ನವದೆಹಲಿ: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಮಹತ್ವದ ತೀಪು9 28 ವರ್ಷಗಳ ಬಳಿಕ ಪ್ರಕಟಗೊಂಡಿದ್ದು, ಬಾಬ್ರಿ ಮಸೀದಿ ಕೆದವಿದ್ದು ಆಕಸ್ಮಿಕ. ಸಂಚು ಇಲ್ಲ ಎಂದು ಲಖನೌ ಸಿಬಿಐ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಬಾಬ್ರಿ ತೀರ್ಪಿನ ಪ್ರಮುಖ ಅಂಶಗಳು
1. ಬಾಬ್ರಿ ಮಸೀದಿ ಕೆಡವಲು ಯಾವುದೇ ಸಂಚು ರೂಪಿಸಿರಲಿಲ್ಲ.
2. ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ ಸಂಚು ರೂಪಿಸಿರಲಿಲ್ಲ.
3. ಅಡ್ವಾಣಿ ಪಾತ್ರ ಮಸೀದಿ ಕೆಡವುದರ ಹಿನ್ನೆಲೆಯಲ್ಲಿ ಇರಲಿಲ್ಲ
4. ಬಾಬ್ರಿ ಮಸೀದಿ ಧ್ವಂಸವಾದದ್ದು ಆಕಸ್ಮಿಕವಾಗಿತ್ತು.
5. ಅದೊಂದು ಅಚಾನಕ್ ಘಟನೆಯಾಗಿದೆ. ಪೂರ್ವ ನಿಯೋಜಿತ ಅಲ್ಲ
6. ಆರೋಪಿಗಳ ವಿರುದ್ದ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.
7. ಆರೋಪಿಗಳು ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ
8. ವಿಡಿಯೋಗಳ ನೆಗೆಟಿವ್ ಸಲ್ಲಿಸಲು ಸಿಬಿಐ ವಿಫಲ
9. 32 ಅರೋಪಿಗಳ ವಿರುದ್ಧ ಬಲವಾದ ಸಾಕ್ಷಿಗಳಿಲ್ಲ
10. ಸಿಬಿಐ ಕೊಟ್ಟಿದ್ದು ತಿರುಚಿದ ವಿಡಿಯೋಗಳು
11. ಸಿಬಿಐ ನೀಡಿದ ಫೋಟೋಗಳು ಸ್ವೀಕಾರಕ್ಕೆ ಅರ್ಹವಲ್ಲ
12 ಮಸೀದಿ ಧ್ವಂಸಕ್ಕೂ ಮುನ್ನ ಯಾರೋಬ್ಬರೂ ಪ್ರಚೋದನಾಕಾರಿ ಹೇಳಿಕೆ ನೀಡಿರಲಿಲ್ಲ
13. ಅಡ್ವಾಣಿ ಸೇರಿ ಎಲ್ಲಾ ಅರೋಪಿಗಳ ಮಸೀದಿ ಕೆಡವುದನ್ನು ತಡೆಯಲು ಯತ್ನಿಸಿದರು.
ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿದ್ದ ಬಿಜೆಪಿಯ ಎಲ್ಲಾ ನಾಯಕರನ್ನು ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ. ಎಲ್.ಕೆ ಅಡ್ವಾಣಿ, ಉಮಾಭಾರತಿ, ಕಲ್ಯಾಣ್ ಸಿಂಗ್, ಮುರಳಿ ಮನೋಹರ ಜೋಷಿ ಸೇರಿದಂತೆ ಎಲ್ಲಾ 31 ಮಂದಿ ಆರೋಪ ಮುಕ್ತರಾಗಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.