು 105 ಹಳ್ಳಿಗಳಲ್ಲಿ ಈಗ ಹಬ್ಬದ ವಾತಾವರಣ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂತಸದ ಜೊತೆಗೆ ಇಲ್ಲಿಯ ಜನರು 500 ವರ್ಷಗಳ ನಂತರ ತಲೆಗೆ ಸಾಂಪ್ರದಾಯಿಕ ಪೇಟ ಮತ್ತು ಚರ್ಮದ ಶೂ ಗಳನ್ನು ಧರಿಸಲಿದ್ದಾರೆ.

Related posts

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

April 1, 2023
Narendra Modi

Narendra Modi : ಮೋದಿ ಶೈಕ್ಷಣಿಕ ಅರ್ಹತೆ ವಿಚಾರ –  ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್… 

March 31, 2023

ಅಯೋಧ್ಯೆಯ ಬಸ್ತಿ ಗ್ರಾಮಗಳಲ್ಲಿ ವಾಸಿಸುವವರು ಸೇರಿದಂತೆ ಸುತ್ತಮುತ್ತಲಿನ ಸುಮಾರು 105 ಹಳ್ಳಿಗಳಲ್ಲಿ ವಾಸಿಸುವ ಸೂರ್ಯವಂಶಿ ಕ್ಷತ್ರಿಯ ಕುಲಕ್ಕೆ ಸೇರಿದ ಪುರುಷರು ಈಗ ಪೇಟ ಮತ್ತು ಚರ್ಮದ ಬೂಟುಗಳನ್ನು ಧರಿಸಲಿದ್ದಾರೆ. ಅವರ ಪೂರ್ವಜರು 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ, ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು.

ಸೂರ್ಯವಂಶಿ ಕ್ಷತ್ರಿಯ ಕುಲದ ಜನರು ತಮ್ಮನ್ನು ರಾಮನ ವಂಶಸ್ಥರೆಂದೇ ಪರಿಗಣಿಸುತ್ತಾರೆ. ಈ ಧೈರ್ಯಶಾಲಿ ಪುರುಷರು 16 ನೇ ಶತಮಾನದಲ್ಲಿ ಪ್ರಬಲ ಮೊಘಲರ ವಿರುದ್ಧ ದೇವಾಲಯದ ಉಳಿವಿಗಾಗಿ ಹೋರಾಡಿದ್ದರು. ಆದರೆ ಅಂತಿಮವಾಗಿ ಹೋರಾಟದಲ್ಲಿ ಮೊಘಲರು ಜಯ ಗಳಿಸಿದರು. ಅಂದು ದೇವಾಲಯ ನಿರ್ಮಾಣವಾಗುವವರೆಗೆ ತಲೆಗೆ ಪೇಟ, ಛತ್ರಿ ಬಳಸುವುದಿಲ್ಲ ಮತ್ತು ಚರ್ಮದ ಶೂ ಗಳನ್ನು ಧರಿಸುವುದಿಲ್ಲ ಎಂದು ಸೂರ್ಯವಂಶಿ ಕ್ಷತ್ರಿಯ ವಂಶಸ್ಥರು ಪ್ರತಿಜ್ಞೆ ಮಾಡಿದ್ದರು. ಪೂರ್ವಜರ ಪ್ರತಿಜ್ಞೆಗೆ ಭಂಗವಾಗದಂತೆ ನಂತರದ ಪೀಳಿಗೆ ಅದನ್ನು ‌ಇಂದಿಗೂ ಅನುಸರಿಸಿಕೊಂಡ ಬಂದಿದೆ. ಇದೀಗ ಇವರ ಪ್ರತಿಜ್ಞೆ ನೆರವೇರುವ ಸಂದರ್ಭ ಬಂದಿದ್ದು, ಸಂಭ್ರಮದ ವಾತಾವರಣ ಹಳ್ಳಿಯ ಎಲ್ಲೆಡೆಯೂ ಮನೆ ಮಾಡಿದೆ.

