ನಾಲೆಗೆ ಕಾರು ಬಿದ್ದ ಪರಿಣಾಮ ಐವರು ಜಲ ಸಮಾಧಿಯಾಗಿರುವ ಘಟನೆಯೊಂದು ನಡೆದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಬನಘಟ್ಟ ಹತ್ತಿರದ ನಾಲೆಗೆ ಕಾರು ಉರುಳಿದೆ. ಭದ್ರಾವತಿಯ ಚಂದ್ರಪ್ಪ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ನಾಗಮಂಗಲಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರು ವೇಗವಾಗಿ ಬಂದು ತಡೆಗೋಡೆಗೆ ಡಿಕ್ಕಿ ಹೊಡೆದು, ನಾಲೆಗೆ ಬಿದ್ದಿದೆ ಎನ್ನಲಾಗಿದೆ.
ತುಮಕೂರು ನಿವಾಸಿ ಕೆ.ಟಿ.ಕೃಷ್ಣಪ್ಪ(64), ಚಂದ್ರಪ್ಪ(61), ಧನಂಜಯ್ಯ (55), ಬಾಬು, ಜಯಣ್ಣ ಸೇರಿದಂತೆ ಐವರು ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಾಗಿ ನಾಲೆಗೆ ಡ್ಯಾಂನಿಂದ ಬರುವ ನೀರನ್ನು ಬಿಡುಗಡೆ ಮಾಡದಂತೆ ಸ್ಥಗಿತ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಯತೀಶ್ ಬೇಟಿ ನೀಡಿದ್ದಾರೆ.