ಮುರಿದ ಕೃಷ್ಣ ವಿಗ್ರಹದ ತೋಳು, ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ಬಂದ ಅರ್ಚಕ
ಪೂಜಾರಿಯೊಬ್ಬರು ಭಗವಾನ್ ಕೃಷ್ಣನ ವಿಗ್ರಹದ ಮುರಿದ ತೋಳಿಗೆ ಬ್ಯಾಂಡೇಜ್ ಮಾಡುವಂತೆ ವಿನಂತಿಸಿಕೊಂಡು ಅಳುತ್ತಾ ಆಸ್ಪತ್ರೆಗೆ ಬಂದ ಘಟನೆ ಶುಕ್ರವಾರ ಆಗ್ರಾದ ಜಿಲ್ಲೆಯಲ್ಲಿ ನಡೆದಿದೆ. ಭಕ್ತನ ವಿಚಿತ್ರ ವರ್ತನೆ ನೋಡಿ ಆಸ್ಪತ್ರೆ ಸಿಬ್ಬಂಧಿ ದಿಗ್ಭ್ರಮೆಗೊಂಡಿದ್ದಾರೆ. ಬೆಳಿಗ್ಗೆ ವಿಗ್ರಹಕ್ಕೆ ಸ್ನಾನ ಮಾಡಿಸುವಾಗ ಆಕಸ್ಮಿಕವಾಗಿ ಕೃಷ್ಣನ ತೋಳು ಮುರಿದಿದೆ.ಮೊದಲು ಹಿಂಜರಿದ ಆಸ್ಪತ್ರೆಯ ಸಿಬ್ಬಂದಿ ನಂತರ, ಶ್ರೀ ಕೃಷ್ಣನ ಹೆಸರನ್ನ ನೋಂದಾಯಿಸಿಕೊಂಡರು ಮತ್ತು ವಿಗ್ರಹದ ತೋಳಿಗೆ ಬ್ಯಾಂಡೇಜ್ ಮಾಡಿದ್ದಾರೆ. ಗೋಪಾಲನ ಬಾಲ್ಯ ರೂಪದ ವಿಗ್ರಹದೊಂದಿಗೆ ಪೂಜಾರಿ ಅಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅರ್ಚಕರು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ತಲುಪಿ, ಆಸ್ಪತ್ರೆಯ ಸಿಬ್ಬಂದಿ ವಿಗ್ರಹಕ್ಕೆ ಒಲವು ತೋರುವಂತೆ ಒತ್ತಾಯಿಸಿದರು. ‘ಬೆಳಿಗ್ಗೆ ಪೂಜೆ ಸಲ್ಲಿಸಿ ಶ್ರೀಗಳ ಮೂರ್ತಿಗೆ ಸ್ನಾನ ಮಾಡುವಾಗ ವಿಗ್ರಹ ಜಾರಿ ಬಿದ್ದು ಕೈ ಮುರಿದಿದೆ’ ಎಂದು ಅರ್ಚಕ ಲೇಖ್ ಸಿಂಗ್ ಹೇಳಿದ್ದಾರೆ.
ಲೇಖ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಅರ್ಜುನ್ ನಗರದ ಖೇರಿಯಾ ಮೋಡ್ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. “ಆಸ್ಪತ್ರೆಯಲ್ಲಿ ನನ್ನ ವಿನಂತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ನಾನು ನನ್ನ ದೇವರಿಗಾಗಿ ಅಳಲು ಶುರುಮಾಡಿದೆ” ಎಂದು ಪೂಜಾರಿ ತಿಳಿಸಿದರು.