ಭಾರತದ ಸುಪ್ರೀಂ ಕೋರ್ಟ್‌ನ ತೀರ್ಪು ಇವರ ಈ ಸಂಭ್ರಮಕ್ಕೆ ಕಾರಣವಾಗಿದ್ದು, ಐತಿಹಾಸಿಕ ತೀರ್ಪಿನ ನಂತರ ಹಳ್ಳಿಗಳಲ್ಲಿ ಕ್ಷತ್ರಿಯ ವಂಶಸ್ಥ ಪುರುಷರಿಗೆ ಪೇಟವನ್ನು ವಿತರಿಸಲು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಈಗ ಅಯೋದ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ಇವರ 500 ವರ್ಷಗಳ ಪ್ರತಿಜ್ಞೆಯನ್ನು ನೆರವೇರಿಸಿದೆ.

ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಡಿ. ಗಜ್ಸಿಂಗ್ ಅವರು ಹೇಳುವಂತೆ ಹೀಗೊಂದು ಶಪಥ ಕೈಗೊಂಡ ಕ್ಷತ್ರಿಯ ಕುಲದ ಪುರುಷರು ಪೇಟ ಮತ್ತು ಬೂಟುಗಳ ಬಳಕೆಯನ್ನು ತ್ಯಜಿಸಿದ್ದರು. ಈ ಗ್ರಾಮಗಳಲ್ಲಿ ಸುಮಾರು ಒಂದು ಲಕ್ಷ ಜನ ಸೂರ್ಯವಂಶಿ ಕ್ಷತ್ರಿಯ ಕುಲದವರು ವಾಸಿಸುತ್ತಿದ್ದು, ಈಗಾಗಲೇ ಸುಮಾರು 400 ಪೇಟಗಳನ್ನು ವಿತರಿಸಲಾಗಿದೆ ಮತ್ತು ವಿತರಣೆ ಮುಂದುವರಿದಿದೆ. ‌

ಸಂಪ್ರದಾಯಿ ಪುರುಷಶಾಹಿಗಳು ಮದುವೆ, ಸಮಾರಂಭ ಸೇರಿದಂತೆ ಯಾವ ಸಂದರ್ಭದಲ್ಲಿಯೂ ಶಿರಸ್ತ್ರಾಣ, ಪೇಟವನ್ನು ಧರಿಸಿಲ್ಲ. ಈ ಪದ್ಧತಿ 500 ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಈ ಘಟನೆಯು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿದ್ದರೂ, ಉತ್ತರಪ್ರದೇಶದಲ್ಲಿ ಶತ ಶತಮಾನಗಳಿಂದ ಅಯೋಧ್ಯೆ, ರಾಮ ಮತ್ತು ರಾಮ ಮಂದಿರ ಜಾತಿ ವೈವಿಧ್ಯತೆಗಳ ಬದುಕನ್ನು ಹೇಗೆ ಭಾವನಾತ್ಮಕವಾಗಿ ಬೆಸೆದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಸೂರ್ಯವಂಶಿ ಕುಲಕ್ಕೆ ಐದು ಶತಮಾನಗಳ ನಂತರ ಮಂದಿರ ನಿರ್ಮಾಣ ಜೀವನದಲ್ಲಿ ಸಂತೋಷ ಮತ್ತು ರೋಮಾಂಚನ ಕ್ಷಣವನ್ನು ಮರಳಿ ತಂದಿದೆ.

ಸುಪ್ರೀಂ ಕೋರ್ಟ್ ತೀರ್ಪು ಮತ್ತು ಅಯೋದ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭುವಿನ ದೇಗುಲ ನಿರ್ಮಾಣ ಅಕ್ಷರಶಃ ಸೂರ್ಯವಂಶ ಕ್ಷತ್ರಿಯ ಕುಲಕ್ಕೆ ಹರ್ಷದ ತಿಲಕವನ್ನಿಟ್ಟಿದೆ ಮತ್ತು ಅವರ ಶತಶತಮಾನಗಳ ಸೂತಕ ಕಳೆದು ಸಂತೋಷವನ್ನು ಪುನರ್ ಸ್ಥಾಪಿಸಿದೆ.

Tags: AyodhyaindiakarnatakakshatriyaLatestlatest-newsRammandirShree-ramSupremecourtsuryavamsha
ShareTweetSendShare
Join us on:

Related Posts

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

by admin
April 1, 2023
0

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ? ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ...

Narendra Modi

Narendra Modi : ಮೋದಿ ಶೈಕ್ಷಣಿಕ ಅರ್ಹತೆ ವಿಚಾರ –  ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್… 

by Naveen Kumar B C
March 31, 2023
0

Narendra Modi : ಮೋದಿ ಶೈಕ್ಷಣಿಕ ಅರ್ಹತೆ ವಿಚಾರ -  ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್… ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ...

IPL 2023

IPL 2023 : ಯಾವ ತಂಡ ಯಾವ ತಂಡವನ್ನ, ಯಾವ ದಿನ, ಯಾವ ಸಮಯದಲ್ಲಿ ಎದುರಿಸಲಿದೆ ಎಂಬ ಟೈಂ ಟೇಬಲ್ ಇಲ್ಲಿದೆ….

by Naveen Kumar B C
March 31, 2023
0

IPL 2023 : ಯಾವ ತಂಡ ಯಾವ ತಂಡವನ್ನ, ಯಾವ ದಿನ, ಯಾವ ಸಮಯದಲ್ಲಿ ಎದುರಿಸಲಿದೆ ಎಂಬ ಟೈಂ ಟೇಬಲ್ ಇಲ್ಲಿದೆ….   ಇನ್ನೇನು  ಕೆಲವೇ ಗಂಟೆಗಳಲ್ಲಿ...

Dildar Shreys Manju

Shreyas Manju :  ಕೆ ಮಂಜು ಪುತ್ರನ ‘ದಿಲ್ ದಾರ್’ ಸಿನಿಮಾಗೆ  ಕ್ಲಾಪ್ ಮಾಡಿದ  ವಿ ರವಿಚಂದ್ರನ್…. 

by Naveen Kumar B C
March 31, 2023
0

Shreyas Manju :  ಕೆ ಮಂಜು ಪುತ್ರನ ‘ದಿಲ್ ದಾರ್’ ಸಿನಿಮಾಗೆ  ಕ್ಲಾಪ್ ಮಾಡಿದ  ವಿ ರವಿಚಂದ್ರನ್….   ರಾಣಾ ಸಿನಿಮಾ ಬಳಿಕ ಶ್ರೇಯಸ್ ಕೆ ಮಂಜು...

Lakhmi Narasimha

Astrology : ಸಂಸಾರವನ್ನು ಸಂಕಷ್ಟಕ್ಕೆ ದೂಡುವ ಜನ್ಮ ದೋಷಗಳನ್ನು ಹೋಗಲಾಡಿಸಲು ಈ ಒಂದು ಸರಳ ವಿಧಾನವನ್ನು ಅನುಸರಿಸಿದರೆ ಸಾಕು. ಬಡತನವನ್ನು ತೊಡೆದುಹಾಕಲು ಮತ್ತು ಸಂತೋಷದಿಂದ ಬದುಕಲು ಸುಲಭವಾದ ಮಾರ್ಗ….

by Naveen Kumar B C
March 31, 2023
0

ಸಂಸಾರವನ್ನು ಸಂಕಷ್ಟಕ್ಕೆ ದೂಡುವ ಜನ್ಮ ದೋಷಗಳನ್ನು ಹೋಗಲಾಡಿಸಲು ಈ ಒಂದು ಸರಳ ವಿಧಾನವನ್ನು ಅನುಸರಿಸಿದರೆ ಸಾಕು. ಬಡತನವನ್ನು ತೊಡೆದುಹಾಕಲು ಮತ್ತು ಸಂತೋಷದಿಂದ ಬದುಕಲು ಸುಲಭವಾದ ಮಾರ್ಗ.... ಬಡತನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology- ಶನಿಯ ಸಂಚಾರದಿಂದ ಒದಗಿ ಬರಲಿದೆ ಈ 7 ರಾಶಿಯವರಿಗೆ ವಿಪರೀತ ರಾಜಯೋಗ; ಬಾರಿ ಅದೃಷ್ಟ ಶುರುವಾಗುತ್ತದೆ.

April 1, 2023
Fire disaster

Fire disaster ಅಗ್ನಿ ದುರಂತ: 7 ಕಾರ್ಮಿಕರ ಸಾವು

April 1, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram