ಶಿವಮೊಗ್ಗ : ಜಿಲ್ಲೆಯಲ್ಲಿ ನಡೆದಿದ್ದ ದಸರಾ ಜಂಬೂ ಸವಾರಿಗೆ (Jambu Savari) ಬಂದಿದ್ದ ನೇತ್ರಾವತಿ ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಸಕ್ರೆಬೈಲಿನ ನೇತ್ರಾವತಿ ಈಗ ಮರಿಗೆ ಜನ್ಮ ನೀಡಿದೆ. ನಗರದ ವಾಸವಿ ಶಾಲೆ ಆವರಣದಲ್ಲಿ ನೇತ್ರಾವತಿ ಆನೆ (Elephant) ಜನ್ಮ ನೀಡಿದೆ. ಸದ್ಯ ತಾಯಿ ಹಾಗೂ ಮರಿ ಎರಡು ಆರೋಗ್ಯವಾಗಿವೆ ಎನ್ನಲಾಗಿದೆ. ಶಿವಮೊಗ್ಗ ದಸರಾ (Shivamogga Dasara) ಜಂಬೂ ಸವಾರಿಗೆ ಸಾಗರ್, ಹೇಮಾವತಿ ಹಾಗೂ ನೇತ್ರಾವತಿ ಎಂಬ ಆನೆಗಳನ್ನು ಕರೆತರಲಾಗಿತ್ತು. ಹೀಗಾಗಿ ಈ ಆನೆಗಳು ವಾಸವಿ ಶಾಲೆಯ ಆವರಣದಲ್ಲಿ ತಂಗಿದ್ದವು. ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು, ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
3 ದಿನದ ಹಿಂದೆ ಆನೆಗಳನ್ನು ಶಿವಮೊಗ್ಗಕ್ಕೆ ಕರೆ ತರಲಾಗಿತ್ತು. ಜಂಬೂ ಸವಾರಿಯ ತಾಲೀಮು ಸಹ ನಡೆಸಲಾಗಿತ್ತು. ಈ ವೇಳೆ ಆನೆಯು ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಸದ್ಯ ಆನೆ ಹಾಗೂ ಮರಿಯನ್ನು ಸಕ್ರೆಬೈಲು ಬಿಡಾರಕ್ಕೆ ಮರಳಿ ಕರೆದೊಯ್ಯಲಾಗಿದೆ.