ADVERTISEMENT
Saturday, May 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರೆಡ್ ಬಾಲ್ ಕ್ರಿಕೆಟ್ ನಲ್ಲಿ ‘ರೋ’ ಯುಗಾಂತ್ಯ

The End of the 'Ro' Era in Red Ball Cricket

Shwetha by Shwetha
May 8, 2025
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ರೆಡ್ ಬಾಲ್ ಕ್ರಿಕೆಟ್ ನಲ್ಲಿ ‘ರೋ’ ಯುಗಾಂತ್ಯ:

ಟೀಂ ಇಂಡಿಯಾ ಇತಿಹಾಸದಲ್ಲೇ ಮರೆಯಲಾಗದ ಕೆಲವು ಕ್ರಿಕೆಟಿಗರ ಪೈಕಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕೂಡಾ ಒಬ್ಬರಾಗಿ ಉಳಿಯುತ್ತಾರೆ. ನಿನ್ನೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ರೋ, ತಮ್ಮ ರೆಡ್-ಬಾಲ್ ಸ್ವರೂಪದಲ್ಲಿ ರೋಲರ್ ಕೋಸ್ಟರ್ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

Related posts

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

May 30, 2026
ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

May 30, 2026

2021 ರಲ್ಲಿ, ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ಆದ ರೋಹಿತ್, ಭಾರತದ 35 ನೇ ಟೆಸ್ಟ್ ನಾಯಕರೆನಿಸಿಕೊಂಡರು. ಅವರ ಮೊದಲ ಕ್ಯಾಪ್ಟೆನ್ಸಿ ಸೀರಿಸ್ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿ. ರೋ ನಾಯಕತ್ವದಡಿಯಲ್ಲಿ 2021/23 ಆವೃತ್ತಿಯಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ತಲುಪಿತ್ತು, ಆದರೆ ದುರದೃಷ್ಟವಶಾತ್ ಅಂತಿಮ ಹಂತದ ಪ್ರಶಸ್ತಿ ಸೆಣಸಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತು.

2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನವು 12 ವರ್ಷಗಳಿಗೂ ಹೆಚ್ಚು ಕಾಲ ಅತ್ಯಂತ ವೈಭವದಿಂದ ಸಾಗಿತು ಎಂದರೆ ತಪ್ಪಲ್ಲ. ಇದು ಭಾರತೀಯ ಆಟಗಾರನೊಬ್ಬನ ಎರಡನೇ ಅತ್ಯಧಿಕ ಟೆಸ್ಟ್ ಕ್ರಿಕೆಟ್ ಕಾಲಮಾನ.

12 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಕಾಲ ಸವೆಸಿದರೂ, ರೋಹಿತ್ ಆಡಿದ್ದು ಕೇವಲ 67 ಟೆಸ್ಟ್ ಪಂದ್ಯಗಳನ್ನು ಮಾತ್ರ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ವೃತ್ತಿ ಜೀವನ ಪ್ರಾರಂಭಿಸಿದ ರೋಹಿತ್, ತಮ್ಮ ವೃತ್ತಿಜೀವನದ ಮೊದಲಾರ್ಧದಲ್ಲಿ, ಅಂದರೆ 2013-2019 ರಲ್ಲಿ ಅಸ್ಥಿರತೆ ಅನುಭವಿಸಿದರು. 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದಾಗ ಅವರ ರೆಡ್-ಬಾಲ್ ವೃತ್ತಿಜೀವನದ ವೈಖರಿಯೇ ಬದಲಾಯಿತು.

ರೋಹಿತ್, ಆರಂಭಿಕ ಆಟಗಾರನಾಗಿ ಬಡ್ತಿ ಪಡೆಯುವ ಮೊದಲು 20 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ನಂತರದ 47 ಪಂದ್ಯಗಳಲ್ಲಿ ಬಹುತೇಕ ಇನ್ನಿಂಗ್ಸ್ ಆರಂಭಿಸಿದ್ದು ಅಗ್ರ ಕ್ರಮಾಂಕದಲ್ಲಿ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಒಂದೆರಡು ಟೆಸ್ಟ್‌ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಪಂದ್ಯಗಳಲ್ಲಿ ಓಪನರ್ ಆಗಿ ಹೆಚ್ಚು.

ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ 40.57 ಸರಾಸರಿಯೊಂದಿಗೆ 4,301 ರನ್ ಗಳಿಸಿದ್ದಾರೆ. 66 ಇನ್ನಿಂಗ್ಸ್‌ಗಳಲ್ಲಿ 2,697 ರನ್ ಗಳಿಸುವ ಮೂಲಕ ಆರಂಭಿಕರಾಗಿ ಹೆಚ್ಚು ಯಶಸ್ವಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯರೊಬ್ಬರು ಜಂಟಿಯಾಗಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಅವರು ತಮ್ಮ ವೃತ್ತಿಜೀವನದಲ್ಲಿ 91 ಸಿಕ್ಸರ್‌ಗಳನ್ನು ಗಳಿಸಿದ್ದಾರೆ ಆದರೆ ಸೆಹ್ವಾಗ್ ಇಷ್ಟು ಸಿಕ್ಸರ್ ಗಳಿಗೆ 104 ಪಂದ್ಯಗಳನ್ನು ತೆಗೆದುಕೊಂಡಿದ್ದನ್ನು ಹೋಲಿಸಿದರೆ ರೋಹಿತ್ ಸಾಧನೆ ಕೇವಲ 67 ಪಂದ್ಯಗಳಲ್ಲಿ ದಾಖಲಾಗಿದೆ.

ಟೆಸ್ಟ್ ಕರಿಯರ್ ನಲ್ಲಿ ರೋಹಿತ್ ಶರ್ಮಾ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 212. ಇದು ಅವರ ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಿದ ಏಕೈಕ ದ್ವಿಶತಕ. 28 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳೊಂದಿಗೆ, ರೋಹಿತ್ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 255 ಎಸೆತಗಳಲ್ಲಿ 212 ರನ್ ಗಳಿಸಿದ್ದರು. ಆ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 202 ರನ್‌ಗಳಿಂದ ಗೆದ್ದುಕೊಂಡಿತ್ತು.

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ, ರೋಹಿತ್ ಭಾರತವನ್ನು 24 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. 12 ಪಂದ್ಯಗಳಲ್ಲಿ ಗೆಲುವು, 9 ಪಂದ್ಯಗಳಲ್ಲಿ ಸೋಲು ಮತ್ತು 3 ಪಂದ್ಯಗಳಲ್ಲಿ ಡ್ರಾ. ಅಂದರೆ ನಾಯಕನಾಗಿ ರೋಹಿತ್ ಶರ್ಮಾ ಅವರ ಗೆಲುವಿನ ದಾಖಲೆ 50 ಪ್ರತಿಶತ. 2023 ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೊದಲು ರೋ, ಸತತ ನಾಲ್ಕು ಟೆಸ್ಟ್ ಗೆಲುವುಗಳನ್ನು ದಾಖಲಿಸಿದ್ದರು. ರೋಹಿತ್ ನಾಯಕತ್ವದಲ್ಲಿ ಭಾರತ ಕಡೆಯ ಬಾರಿಗೆ ಗೆಲುವು ಸಾಧಿಸಿದ್ದು 2024 ರಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ.

