ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಪತಿಯು ಆತ್ಮಹತ್ಯೆ
ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಕೇಳಿ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಕೆಂಪಸಾಗರ ಗ್ರಾಮದ ವರಲಕ್ಷ್ಮಿ ಮತ್ತು ಮುನಿರಾಜು ಆತ್ಮ ಹತ್ಯೆ ಮಾಡಿಕೊಂಡಿರುವ ದುರ್ಧೈವಿಗಳು
ಮೃತ ಮುನಿರಾಜು ತಮ್ಮ ಹತ್ತಿರದ ಸಂಬಂಧಿ, ಅದೇ ಗ್ರಾಮದ ವರಲಕ್ಷ್ಮಿ ಅವರನ್ನು 4 ತಿಂಗಳ ಹಿಂದೆ ಮದುವೆಯಾಗಿದ್ದರು. ಶನಿವಾರ ಬೆಳಗ್ಗೆ ಪತ್ನಿ ವರಲಕ್ಷ್ಮೀ ತಾಯಿ ಮನೆಗೆ ಹೋಗಿದ್ದರು. ತಿಂಡಿ ಮಾಡಿಕೊಡಲು ಮನೆಗೆ ಬಾ ಎಂದು ಮುನಿರಾಜು ಪತ್ನಿಯನ್ನು ಕರೆದು ಬಂದಿದ್ದಾರೆ, ನಂತರ ತಮ್ಮ ಚಿಲ್ಲರೆ ಅಂಗಡಿ ತೆರೆಯಲು ಮುನಿರಾಜು ಬಂದಿದ್ದಾರೆ. ಈ ಸಮಯದಲ್ಲಿ ಮನೆಗೆ ಬಂದ ಪತ್ನಿ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ.
.ಗ್ರಾಮಸ್ಥರು ಕೂಡಲೇ ವಿಷಯವನ್ನು ಮುನಿರಾಜುಗೆ ತಿಳಿಸಿದ್ದಾರೆ. ಪತ್ನಿ ನೇಣಿಗೆ ಶರಣಾಗಿದ್ದ ವಿಷಯ ತಿಳಿಯುತ್ತಲೇ ಗಾಬರಿಯಾದ ಮುನಿರಾಜು, ಅಲ್ಲಿಯೇ ವಿಷ ಸೇವಿಸಿ ತೋಟಕ್ಕೆ ಹೋಗಿ ಅಲ್ಲಿ ಮರಕ್ಕೆ ನೇಣು ಬಿಗಿದುಕೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಕೆಂಪಸಾಗರದ ಮುನಿರಾಜು (26), ವರಲಕ್ಷ್ಮಿ(22) ಈ ದುರಂತ ಅಂತ್ಯ ಕಂಡಿದ್ದಾರೆ. ವರಲಕ್ಷ್ಮಿಯವರು ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.