ಜಯ ಜೇಟ್ಲಿಗೆ ನೀಡಿದ್ದ 4 ವರ್ಷಗಳ ಜೈಲು ಶಿಕ್ಷೆಯನ್ನು ತಡೆಹಿಡಿದ ದೆಹಲಿ ಹೈಕೋರ್ಟ್
ಹೊಸದಿಲ್ಲಿ, ಜುಲೈ 30: ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಮತಾ ಪಕ್ಷದ ಮಾಜಿ ಮುಖ್ಯಸ್ಥ ಜಯ ಜೇಟ್ಲಿಗೆ ನೀಡಿದ್ದ 4 ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ ಎಂದು ವಕೀಲರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷೆಯನ್ನು ಪ್ರಶ್ನಿಸಿ ಜಯ ಜೇಟ್ಲಿ ಅವರ ಮೇಲ್ಮನವಿಗೆ ಹೈಕೋರ್ಟ್, ಸಿಬಿಐ ಪ್ರತಿಕ್ರಿಯೆ ಕೋರಿದೆ.
ಇಂದು, ದೆಹಲಿ ನ್ಯಾಯಾಲಯವು ಜಯ ಜೇಟ್ಲಿ ಮತ್ತು ಇತರ ಇಬ್ಬರಿಗೆ 4-0 ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶ ವೀರೇಂದ್ರ ಭಟ್ ಅವರು ಜಯ ಜೇಟ್ಲಿಯ ಮಾಜಿ ಪಕ್ಷದ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್ಪಿ ಮುರ್ಗೈ ಅವರಿಗೆ 4 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದ್ದಾರೆ ಎಂದು ಮೇಜ್ ಜನರಲ್ ಮುರ್ಗೈ ಪರ ವಕೀಲ ವಿಕ್ರಮ್ ಪನ್ವಾರ್ ಹೇಳಿದ್ದರು.
ನ್ಯಾಯಾಲಯವು ಇನ್-ಕ್ಯಾಮೆರಾ ವಿಚಾರಣೆಯಲ್ಲಿ, ಮೂವರು ಅಪರಾಧಿಗಳಿಗೆ ತಲಾ 1 ಲಕ್ಷ ರೂ.ಗಳ ದಂಡವನ್ನು ವಿಧಿಸಿತು ಮತ್ತು ಇಂದು ಸಂಜೆ 5 ಗಂಟೆಯೊಳಗೆ ಅದರ ಮುಂದೆ ಶರಣಾಗುವಂತೆ ನಿರ್ದೇಶಿಸಿತ್ತು.
ಥರ್ಮಲ್ ಇಮೇಜರ್ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ಮೂವರ ಮೇಲಿತ್ತು.
ವೆಸ್ಟೆಂಡ್ ಇಂಟರ್ನ್ಯಾಷನಲ್ ಕಂಪನಿಯ ಪ್ರತಿನಿಧಿ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರಿಂದ ಜಯ ಜೇಟ್ಲಿ 2 ಲಕ್ಷ ರೂ.ಗಳನ್ನು ಅಕ್ರಮವಾಗಿ ಸ್ವೀಕರಿಸಿದ್ದರೆ, ಮೇಜ್ ಜನರಲ್ ಮುರ್ಗೈಗೆ 20,000 ರೂ ಸ್ವೀಕರಿಸಿದ ವಿಚಾರ 2001 ಜನವರಿಯಲ್ಲಿ ಸುದ್ದಿ ಪೋರ್ಟಲ್ ತೆಹಲ್ಕಾದಲ್ಲಿ ಪ್ರಸಾರವಾದ ‘ಆಪರೇಷನ್ ವೆಸ್ಟೆಂಡ್’ ಮೂಲಕ ಬೆಳಕಿಗೆ ಬಂದಿತ್ತು.