ರೋಹಿತ್ ಅವರ ಟೆಸ್ಟ್ ನಾಯಕತ್ವದ ವೃತ್ತಿಜೀವನದ ಅತಿದೊಡ್ಡ ಸೋಲು ಕಂಡಿದ್ದು 12 ವರ್ಷಗಳ ನಂತರ 2024ರಲ್ಲಿ ತವರಿನಲ್ಲಿ ನಡೆದ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ. ಭಾರತದ ನೆಲದಲ್ಲಿ ಸದಾ ಪಾರಮ್ಯ ಮರೆಯುತ್ತಿದ್ದ ಟೀಂ ಇಂಡಿಯಾ 3-0 ಅಂತರದಲ್ಲಿ ಕಿವಿಸ್ ವಿರುದ್ಧ ಮಣ್ಣು ಮುಕ್ಕಿದ್ದು ಪ್ರಾಯಶಃ ರೋಹಿತ್ ವೈಯಕ್ತಿಕ ಕ್ರಿಕೆಟ್ ಬದುಕಿಗೆ ಮರೆಯಲಾಗದ ಗಾಯ.

ನಾಯಕರಾಗಿ ರೋಹಿತ್ ಆಡಿದ ಒಟ್ಟು ಪಂದ್ಯಗಳು: 24
ಗೆಲುವು: 12
ಸೋಲು: 9
ಡ್ರಾ: 3

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟೆಸ್ಟ್ ಸರಣಿ ಫಲಿತಾಂಶಗಳು:
1) ಶ್ರೀಲಂಕಾವನ್ನು 2-0 ಅಂತರದಿಂದ ಸೋಲಿಸಿದ್ದು.
2) ಬಾಂಗ್ಲಾದೇಶವನ್ನು 2-0 ಅಂತರದಿಂದ ಮಣಿಸಿದ್ದು.
3) ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿದ್ದು.
4) Wಖಿಅ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು
5) ವೆಸ್ಟ್ ಇಂಡೀಸ್ ವಿರುದ್ಧ 1-0 ಅಂತರದಿಂದ ಗೆಲುವು.
6) ದಕ್ಷಿಣ ಆಫ್ರಿಕಾವನ್ನು 1-1 ಅಂತರದಿಂದ ಸರಣಿ ಸಮಗೊಳಿಸಿದ್ದು.
7) ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಮಣಿಸಿದ್ದು.
8) ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸಿದ್ದು
9) ನ್ಯೂಜಿಲೆಂಡ್ ವಿರುದ್ಧ 0-3 ಅಂತರದ ಹೀನಾಯ ಸೋಲು
10) ಆಸ್ಟ್ರೇಲಿಯಾ ವಿರುದ್ಧ 1-3 ಅಂತರದ ಸೋಲು
ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಸಾಧನೆ ಮಿಶ್ರಫಲ.

ರೋಹಿತ್ ಶರ್ಮಾ ಗಳಿಸಿದ ರನ್‌ಗಳು ನಾಯಕನಾಗಿ ಪಂದ್ಯಗಳು: 24
ರನ್‌ಗಳು: 1254
ಸರಾಸರಿ: 30.58
100: 4

ಒಬ್ಬ ಆಟಗಾರನಾಗಿ ರೋ ವೈಯಕ್ತಿಕ ಸಾಧನೆ
ಪಂದ್ಯಗಳು: 43
ರನ್‌ಗಳು: 3047
ಸರಾಸರಿ: 46.87
100: 8

ರೋಹಿತ್ ಶರ್ಮಾ ಅಸಂಖ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದು ವೈಟ್ ಬಾಲ್ ಕ್ರಿಕೆಟ್ ನಲ್ಲಿ (ಏಕದಿನ ಪಂದ್ಯಗಳಲ್ಲಿ ಹಾಗಂತ ರೆಡ್ ಬಾಲ್ ಕ್ರಿಕೆಟ್ (ಟೆಸ್ಟ್ ಪಂದ್ಯಗಳಲ್ಲಿ) ನಲ್ಲಿ ಕೂಡಾ ಹಿಟ್ ಮ್ಯಾನ್ ಸಾಧನೆಯಲ್ಲಿ ಅಲ್ಲಗಳೆಯುವಂತಿಲ್ಲ. ಆಕ್ರಮಣಕಾರಿ ಆಟದ ಮೂಲಕ ಭರಪೂರಾ ಮನೋರಂಜನೆ ನೀಡಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ವಿಧಾಯ ಹೇಳಿದ್ದಾರೆ. ಮುಂದಿನ ಬದುಕಿಗೆ ಗುಡ್ ಲಕ್ ರೋ..

-ವಿ.ಭಾ

ShareTweetSendShare
Join us on:

Related Posts

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

by Shwetha
May 30, 2026
0

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ದೀರ್ಘ ಸಾರ್ವಜನಿಕ ಜೀವನದ ಸೇವೆಯನ್ನು ಶ್ಲಾಘಿಸಿದರು. ಸಾಮಾಜಿಕ ನ್ಯಾಯ,...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

by Shwetha
May 30, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೊರಹಾಕಿರುವ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ, ಅವು ಹತ್ತಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಒಬ್ಬ ನಾಯಕನ...

ಹೈಕಮಾಂಡ್ ಅಂಗಳದಲ್ಲಿ ಡಿಕೆಶಿ ಮೌನಂ ಶಕ್ತಿ ಲಕ್ಷಣ : ಸಿಎಂ ಕುರ್ಚಿ ಚರ್ಚೆ ನಡುವೆ ಮಂದಹಾಸದ ಮರ್ಮವೇನು

ದೆಹಲಿಯಲ್ಲಿ ಡಿಕೆಶಿ-ಸಿದ್ದರಾಮಯ್ಯ ಮಹತ್ವದ ಚರ್ಚೆ.. ಇಂದು ಶಾಸಕಾಂಗ ಸಭೆ ಫಿಕ್ಸ್

by Shwetha
May 30, 2026
0

ಕರ್ನಾಟಕ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮಹತ್ವದ ಭೇಟಿ ಸಾಕಷ್ಟು...

ಸನಾತನ ಧರ್ಮ ಅಂದ್ರೆ ಏನು ಗೊತ್ತಾ? ಉದಯನಿಧಿ ಸ್ಟಾಲಿನ್ ಗೆ ಪಾಠ ಮಾಡಿದ ನಟ ಅರ್ಜುನ್ ಸರ್ಜಾ

ಸನಾತನ ಧರ್ಮ ಅಂದ್ರೆ ಏನು ಗೊತ್ತಾ? ಉದಯನಿಧಿ ಸ್ಟಾಲಿನ್ ಗೆ ಪಾಠ ಮಾಡಿದ ನಟ ಅರ್ಜುನ್ ಸರ್ಜಾ

by Shwetha
May 30, 2026
0

ತಮಿಳುನಾಡಿನ ರಾಜಕೀಯ ಅಂಗಳದಲ್ಲಿ ಸನಾತನ ಧರ್ಮದ ಕುರಿತಾದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡುತ್ತಿರುವ ಸರಣಿ...

ಡಿ.ಕೆ. ಶಿವಕುಮಾರ್ ತಣ್ಣನೆಯ ತಂತ್ರದ ಮುಂದೆ ಸೋತ ಸಿದ್ದು ಬಣದ ಅಬ್ಬರದ ಸೌಂಡ್

ಡಿ.ಕೆ. ಶಿವಕುಮಾರ್ ತಣ್ಣನೆಯ ತಂತ್ರದ ಮುಂದೆ ಸೋತ ಸಿದ್ದು ಬಣದ ಅಬ್ಬರದ ಸೌಂಡ್

by Shwetha
May 30, 2026
0

ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯ ಎಂಬ ಶಕ್ತಿಯುತ ನಾಯಕನ ಯುಗಾಂತ್ಯಕ್ಕೆ ಅವರ ವಿರೋಧಿಗಳಿಗಿಂತಲೂ ಅವರ ಸ್ವಂತ ಆಪ್ತರೇ ಕಾರಣವಾದರೇ ಎಂಬ ಬಲವಾದ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram